ತಪ್ಪಿದ ಬಾರಿ ಅನಾಹುತ,ಏಳು ಮೀನುಗಾರರ ರಕ್ಷಣೆ

Share

Advertisement
Advertisement
Advertisement

ಕುಂದಾಪುರ:ಗಂಗೊಳ್ಳಿಯಿಂದ 15 ನಾಟಿಕಲ್ ಮೈಲು ದೂರದಲ್ಲಿ ಆಳಸಮುದ್ರ ಮೀನುಗಾರಿಕೆ ಮಾಡುತ್ತಿದ್ದ ಸಮಯದಲ್ಲಿ ಬೋಟ್‍ನೊಳಗೆ ನೀರು ನುಗ್ಗಿದ ಪರಿಣಾಮ ಅಪಾಯಕ್ಕೆ ಸಿಲುಕಿದ ಏಳು ಮೀನುಗಾರರನ್ನು ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಕೋಸ್ಟ್ ಗಾರ್ಡ್ ಕಂಟ್ರೋಲ್ ತಂಡದವರು ಹಾಗೂ ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಬುಧವಾರ ನಡೆದಿದೆ.
ಉತ್ತರ ಕನ್ನಡ ಮೂಲದ ಕಿರಣ ನಾರಾಯಣ ಹರಿಕಂತ್ರ,ದೇವರಾಜು ಈಶ್ವರ ಹರಿಕಂತ್ರ,ಅರವಿಂದ ಗಣಪತಿ ಹರಿಕಂತ್ರ,ನಾಗೇಶ ಗಣಪಯ್ಯ ಹರಿಕಂತ್ರ,ದಿಲ್‍ಸಿಂಗ್ ಕಾಲು,ಚಂದ್ರ ಶೇಖರ ದುರ್ಗಾ ಮೊಗೇರ,ಸೋಮೇಶ್ವರ ಹರಿಕತಂತ್ರ ರಕ್ಷಿಸಲ್ಪಟ್ಟವರು.
ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭ ಬೋಟ್‍ನ ಇಂಜಿನ್ ಕೊಠಡಿ ವಿಭಾಗದಲ್ಲಿ ರಂಧ್ರ ಉಂಟಾಗಿದ್ದರಿಂದ ಭಾರಿ ಪ್ರಮಾಣದಲ್ಲಿ ನೀರು ಒಳ ನುಗ್ಗಿದೆ.ನೀರು ಒಳ ನುಗ್ಗಿದ್ದ ಪರಿಣಾಮ ಬೋಟ್ ಮುಳುಗುವ ಹಂತಕ್ಕೆ ತಲುಪಿದೆ.ಅಪಾಯದ ಗಂಭೀರತೆಯನ್ನು ಅರಿತ ಮೀನುಗಾರರು ತಕ್ಷಣ ಗಂಗೊಳ್ಳಿ ಕರಾವಳಿ ಕಾವಲು ಪಡೆ ಪೆÇಲೀಸ್ ಠಾಣೆಗೆ ದೂರವಾಣಿ ಮೂಲಕ ಕರೆ ಮಾಡಿದ್ದಾರೆ.ಅದೆ ಸಮಯದಲ್ಲಿ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಕೋಸ್ಟ್ ಗಾರ್ಡ್ ಕಂಟ್ರೋಲ್ ತಂಡದವರು ಸ್ಥಳಕ್ಕೆ ಧಾವಿಸಿ ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಿಸಿ ಸುರಕ್ಷಿತವಾಗಿ ದಡವನ್ನು ತಲುಪಿಸಿದ್ದಾರೆ.

Advertisement


Share

Leave a comment

Your email address will not be published. Required fields are marked *

You cannot copy content of this page