ಆಲೂರು-ಇಂಬಳಹೊಳೆ ರಸ್ತೆ ಅಭಿವೃದ್ಧಿಗೆ ಆಗ್ರಹ

Share

Advertisement
Advertisement
Advertisement


ಕುಂದಾಪುರ:ಬೈಂದೂರು ವಿಧಾನಸಭೆ ಕ್ಷೇತ್ರದ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಲೂರು ಇಂಬಳಹೊಳೆಯಿಂದ ಬಡಾಕೆರೆ ನಾವುಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇಂಬಳಹೊಳೆ ಎಂಬಲ್ಲಿ ಸುಮಾರು 500 ಮೀಟರ್ ವರೆಗೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ.ಕಚ್ಚಾ ರಸ್ತೆಯಲ್ಲಿ ಮಳೆಗಾಲದಲ್ಲಿ ಸಾಗುವುದೇ ದುಸ್ತರವಾಗಿದ್ದು ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಾಡಂಚಿನ ಪ್ರದೇಶವಾದ ಆಲೂರು ಇಂಬಳಹೊಳೆ ಮುಖ್ಯ ರಸ್ತೆಯು ಆಲೂರು ಪೇಟೆ ಮತ್ತು ನಾವುಂದ-ಬಡಾಕೆರೆಗೆ ಸಂಪರ್ಕವನ್ನು ಕಲ್ಪಿಸುತ್ತದೆ.ಆಲೂರು ಇಂಬಳ ಹೊಳೆ ರಸ್ತೆಯಲ್ಲಿ ದಿನಂಪತ್ರಿ ನೂರಾರು ವಾಹನಗಳು ಸಂಚರಿಸುತ್ತವೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕ್ಕೆನ್ನುವುದು ಜನರ ಬೇಡಿಕೆ ಆಗಿದೆ.

Advertisement


Share

Leave a comment

Your email address will not be published. Required fields are marked *

You cannot copy content of this page