ಶ್ರೀಮೂಕಾಂಬಿಕಾ ದೇವಳ ಪ್ರೌಢಶಾಲೆ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ
![](https://kundapurtimes.com/wp-content/uploads/2023/12/1-1-1024x423.jpg)
![](https://kundapurtimes.com/wp-content/uploads/2023/12/S-2-1024x576.jpg)
![](https://kundapurtimes.com/wp-content/uploads/2023/12/S-3-1024x576.jpg)
![](https://kundapurtimes.com/wp-content/uploads/2023/12/S-4-1024x576.jpg)
![](https://kundapurtimes.com/wp-content/uploads/2023/12/NAGA-1024x461.jpg)
![](https://kundapurtimes.com/wp-content/uploads/2023/12/WhatsApp-Image-2023-12-25-at-9.53.12-PM-1024x461.jpeg)
ಕುಂದಾಪುರ:ಶ್ರೀಮೂಕಾಂಬಿಕಾ ದೇವಳದ ಹೊಸೂರು ಪ್ರೌಢಶಾಲೆಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮ ಸೋಮವಾರ ವಿಜೃಂಭಣೆಯಿಂದ ನಡೆಯಿತು.ಬೈಂದೂರು ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ವಸ್ತು ಸಂಗ್ರಾಲಯವನ್ನು ಹಾಗೂ ಗ್ರಾಮ ಪಂಚಾಯತ್ ಸದಸ್ಯ ರಾಘವೇಂದ್ರ ಪೂಜಾರಿ ಚಿತ್ರಕಲಾ ಪ್ರದರ್ಶನ ಕೇಂದ್ರವನ್ನು ಉದ್ಘಾಟಿಸಿದರು.ಶ್ರೀಮಹಾಲಿಂಗೇಶ್ವರ ದೇವಸ್ಥಾನ ಕದಳಿ ಅರ್ಚಕರಾದ ಶ್ರೀಧರ ಉಡುಪ ಅವರು ಭೋಜನ ಶಾಲೆಯನ್ನು ಉದ್ಘಾಟಿಸಿದರು.ಮಾಜಿ ತಾ.ಪಂ ಸದಸ್ಯ ನಾಗಪ್ಪ ಕೊಠಾರಿ ಅವರು ವಿಜ್ಞಾನ ರಂಗೋಲಿ ಕೊಠಡಿಯನ್ನು ಉದ್ಘಾಟಿಸಿ ಶುಭಹಾರೈಸಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಒಂದು ಶಾಲೆ ಸಕಲ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಹೊಂದಬೇಕಾದರೆ ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಪಾತ್ರ ಅಪಾರವಾದದು ಆಗಿದೆ.ಆವೊಂದು ನಿಟ್ಟಿನಲ್ಲಿ ಇಂದು ಹೊಸಾರು ಶಾಲೆಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮ ಬಹಳಷ್ಟು ವಿಜೃಂಭಣೆಯಿಂದ ನಡೆದಿದೆ ಎಂದು ಹೇಳಿದರು.ಶಾಲೆಯ ಏಳಿಗೆಗೆ ಶ್ರಮಿಸಿದವರಿಗೆ ಭಾವನಾತ್ಮಕ ರೀತಿಯಲ್ಲಿ ಬೆಲೆ ಕಟ್ಟಿರುವುದು ಶ್ಲಾಘನೀಯ ಕೆಲಸವಾಗಿದೆ ಕನ್ನಡ ಶಾಲೆಗಳ ಉಳಿವಿಗೆ ಗ್ರಾಮಸ್ಥರ ಪಾತ್ರ ಮಹತ್ವದಾಗಿದೆ.ಶಾಲೆ ಎಂದರೆ ದೇವಾಲಯ ವಿದ್ದಂತೆ ಹೊಸೂರು ಶಾಲೆ ಕುಂದಾಪುರ ತಾಲೂಕಿನಲ್ಲೆ ಮಾದರಿ ಶಾಲೆ ಆಗಿದೆ ಎಂದರು.
![](https://kundapurtimes.com/wp-content/uploads/2023/12/SSSSS-1024x461.jpg)
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕದಳಿ ಆಡಳಿತ ಮುಕ್ತೇಸರರಾದ ರಮಾನಂದ ಮಧ್ಯಸ್ಥ ಅವರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ,ಆಗಿನ ಕಾಲದಲ್ಲಿ ಕೊಟ್ಟ ಪರಿಶ್ರಮದಿಂದ ಇಂದು ಸಂತೋಷವನ್ನು ಕಾಣುವಂತೆ ಆಗಿದೆ.ಕನ್ನಡ ಶಾಲೆಗಳಲ್ಲಿ ಓದಿದ ಮಕ್ಕಳು ಇಂದು ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಾ ಇರುವುದು ಮಾತ್ರ ಭಾಷಾ ಶಿಕ್ಷಣಕ್ಕೆ ಕೊಟ್ಟ ಮನ್ನಣೆ ಯಿಂದಾಗಿ ಎಂದು ಹೇಳಿದರು,ಇಂಗ್ಲಿಷ್ ಶಿಕ್ಷಣದ ಮೇಲಿನ ವ್ಯಾಮೋಹವನ್ನು ತೊರೆದು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಲು ಪೆÇೀಷಕರು ಮುಂದಾಗಬೇಕೆಂದರು.
ಹೊಸೂರು ಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಎಲ್ ಜಯರಾಮ ಶೆಟ್ಟಿ ಮಾತನಾಡಿ,ರಜತ ಸಂಭ್ರಮ ಕಾರ್ಯಕ್ರಮ ಎನ್ನುವುದು ಸಂಭ್ರಮಕ್ಕೆ ಮಾತ್ರ ಸೀಮಿತವಾಗದೆ ಶಾಶ್ವತವಾಗಿ ಉಳಿಯಬೇಕು ಎನ್ನುವ ದೃಷ್ಟಿಕೊನ ದಿಂದ ಹಳೆ ವಿದ್ಯಾರ್ಥಿ ಸಂಘದ ಎಲ್ಲಾ ಪದಾಧಿಕಾರಿಗಳ ಆಶಯವಾಗಿತ್ತು.ಆ ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ 16 ಲಕ್ಷ.ರೂ ವೆಚ್ಚದಲ್ಲಿ ಶಾಲಾ ವಾಹನವನ್ನು ಕೊಡುಗೆ ಆಗಿ ನೀಡಲಾಗಿದೆ.ಸ್ವಾಗತ ಗೋಪುರ ನಿರ್ಮಾಣ ಸಹಿತ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಶುದ್ಧ ನೀರಿನ ಘಟಕವನ್ನು ಸ್ಥಾಪನೆ ಮಾಡಲಾಗಿದೆ ಎಂದರು.ಶಾಲಾಭಿವೃದ್ಧಿಗೆ ಕೈ ಜೋಡಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,34 ವಿದ್ಯಾರ್ಥಿಗಳೊಂದಿಗೆ ಆರಂಭಗೊಂದ ಇವೊಂದು ಶಾಲೆಯಲ್ಲಿ ಇಂದು ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಾ ಇದ್ದಾರೆ.ರಜತ ಮಹೋತ್ಸವ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ನಮ್ಮ ಶಾಲೆಯ ಅಭಿವೃದ್ಧಿಗೆ ಶಾಲೆಯ ಹಳೆ ವಿದ್ಯಾರ್ಥಿ ಸಂಘ ದವರು ಮತ್ತು ದಾನಿಗಳು,ಗ್ರಾಮಸ್ಥರ ಸಹಕಾರ ಅಮೂಲ್ಯವಾದದು ಎಂದು ಸ್ಮರಿಸಿದರು.
![](https://kundapurtimes.com/wp-content/uploads/2023/12/SSS-1024x461.jpg)
ಇಡೂರು ಕುಂಜ್ಞಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ನಿಡೂಟಿ,ಸಿ.ಎ ಬ್ಯಾಂಕ್ ವಂಡ್ಸೆ ಉಪಾಧ್ಯಕ್ಷ ಜಗನ್ನಾಥ ಶೆಟ್ಟಿ,ಪಂಚಾಯಿತಿ ಸದಸ್ಯೆ ಸಿಂಗಾರಿ ಉದಯ ನಾಯ್ಕ್,ಮಮತಾ ಗಣೇಶ ಶೆಟ್ಟಿ ಮೇಲಾರಿಕಲ್ಲು,ಸಮೂಹ ಸಂಪನ್ಮೂಲ ಕೇಂದ್ರ ಕೆರಾಡಿ ಸಿಆರ್ಪಿ ನಾಗರಾಜ ಶೆಟ್ಟಿ,ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ,ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರ ಶೆಟ್ಟಿ ಸ್ವಾಗತಿಸಿದರು.ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಅನುಷಾ ಶೆಟ್ಟಿ ಮತ್ತು ಶ್ವೇತಾ ಶೆಟ್ಟಿ ನಿರೂಪಿಸಿದರು.ಶಿಕ್ಷಕ ರವಿಶಂಕರ ವಂದಿಸಿದರು.ಕಲಿಕೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ವಿಶಿಷ್ಟ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಮತ್ತು ಅಡುಗೆ ತಯಾರಕರನ್ನು ಸನ್ಮಾನಿಸಲಾಯಿತು.ನಾನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ಜರುಗಿತು.
![](https://kundapurtimes.com/wp-content/uploads/2023/12/SSSSSSSS-1024x576.jpg)
![](https://kundapurtimes.com/wp-content/uploads/2023/12/SSSSSSS-1024x576.jpg)
![](https://kundapurtimes.com/wp-content/uploads/2023/12/S-8-1024x461.jpg)
ಶ್ರೀಮೂಕಾಂಬಿಕಾ ದೇವಳದ ಪ್ರೌಢಶಾಲೆ ಹೊಸೂರು ಹಳೆವಿದ್ಯಾರ್ಥಿ ಸಂಘದ ವತಿಯಿಂದ ಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 16 ಲಕ್ಷ.ರೂ ಮೌಲ್ಯದ ಶಾಲಾ ವಾಹನವನ್ನು ಕೊಡುಗೆ ಆಗಿ ನೀಡಿದರು.
![](https://kundapurtimes.com/wp-content/uploads/2023/12/WhatsApp-Image-2023-12-25-at-9.53.12-PM-1-1-1024x461.jpeg)
![](https://kundapurtimes.com/wp-content/uploads/2023/12/S-9-1024x461.jpg)
![](https://kundapurtimes.com/wp-content/uploads/2023/12/SSSSS-1-1024x461.jpg)