ಮಾಟುಬಲೆ ಮೀನುಗಾರರ ಕ್ರಿಕೆಟ್ ಪಂದ್ಯಾಟ ಸಮಾರೋಪ ಸಮಾರಂಭ
![](https://kundapurtimes.com/wp-content/uploads/2024/05/WhatsApp-Image-2024-05-06-at-7.38.29-PM-1024x576.jpeg)
![](https://kundapurtimes.com/wp-content/uploads/2024/05/WhatsApp-Image-2024-05-06-at-7.38.28-PM-1024x485.jpeg)
ಕುಂದಾಪುರ:ಕರಾವಳಿ ಮಿತ್ರ ಮಂಡಳಿ ಮರವಂತೆ ಅದರ 25ನೇ ವಾರ್ಷಿಕೋತ್ಸವ ಅಂಗವಾಗಿ ಮರವಂತೆಯಲ್ಲಿ ಎರಡು ದಿನಗಳ ಕಾಲ ನಡೆದ ಮಾಟುಬಲೆ ಮೀನುಗಾರರ ಕ್ರಿಕೆಟ್ ಪಂದ್ಯಾಟ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು.
ಶ್ರೀರಾಮ ಮಂದಿರ ಮರವಂತೆ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ವಾಸುದೇವ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಸುರೇಶ್ ಖಾರ್ವಿ,ಕಾರ್ಯದರ್ಶಿ ಈಶ್ವರ ಖಾರ್ವಿ ಹಾಗೂ ಮಾಜಿ ಅಧ್ಯಕ್ಷರಾದ ಸೋಮಯ್ಯ ಖಾರ್ವಿ,ಪಿ ಚಂದ್ರ ಖಾರ್ವಿ ಮತ್ತು ಪ್ರೆÇೀತ್ಸಾಹಕರಾದ ಡಾ.ನಾಗರಾಜ ಖಾರ್ವಿ,ಚಾವನ ಆನಂದ ಖಾರ್ವಿ,ಕರಾವಳಿ ಮಿತ್ರ ಮಂಡಳಿ ಮರವಂತೆ ಕಾರ್ಯದರ್ಶಿ ರಮೇಶ್.ಕೆ,ಬನರಾಜ್ ಖಾರ್ವಿ,ಶೇಖರ ಖಾರ್ವಿ,ನಾಗರಾಜ ಖಾರ್ವಿ ಉಪಸ್ಥಿತರಿದ್ದರು.ಕರಾವಳಿ ಮಿತ್ರ ಮಂಡಳಿ ಮರವಂತೆ ಅಧ್ಯಕ್ಷ ಲೋಕೇಶ್ ಖಾರ್ವಿ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.ಮಾಟುಬಲೆ ಮೀನುಗಾರರ ಕ್ರಿಕೆಟ್ ಪಂದ್ಯಾಟದಲ್ಲಿ ಶ್ರೀ ಅಖೀಲೇಶ್ವರಿ ತಂಡ ಪ್ರಥಮ ಸ್ಥಾನ,ನವರತ್ನ ತಂಡ ದ್ವೀತಿಯ ಸ್ಥಾನ,ಶ್ರೀ ಆಧಿಶಕ್ತಿ (ಕನಕಶ್ರೀ) ತೃತೀಯ ಸ್ಥಾನ ಹಾಗೂ ಸ್ವರ್ಣ ಯಕ್ಷೇ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.ವಿಕ್ಷಕ ವಿವರಣೆಕಾರದ ಪ್ರಮೋದ್,ಪ್ರಕಾಶ ಖಾರ್ವಿ ಅವರನ್ನು ಸನ್ಮಾನಿಸಲಾಯಿತು