ಸಂಜೀವಿನಿ ಕಜೆ ಅಕ್ಕಿ ಮಾರುಕಟ್ಟೆಗೆ ಬಿಡುಗಡೆ
ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮೃದ್ಧಿ ಸಂಜೀವಿನಿ ಒಕ್ಕೂಟದ ಸದಸ್ಯರು ಹಡಿಲು ಭೂಮಿಯಲ್ಲಿ ಬೆಳೆದ ಅಕ್ಕಿಯನ್ನು ಸಂಜೀವಿನಿ ಕಜೆ ಅಕ್ಕಿ ಎನ್ನುವ ಹೆಸರಿನ ಮೂಲಕ ಗುರುವಾರ ಗುಜ್ಜಾಡಿ ಪಂಚಾಯಿತಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
ಗುಜ್ಜಾಡಿ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಕುಂದಾಪುರ ಇಒ ಶಶಿಧರ್,ಜಿಲ್ಲಾ ವ್ಯವಸ್ಥಾಪಕರು ಕೃಷಿ ಎನ್ಎಲ್ಆರ್ಎಂ ಸೌಮ್ಯ,ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಯತೀಶ್,ತಾಲೂಕು ಒಕ್ಕೂಟದ ಅಧ್ಯಕ್ಷೆ ವಿಜಯ ಗಾಣಿಗ,ಸಮೃದ್ಧಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರೆನಿಟಾ,ಪಂಚಾಯತ್ ಸದಸ್ಯೆ ಜೆಸಿಂತಾ,ತಾಲ್ಲೂಕು ಮೇಲ್ವಿ ಚಾರಕಿ ಮಮತಾ,ಬಿಆರ್ಪಿಇಪಿ ಸುμÁ್ಮ,ತಾಲೂಕು ಒಕ್ಕೂಟದ ಕಾರ್ಯದರ್ಶಿ ಪ್ರೇಮ ಹಕ್ಲಾಡಿ,ಕೋಶಾಧಿಕಾರಿ ಸುಜಾತ ಶೆಟ್ಟಿ ಉಪಸ್ಥಿತರಿದ್ದರು.ಎಂ.ಬಿ.ಕೆ ಪ್ರಿಯಾಂಕಾ ಸ್ವಾಗತಿಸಿದರು.ಪ್ರಮೀಳಾ ನಿರೂಪಿಸಿದರು.ಶಶಿಕಲಾ ವಂದಿಸಿದರು.