ನಾವುಂದ-ಸಾಲ್ಬುಡದಲ್ಲಿ ನೆರೆ ಇಳಿತ
ಬೈಂದೂರು:ನೆರೆ ಬಾಧಿತ ಪ್ರದೇಶವಾದ ನಾವುಂದ ಗ್ರಾಮದ ಸಾಲ್ಬುಡದಲ್ಲಿ ಗುರುವಾರ ಕಾಣಿಸಿಕೊಂಡಿದ್ದ ನೆರೆ ಶುಕ್ರವಾರ ಇಳಿಮುಖವಾಗಿದೆ.ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿದ ಬಾರಿ ಮಳೆಗೆ ಸೌಪರ್ಣಿಕಾ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗಿದ್ದರಿಂದ ನಾವುಂದ ಸಾಲ್ಬುಡದಲ್ಲಿ ನೆರೆ ನೀರಿನಿಂದ ಕೃಷಿ ಭೂಮಿಗಳು ಮುಳುಗಿದ್ದವು.