ತ್ರಾಸಿ:ಯೋಗ ಶಿಬಿರ ಉದ್ಘಾಟನಾ ಕಾರ್ಯಕ್ರಮ

Share

Advertisement
Advertisement
Advertisement

ಕುಂದಾಪುರ:ಪ್ರತಿ ನಿತ್ಯ ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಯೋಗ ಬಲ್ಲವನು ರೋಗಮುಕ್ತ ಜೀವನವನ್ನು ಸಾಗಿಸಲು ಸಾಧ್ಯವಿದೆ ಎಂದು ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ್ ದೇವಾಡಿಗ ಹೇಳಿದರು.
ಆರಾಧ್ಯ ಯೋಗ ಕೇಂದ್ರ ತ್ರಾಸಿ ವತಿಯಿಂದ ಕಲ್ಲಾನಿ ಮಾದರಿ ಹಿ.ಪ್ರಾ. ಶಾಲೆ ತ್ರಾಸಿಯಲ್ಲಿ ಮಂಗಳವಾರ ನಡೆದ ಯೋಗ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಯೋಗ ಗುರು ಸುಬ್ಬಯ್ಯ ದೇವಾಡಿಗ ಅರೆಹೊಳೆ,ಅಥರ್ವ ಯೋಗ ಶಾಲೆ ಮೈಸೂರು ಯೋಗ ಶಿಕ್ಷಕ ರೋಶನ್ ಅರೆಹೊಳೆ,ತ್ರಾಸಿ ಗ್ರಾ.ಪಂ ಸದಸ್ಯ ವಿಜಯ್ ಪೂಜಾರಿ,ಪ್ರವೀಣ್ ಮೊಗವೀರ ಗಂಗೊಳ್ಳಿ ಉಪಸ್ಥಿತರಿದ್ದರು.ಸತೀಶ್ ಗಂಗೊಳ್ಳಿ ಸ್ವಾಗತಿಸಿ,ನಿರೂಪಿಸಿದರು.ಆರಾಧ್ಯ ಯೋಗ ಕೇಂದ್ರ ಸಂದೀಪ ಪೂಜಾರಿ ತ್ರಾಸಿ ವಂದಿಸಿದರು.ಈ ಸಂದರ್ಭ ಯೋಗ ಗುರು ಸುಬ್ಬಯ್ಯ ದೇವಾಡಿಗ ಅರೆಹೊಳೆ ಅವರನ್ನು ಸನ್ಮಾನಿಸಲಾಯಿತು.

Advertisement


Share

Leave a comment

Your email address will not be published. Required fields are marked *

You cannot copy content of this page