ಸತ್ಯನಾರಾಯಣ ಪೂಜೆ,ನೂತನ ಕ್ಯಾಲೆಂಡರ್ ಬಿಡುಗಡೆ

ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ ಕಛೇರಿಯಲ್ಲಿ ಸತ್ಯನಾರಾಯಣ ಪೂಜೆ,ಲಕ್ಷ್ಮೀ ಪೂಜೆ ಹಾಗೂ 2025ನೇ ಸಾಲಿನ ಸಂಘದ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ನಡೆಯಿತು.ವೇದ ಮೂರ್ತಿ ನರಸಿಂಹ ಅಡಿಗ ಅವರು ಕ್ಯಾಲೆಂಡರ್ ಬಿಡುಗಡೆಗೊಳಿಸಿ ಶುಭಹಾರೈಸಿದರು.ಸಂಘದ ಅಧ್ಯಕ್ಷೆ ಸವಿತಾ ಖಾರ್ವಿ,ಉಪಾಧ್ಯಕ್ಷೆ ಪೂರ್ಣಿಮಾ ಮೊಗವೀರ,ನಿರ್ದೇಶಕರಾದ ಶೈಲಾ ಖಾರ್ವಿ ಮರವಂತೆ,ಸೀತಾ ಖಾರ್ವಿ,ಸುಜಾತ ಪೂಜಾರಿ ನಾವುಂದ,ಗಿರಿಜಾ ಖಾರ್ವಿ,ಆಶಾ ಉಳ್ಳೂರು,ಮುಕಾಂಬು ಖಾರ್ವಿ ಬಡಾಕೆರೆ,ನಬೀಸಾ ನಾವುಂದ,ಲೆಕ್ಕಿಗ ರೇಖಾ ಖಾರ್ವಿ,ಸಿಬ್ಬಂದಿಗಳಾದ ಚೈತ್ರಾ ಆಚಾರ್ಯ ಉಳ್ಳೂರು,ಹರ್ಷ ಖಾರ್ವಿ ಮರವಂತೆ ಉಪಸ್ಥಿತರಿದ್ದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶ್ರೀನಿವಾಸ ಅಡಿಗ […]

ಹವ್ಯಾಸಿ ಯಕ್ಷಗಾನ ಕಲಾವಿದ ರವೀಂದ್ರ ಆಚಾರ್ಯ ನಿಧನ

ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಜಾಜಿಮಕ್ಕಿ ನಿವಾಸಿಯಾಗಿರುವ ಹವ್ಯಾಸಿ ಯಕ್ಷಗಾನ ಕಲಾವಿದ ಯಕ್ಷ ಪೋಷಕ,ಖ್ಯಾತ ದಾರು ಶಿಲ್ಪಿ ರವೀಂದ್ರ ಆಚಾರ್ಯ ಮುಳ್ಳಿಕಟ್ಟೆ (57) ಅವರು ತೀವೃ ತರಹದ ಹೃದಯಘಾತದಿಂದ ಶುಕ್ರವಾರ ನಿಧನರಾದರು.ಅಂಬಾದೇವಿ ಯಕ್ಷಗಾನ ಕಲಾಸಂಘ ಗಾಣದಮಕ್ಕಿ ಅದರ ಸಕ್ರೀಯ ಕಲಾವಿದರಾಗಿರುವ ರವೀಂದ್ರ ಆಚಾರ್ಯ ಅವರು ಹಲವಾರು ಪ್ರಸಂಗಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.ಯಕ್ಷಗಾನ ಪ್ರದರ್ಶನವನ್ನು ನಿರಂತರವಾಗಿ ಸಂಘಟಿಸುತ್ತಾ ಬಂದಿರುವ ಅವರು ಬಡಗು ಮತ್ತು ತೆಂಕು ತಿಟ್ಟಿನ ಮೇಳದಲ್ಲಿ ತಮ್ಮದೆ ರೀತಿಯ ಸ್ನೇಹ ಬಳಗವನ್ನು ಹೊಂದಿದ್ದರು.ವಿಶ್ವಕರ್ಮ ಸಹಕಾರಿ ಸಂಘದ […]

ಸೀ ವಿಜ್ಹಿವಲ್ ಅಣುಕು ಕಾರ್ಯಚಾರಣೆ,ನಕಲಿ ಉಗ್ರರ ಟೀಮ್ ಬಂಧನ

ಕುಂದಾಪುರ:ದೇಶದ ಭದ್ರತೆ ಹಿತದೃಷ್ಠಿಯಿಂದ ನೌಕಪಡೆ,ಕಸ್ಟಮ್ಸ್ ಇಲಾಖೆ,ಕರಾವಳಿ ಕಾವಲು ಲೀಸ್ ಪಡೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಬುಧವಾರದಿಂದ 2 ದಿನಗಳ ಕಾಲ 36 ಗಂಟೆಗಳ ಮೂಲಕ ನಡೆದ ಸೀ ವಿಜ್ಹಿವಲ್ ಅಣುಕು ಕಾರ್ಯಚಾರಣೆಯಲ್ಲಿ ಗುರುವಾರ ಮರವಂತೆ ಸಮೀಪ ಕಡಲ ಕಿನಾರೆಯ 6 ಮಾರು ದೂರದಲ್ಲಿ ನಕಲಿ ಉಗ್ರರ ವೇಷದಲ್ಲಿ ಬಂದ ನೌಕಪಡೆಯ ಅಧಿಕಾರಿಗಳನ್ನು ಗಸ್ತುಪಡೆಯಲ್ಲಿದ್ದ ಗಂಗೊಳ್ಳಿ ಕರಾವಳಿ ಕಾವಲು ಪೆÇಲೀಸ್ ಠಾಣೆ ಪಿಎಸ್‍ಐ ಸುಬ್ರಹ್ಮಣ್ಯ ಎಚ್ ಅವರ ನೇತೃತ್ವದ ತಂಡ ಬಂಧಿಸಿ ಮುಂದಿನ ಕ್ರಮ ಕೈಗೊಂಡರು. ಎಎಸ್‍ಐ […]

You cannot copy content of this page