ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ:ರಕ್ಷಕ ಶಿಕ್ಷಕ-ಸಂಘದ ಸಭೆ,ಇಂಗ್ಲೀಷ್ ಸ್ಪೀಕಿಂಗ್ ಕ್ಲಾಸ್ ಉದ್ಘಾಟನೆ

ಕುಂದಾಪುರ:ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿಯಲ್ಲಿ ರಕ್ಷಕ- ಶಿಕ್ಷಕ ಸಂಘದ ಮಹಾಸಭೆ ಸೋಮವಾರ ನಡೆಯಿತು.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ,ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಿಲ್ಟನ್ ರೋಹಿತ್ ಕ್ರಾಸ್ತಾ ಅವರು ಅನುಭವ ಹಾಗೂ ಹಲವು ನೈಜ ನಿದರ್ಶನಗಳ ಮೂಲಕ ಪರಿಣಾಮಕಾರಿ ಕಲಿಕೆಗೆ ಕುರಿತು ಮಾರ್ಗದರ್ಶನ ನೀಡಿದರು.ಇಂಗ್ಲೀಷ್ ಸ್ಪೀಕಿಂಗ್ ಕ್ಲಾಸ್ ‘ನ್ನು ಉದ್ಘಾಟಿಸಲಾಯಿತು.ರಕ್ಷಕ ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಗೌರಿ ಖಾರ್ವಿ, ಸದಸ್ಯರಾಗಿ ಭಾಸ್ಕರ ಖಾರ್ವಿ, ಸುರೇಶ ಖಾರ್ವಿ,ಪ್ರಮಿತ, ರೇಣುಕಾ,ಮರಿಯಾ ಡಿ ಅಲ್ಮೇಡಾ,ಪುಷ್ಪಲತಾ ಆಚಾರ್ಯ,ಶ್ರುತಿ ಖಾರ್ವಿ ಆಯ್ಕೆಯಾದರು.ಜಂಟಿ ಕಾರ್ಯದರ್ಶಿಭ. […]

ಬಿಜಾಡಿ ಸಮುದ್ರ ತೀರದಲ್ಲಿ ಕೊಚ್ಚಿ ಹೋಗಿದ್ದ ಯೋಗೀಶ್ ಮೃತ ದೇಹ ಕಾರವಾರದಲ್ಲಿ ಪತ್ತೆ

ಕುಂದಾಪುರ:ತುಮಕೂರು ಜಿಲ್ಲೆಯ ತಿಪಟೂರು ನಿವಾಸಿ ಯೋಗೀಶ್ ( 22) ಎಂಬಾತ ಯುವಕ ಜೂ.19 ರಂದು ಕುಂದಾಪುರ ತಾಲೂಕಿನ ಬಿಜಾಡಿ ಸಮುದ್ರ ತೀರದಲ್ಲಿ ತನ್ನ ಸ್ನೇಹಿತನೊಂದಿಗೆ ವಿಹಾರ ನಡೆಸುತ್ತಿದ್ದ ಸಮಯದಲ್ಲಿ ಕಡಲ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿ ಸಮುದ್ರದಲ್ಲಿ ನಾಪತ್ತೆಯಾಗಿದ್ದರು.ಯೋಗೀಶ್ ಮೃತ ದೇಹ ಜೂನ್.25 ರ ಮಂಗಳವಾರ ಕಾರವಾರ ಕಡಲ ತೀರದಲ್ಲಿ ಪತ್ತೆಯಾಗಿದೆ.ಮಳೆ ಮತ್ತು ಗಾಳಿ ಅಬ್ಬರದಿಂದ ಬಿಜಾಡಿ ಸಮುದ್ರ ಕಿನಾರೆಯಿಂದ ಯೋಗೀಶ್ ಮೃತ ಶರೀರ ಕಾರವಾರದತ್ತ ತೇಲಿಕೊಂಡು ಹೋಗಿದೆ ಎಂದು ಮುಳುಗು ತಜ್ಞ ದಿನೇಶ್ ಖಾರ್ವಿ ಮತ್ತು […]

ಆಲೂರು – ನೂಜಾಡಿಗೆ ಸರಕಾರಿ ಬಸ್ ಕಲ್ಪಿಸುವಂತೆ ಆಗ್ರಹ

ಕುಂದಾಪುರ:ಸ್ತ್ರೀ ಸಾಮಾನ್ಯರು ಕೂಲಿ ಕಾರ್ಮಿಕರು ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ದಿನಂಪ್ರತಿ ದೂರದ ಕುಂದಾಪುರ ಪೇಟೆಗೆ ತೆರಳುತ್ತಾರೆ.ಜನ ಸಂಖ್ಯೆಗೆ ಅನುಗುಣವಾಗಿ ಆಲೂರು-ಗುಡ್ಡೆಯಂಗಡಿ ಮಾರ್ಗದಲ್ಲಿ ಬಸ್‍ಗಳು ಓಡಾಟ ಮಾಡದೆ ಇದ್ದಿದ್ದರಿಂದ ಹಳ್ಳಿ ಭಾಗದ ಜನರಿಗೆ ಬಹಳಷ್ಟು ತೊಂದರೆ ಆಗುತ್ತಿದೆ.ವಿದ್ಯಾರ್ಥಿಗಳಿಗೆ ಹಾಗೂ ಜನ ಸಾಮಾನ್ಯರಿಗೆ ಆಗುತ್ತಿರುವ ಸಂಕಷ್ಟವನ್ನು ತಪ್ಪಿಸಲು ಆಲೂರು ಗುಡ್ಡೆಯಂಗಡಿ ಭಾಗಕ್ಕೆ ಸರಕಾರಿ ಬಸ್ ಓಡಿಸಲು ಕೂಡಲೆ ಕ್ರಮ ಕೈಗೊಳ್ಳಬೇಕೆಂದು ರಾಜು ಪಡುಕೋಣೆ ಆಗ್ರಹಿಸಿದರು.ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ಆಲೂರು,ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಆಲೂರು,ಕರ್ನಾಟಕ […]

You cannot copy content of this page