ಭಾರಿ ಮಳೆಗೆ ಮನೆ ಗೋಡೆ ಕುಸಿತ:5 ಲಕ್ಷ.ರೂ ನಷ್ಟ

ಕುಂದಾಪುರ:ನಿರಂತರವಾಗಿ ಸುರಿದ ಭಾರಿ ಗಾಳಿ ಮಳೆಗೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮುಂಜೆ ನರಸಿಂಹ ಆಚಾರ್ಯ ಅವರ ಮನೆ ಗೋಡೆ ಕುಸಿತ ಗೊಂಡು ಭಾಗಶಹ ಹಾನಿ ಉಂಟಾಗಿದೆ.ಅಂದಾಜು 5.ಲಕ್ಷ.ರೂ ನಷ್ಟ ಸಂಭವಿಸಿದ ಘಟನೆ ಬುಧವಾರ ನಡೆದಿದೆ.ಕರಾವಳಿ ಭಾಗದಲ್ಲಿ ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಧಾರಕಾರ ಮಳೆ ಗಾಳಿ ಅಬ್ಬರಕ್ಕೆ ಮನೆಗಳ ಮೇಲೆ ಮರ ಬಿದ್ದು ಹಾನಿ ಆಗಿದ್ದು ಮಾತ್ರವಲ್ಲದೆ.ಮನೆಗಳ ಗೋಡೆ ಕುಸಿತಗೊಂಡಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.

ನದಿಗೆ ಹಾರಿ ವ್ಯಕ್ತಿ ನಾಪತ್ತೆ

ಕುಂದಾಪುರ:ಸುರಿಯುತ್ತಿದ್ದ ಮಳೆ ನಡುವೆ ಮಧ್ಯಾಹ್ನ ಸುಮಾರು 12.45 ರ ಸುಮಾರಿಗೆ ಕುಂದಾಪುರದ ಕಾಳಾವರ ಮೂಲದ ಹರೀಶ್ (40) ಎನ್ನುವ ವ್ಯಕ್ತಿಯು ಕಂಡ್ಲೂರು ಸೇತುವೆ ಯಿಂದ ನದಿಗೆ ಹಾರಿ ನಾಪತ್ತೆ ಆಗಿದ್ದಾರೆ.ಭಾರಿ ಮಳೆ ಹಾಗೂ ಪ್ರವಾಹದ ಕಾರಣದಿಂದ ಅವರ ಪತ್ತೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ.ವ್ಯಕ್ತಿ ಗುರುತು ಪತ್ತೆ ಆದಲ್ಲಿ ಹತ್ತಿರದ ಪೊಲೀಸ್ ಠಾಣೆ ಮತ್ತು ಈ ಕೆಳಗಿನ ವ್ಯಕ್ತಿಗಳನ್ನು ಸಂಪರ್ಕಿಸಬಹುದು. ದಿನೇಶ್ ಖಾರ್ವಿ :- 8618513248ವೆಂಕಟೇಶ್ ಖಾರ್ವಿ:- 9448462781ಸಚಿನ್ ಖಾರ್ವಿ :- 8197991084 ಬ್ರಾಹಿಂ ಗಂಗೊಳ್ಳಿ 98800 16816

ಕುರು ದ್ವೀಪ ಪ್ರದೇಶ ಆವರಿಸಿದ ನೆರೆ

ಬೈಂದೂರು:ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿದ ಭಾರಿ ಮಳೆಗೆ ಸೌಪರ್ಣಿಕಾ ನದಿ ಉಕ್ಕಿ ಹರಿದ ಪರಿಣಾಮ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರು ದ್ವೀಪದಲ್ಲಿ ಮಂಗಳವಾರ ಮತ್ತೆ ನೆರೆ ಕಾಣಿಸಿಕೊಂಡಿದ್ದು.ಕೆಂಪು ಓಕುಳಿ ನೆರೆ ನೀರು ಕುರು ದ್ವೀಪ ಪ್ರದೇಶವನ್ನು ಆವರಿಸಿದೆ.ಕಳೆದ ಒಂದು ವಾರಗಳ ಹಿಂದೆ ಕಾಣಿಸಿ ಕೊಂಡಿದ್ದ ನೆರೆ ಸೋಮವಾರ ಸುರಿದ ಭಾರಿ ಮಳೆಗೆ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗಿದ್ದರಿಂದ ಮಂಗಳವಾರ ಎರಡನೇ ಬಾರಿಗೆ ನೆರೆ ನೀರು ಕುರು ದ್ವೀಪ ಪ್ರದೇಶಕ್ಕೆ ಲಗ್ಗೆ ಇಟ್ಟಿದೆ.ನದಿಯಲ್ಲಿ […]

You cannot copy content of this page