ಪುತ್ತಿಗೆ ಶ್ರೀ ಆಶೀರ್ವಚನ ನೀಡು ಸಂದರ್ಭ ವಾನರ ಪ್ರತ್ಯಕ್ಷ

ಉಡುಪಿ:ಪರ್ಯಾಯ ಸಂಚಾರ ಪ್ರಯುಕ್ತ ಭುವನೇಶ್ವರ ಪ್ರವಾಸದಲ್ಲಿರುವ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಸುಶೀಂದ್ರ ತೀರ್ಥ ಶ್ರೀಪಾದರು ಭಗವದ್ಗೀತಾ ಲೇಖನಾ ಯಜ್ಞಕ್ಕೆ ದೀಕ್ಷೆ ನೀಡುತ್ತಿರುವ ಸಂದರ್ಭ ವಾನರ ಪ್ರತ್ಯಕ್ಷಗೊಂಡು ಅಚ್ಚರಿ ಮೂಡಿಸಿದ ಘಟನೆ ಪುತ್ತಿಗೆ ಮಠದಲ್ಲಿ ನಡೆದಿದೆ.ವಾನರ ಕೊರಳಿಗೆ ಹೂ ಮಾಲೆ ಅರ್ಪಿಸಿದ ಶ್ರೀಪಾದರು ಬಾಳೆಹಣ್ಣನ್ನು ನೀಡಿದ್ದಾರೆ.ಕೆಲವು ಹೊತ್ತುಗಳ ಕಾಲ ಶ್ರೀಪಾದರ ಬಳಿ ಕುಶಲೋಪರಿಯಲ್ಲಿ ತೊಡಗಿಕೊಂಡ ವಾನರ ವಾಪಾಸ್ಸಾಗಿದೆ.

ವಂಡ್ಸೆ ಎಸ್ಎಲ್ಆರ್ ಎಂ ಘಟಕದಲ್ಲಿ ಗಬ್ಬು ನಾರುತ್ತಿದೆ ಕಸ:ವಿಲೇವಾರಿಗೆ ಆಗ್ರಹ

ಕುಂದಾಪುರ:ವಂಡ್ಸೆ ಗ್ರಾಮ ಪಂಚಾಯತಿಯ ಹಳೆ ಎಸ್ಎಲ್ಆರ್ ಎಂ ಘಟಕದಲ್ಲಿರುವ ಕಸ ವಿಲೇವಾರಿ ಮಾಡದೆ ಇರುವುದರಿಂದ ಮಳೆಯಲ್ಲಿ ಕೊಳೆತು ಗಬ್ಬು ನಾರುತ್ತಿದೆ ಪರಿಸರದಲ್ಲಿರುವ ಶಾಲಾ ಮಕ್ಕಳಿಗೆ ತೊಂದರೆ ಆಗಿದ್ದು,ಕಸವನ್ನು ವಿಲೇವಾರಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕಸವನ್ನು ಸೂಕ್ತವಾದ ರೀತಿಯಲ್ಲಿ ವಿಲೇವಾರಿ ಮಾಡುವ ದೃಷ್ಟಿಯಿಂದ ಎಸ್ಎಲ್ಆರ್ ಎಂ ಘಟಕವನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಥಾಪಿಸಲಾಗಿದೆ.ಸಾರ್ವಜನಿಕರಿಂದ ಉತ್ತಮವಾದ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಎಸ್ಎಲ್ಆರ್ ಎಂ ಘಟಕದ ಸ್ಥಾಪನೆ ಸಾರ್ಥಕ ಮನೋಭಾವವನ್ನು ಕಂಡಿದೆ.ವಂಡ್ಸೆ ಅಂಗನವಾಡಿ ಕೇಂದ್ರ ಮತ್ತು ಸರಕಾರಿ ಶಾಲೆ […]

ಆಲೂರಿನಲ್ಲಿ ಗದ್ದೆ ನಟ್ಟಿ ಕಾರ್ಯ ಆರಂಭ

ಕುಂದಾಪುರ:ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ಕುಂದಾಪುರ ತಾಲೂಕಿನ ಆಲೂರು ಗ್ರಾಮದಲ್ಲಿ ಕಾಥಿ ನಟ್ಟಿ ಕಾರ್ಯ ಆರಂಭವಾಗಿದೆ,ಕೃಷಿಕರು ಉತ್ಸಾಹದಿಂದ ಕೃಷಿ ಚಟುವಟಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ.ಯಂತ್ರಶೀ ಬೇಸಾಯಕ್ಕೆ ಹೆಚ್ಚಿನ ರೈತರು ಒತ್ತನ್ನು ನೀಡಿದರೆ,ಕೆಲ ಒಂದಿಷ್ಟು ಭಾಗದಲ್ಲಿ ಸಾಲು ನಟ್ಟಿ ಬೇಸಾಯದ ಕ್ರಮವನ್ನು ರೈತರು ಅಳವಡಿಕೆ ಮಾಡಿಕೊಂಡಿದ್ದಾರೆ.ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದ ಹಿನ್ನೆಲೆಯಲ್ಲಿ ಜವಳು ಪ್ರದೇಶ ಹೊರತು ಪಡಿಸಿ ಒಣ ಭೂಮಿ ಪ್ರದೇಶಗಳಲ್ಲಿ ಇನ್ನೂ ಕೂಡ ಕೃಷಿ ಚಟುವಟಿಕೆ ಕಾರ್ಯ ಆರಂಭಗೊಂಡಿಲ್ಲ.

You cannot copy content of this page