ಗುರುಪೂರ್ಣಿಮಾ-ಗುರುಪೂಜೆ ಕಾರ್ಯಕ್ರಮ

ಬೈಂದೂರು:ಭಾರತೀಯ ಸಂಗೀತ ಪ್ರಕಾರಗಳು ಶಾಸ್ರ್ತಾಧಾರಿತವಾಗಿದ್ದು ಅವುಗಳನ್ನು ವೇದಗಳೊಂದಿಗೆ ಸಮೀಕರಣಗೊಳಿಸಲಾಗಿದೆ.ನಮ್ಮ ಮಕ್ಕಳನ್ನು ಶಿಕ್ಷಣದ ಜತೆಗೆ ಯಾವುದಾದರೊಂದು ಸಂಗೀತ ಪ್ರಕಾರದ ಅಧ್ಯಯನದಲ್ಲಿ ತೊಡಗಿಸುವುದರಿಂದ ಅವರ ವ್ಯಕ್ತಿತ್ವ ಬೆಳಗುತ್ತದೆ ಎಂದು ಸಂಸ್ಕøತ ಪ್ರಾಧ್ಯಾಪಕ ಡಾ.ಗೋಪಾಲಕೃಷ್ಣ ಭಟ್ ಹೇಳಿದರು.ಕುಂದಾಪುರದ ಗುರುಪರಂಪರಾ ಸಂಗೀತಸಭಾ ಆಶ್ರ್ರಯದಲ್ಲಿ ಮರವಂತೆ ಸಾಧನಾ ಸಮುದಾಯ ಭವನದ ವಿ.ಕೆ.ಕಾಮತ್ ಸಭಾಗೃಹದಲ್ಲಿ ನಡೆದ ಗುರುಪೂರ್ಣಿಮಾ-ಗುರುಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಾಸ್ತ್ರೀಯ ಸಂಗೀತದ ಕಲಿಕೆ ಮತ್ತು ಶ್ರವಣದಿಂದ ಮನುಷ್ಯರಿಗೆ ವಿಶೇಷವಾದ ಅನುಭೂತಿ ಸಿದ್ಧಿಸುವುದರ ಜತೆಗೆ ಹೃದಯ ಸಂಸ್ಕಾರಗೊಳ್ಳುತ್ತದೆ.ನಾದಕ್ಕೆ ಎಲ್ಲ ಜೀವಿಗಳ ಮೇಲೂ ಧನಾತ್ಮಕ ಪರಿಣಾಮ ಬೀರುವ […]

ಮಳೆ ಆರ್ಭಟಕ್ಕೆ ಒತ್ತಿನೆಣೆ ಗುಡ್ಡ ಕುಸಿತ,ಹೆದ್ದಾರಿ ಪ್ರಯಾಣಿಕರಿಗೆ ಸಂಕಷ್ಟದ ಭೀತಿ

ಬೈಂದೂರು:ಕಳೆದೆರಡು ದಿನಗಳಿಂದ ಕರಾವಳಿ ಭಾಗದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು ನದಿ,ಹಳ್ಳ,ಕೊಳ್ಳ ತುಂಬಿ ಹರಿಯುತ್ತಿದೆ.ಮಳೆಯ ಆರ್ಭಟಕ್ಕೆ ಬೈಂದೂರು ತಾಲೂಕಿನ ಒತ್ತಿನೆಣೆ ಗುಡ್ಡ ಕುಸಿತಗೊಂಡಿದ್ದು,ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರಿಗೆ ಸಂಕಷ್ಟದ ಭೀತಿ ಎದುರಾಗಿದೆ.‌ತಾತ್ಕಾಲಿಕ ಕ್ರಮದ ಭಾಗವಾಗಿ ಗುಡ್ಡದ ಮಗ್ಗುಲಲ್ಲಿ ಹಾದು ಹೋಗಿರುವ ಒಂದು ದಿಕ್ಕಿನ ಸಂಚಾರವನ್ನು ಬಂದ್ ಮಾಡಲಾಗಿದೆ.

ಕರಾವಳಿ ಬೈಲಿಗೆ ಸಹ್ಯಾದ್ರಿ ಬ್ರಹ್ಮ ಹೊಸ ಭತ್ತದ ತಳಿ:ರೈತರಿಗೆ ಉಚಿತವಾಗಿ ಬೀಜ ವಿತರಣೆ

ಬ್ರಹ್ಮಾವರ:ವೈವಿಧ್ಯಮಯ ವಾತಾವಾರಣವನ್ನು ಹೊಂದಿರುವ ಕರಾವಳಿ ತೀರ ಪ್ರದೇಶಕ್ಕೆ ಒಗ್ಗಿ ಕೊಳ್ಳುವಂತಹ ಭತ್ತದ ತಳಿಗಳನ್ನು ಆವಿಷ್ಕಾರ ಮಾಡುವಲ್ಲಿ ಸಾಕಷ್ಟು ಪ್ರಯತ್ನವನ್ನು ಮಾಡಿರುವ ವಲಯ ಸಂಶೋಧನಾ ಕೇಂದ್ರ ಬ್ರಹ್ಮಾವರ ಸಂಸ್ಥೆ ಸಹ್ಯಾದ್ರಿ ಬ್ರಹ್ಮ ಎನ್ನುವ ಹೊಸ ಭತ್ತದ ತಳಿಯನ್ನು ಸಂಶೋಧನೆಯನ್ನು ಮಾಡಿದ್ದು ಪ್ರಯೋಗ ಯಶಸ್ವಿಯಾಗುವುದರ ಮುಖೇನ ಕರಾವಳಿ ಮಣ್ಣಿಗೆ ಹೊಸ ಭತ್ತದ ತಳಿ ಆಗಮನವಾಗಿದೆ. ಕುಚ್ಚಲಕ್ಕಿ (ಕೆಂಪು ಭತ್ತ) ಎನ್ನುವುದು ಕರ್ನಾಟಕ ಕರಾವಳಿ ಪ್ರದೇಶದ ಪ್ರಮುಖ ಆಹಾರ ಬೆಳೆಯಾಗಿದೆ,ಮಲೆನಾಡು ಮತ್ತು ಕರಾವಳಿ ಪ್ರದೇಶವನ್ನು ಹೊಂದಿರುವ ಉಡುಪಿ ಜಿಲ್ಲೆಯ ಕುಂದಾಪುರ,ಬೈಂದೂರು,ಬ್ರಹ್ಮವಾರ,ಉಡುಪಿ ಸಹಿತ […]

You cannot copy content of this page