ಗಂಗೊಳ್ಳಿ ಪಂಚಾಯಿತಿ ಅಧಿಕಾರ ಸ್ವೀಕಾರ ವೇಳೆ ಮೌಲಿಯಿಂದ ಪ್ರಾರ್ಥನೆ ಆರೋಪ,ಹಿಂದು ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

ಕುಂದಾಪುರ:ಅಧಿಕಾರ ಸ್ವೀಕಾರದ ವೇಳೆ ಪಂಚಾಯಿತಿ ಕಟ್ಟಡದ ಒಳಗಡೆ ಅನಧಿಕೃತವಾಗಿ ನಮಾಜ್ ಮಾಡಿರುವುದು ಅತ್ಯಂತ ಕಳವಳಕಾರಿ ಸಂಗತಿ ಆಗಿದ್ದು.ಅಧಿಕಾರಕ್ಕಾಗಿ ಸಮಾಜದ ಸ್ವಾಸ್ತ್ಯವನ್ನು ಕೇಡಿಸುವಂತ ಕಾರ್ಯಗಳಿಗೆ ಮುಂದಾಗಿರುವುದು ಸರಿ ಅಲ್ಲಾ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.ಗಂಗೊಳ್ಳಿ ಗ್ರಾಮ ಪಂಚಾಯಿತಿ ಅಧಿಕಾರ ಸ್ವೀಕಾರ ವೇಳೆಯಲ್ಲಿ ಮುಸ್ಲಿಂ ಸಮುದಾಯದ ಮೌಲಿಯಿಂದ ಪಂಚಾಯಿತಿ ಒಳಗಡೆ ಪ್ರಾರ್ಥನೆ ಮಾಡಿರುವುದನ್ನು ಖಂಡಿಸಿ ಹಿಂದು ಹಿತರಕ್ಷಣಾ ಸಮಿತಿ ಗಂಗೊಳ್ಳಿ ವತಿಯಿಂದ ಶುಕ್ರವಾರ ಗಂಗೊಳ್ಳಿ ಪಂಚಾಯಿತಿ ಎದುರುಗಡೆ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಬೈಂದೂರು ಬಿಜೆಪಿ […]

ಯಕ್ಷಗಾನ ಕಲಾವಿದರಿಗೆ ಗೌರವದ ಸನ್ಮಾನ

ಕುಂದಾಪುರ:ಧಾರ್ಮಿಕ ಮುಖಂಡ ಸಮಾಜ ಸೇವಕರಾದ ದುಬೈ ಉದ್ಯಮಿ ಸೇನಾಪುರ ಹಾಡಿಮನೆ ಮಂಜುನಾಥ ವಿನಯ ಪೂಜಾರಿ ದಂಪತಿಗಳ ವತಿಯಿಂದ ಸೇನಾಪುರ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಯಕ್ಷಗಾನ ಬಯಲಾಟ ಹಾಗೂ ಮೇಳದ ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಬುಧವಾರ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಕಲಾವಿದರನ್ನು ಸನ್ಮಾನಿಸಿ ಮಾತನಾಡಿ,ಆಧುನಿಕ ಜೀವನ ಶೈಲಿ ಪದ್ಧತಿ ನಡುವೆಯೂ ಯಕ್ಷಗಾನದ ನೆಲೆ ಗಟ್ಟು ಸುಭದ್ರವಾಗಿ ಉಳಿಯಲು ಜನರು ಯಕ್ಷಗಾನದ ಮೇಲಿಟ್ಟಿರುವ ದೈವಿಕ ಭಾವನೆಗಳೆ ಕಾರಣವಾಗಿದೆ ಎಂದು […]

ಬ್ರಹ್ಮಾವರ ವಿದ್ಯಾ ಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹೊಸ ವರ್ಷ ಆಚರಣೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಾಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ಹೊಸ ವರ್ಷ ಆಚರಣೆ ಅದ್ದೂರಿಯಾಗಿ ನಡೆಯಿತು.ಕಾಲೇಜಿನ ಸಂಸ್ಥಾಪಕರಾದ ಸುಬ್ರಹ್ಮಣ್ಯ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲರ ಜೀವನದಲ್ಲೂ ಹೊಸತನ,ಹೊಸ ಹುಮ್ಮಸ್ಸು ತುಂಬಲಿ ಎಂದು ಶುಭಾಶಯ ಕೋರಿದರು.ಕಾಲೇಜಿನ ನಿರ್ದೇಶಕಿ ಮಮತಾ,ಪ್ರಾಂಶುಪಾಲರಾದ ಡಾ ಸೀಮಾ.ಜಿ ಭಟ್, ಉಪಪ್ರಾಂಶುಪಾಲರಾದ ಸುಜಾತ,ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ರಾಝಿಕಾ ಹಾಗೂ ಎಲ್ಲಾ ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ಉಪಸ್ಥಿತರಿದ್ದರು.ಕನ್ನಡ ಉಪನ್ಯಾಸಕಿ ಅನುಪಮ ಪಿ ಭಟ್ ಹೊಸ ವರ್ಷ ಆಚರಣೆಯ ಮಹತ್ವ,ಹಿನ್ನೆಲೆ ಕುರಿತು ಮಾತನಾಡಿದರು. ಕಾರ್ಯಕ್ರಮವನ್ನು ಉಪನ್ಯಾಸಕಿ […]

You cannot copy content of this page