ಮುಳ್ಳಿಕಟ್ಟೆಯಲ್ಲಿ ಕರಾವಳಿ ದೊನ್ನೆ ಬಿರಿಯಾನಿ ಶುಭಾರಂಭ

ಕುಂದಾಪುರ:ಅತ್ಯಂತ ಜನಪ್ರಿಯ ಖಾದ್ಯಗಳಲ್ಲಿ ಒಂದಾಗಿರುವ ಕರಾವಳಿ ದೊನ್ನೆ ಬಿರಿಯಾನಿ ಔಟ್‍ಲೆಟ್ ಹರೀಶ್ ಶೆಟ್ಟಿ ಕೌಂಜೂರು ಮತ್ತು ಶರತ್ ಶೆಟ್ಟಿ ಸೆಳೆಕೋಡು ಅವರ ಮಾಲೀಕತ್ವದಲ್ಲಿ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ (ರಾಷ್ಟ್ರೀಯ ಹೆದ್ದಾರಿ 66 ರ) ನಗು ಸಿಟಿ ಮುಂಭಾಗ ಶನಿವಾರ ಅದ್ಧೂರಿಯಾಗಿ ಶುಭಾರಂಭಗೊಂಡಿದೆ.ಹೋಟೆಲ್ ಉದ್ಯಮದಲ್ಲಿ ಸುಮಾರು 25 ವರ್ಷಗಳಷ್ಟು ಅನುಭವನ್ನು ಹೊಂದಿರುª ಹರೀಶ್ ಶೆಟ್ಟಿ ಕೌಂಜೂರು ಮತ್ತು ಶರತ್ ಶೆಟ್ಟಿ ಮಾಲೀಕತ್ವದ ಕರಾವಳಿ ದೊನ್ನೆ ಬಿರಿಯಾನಿ ಸಹಿತ ಎಲ್ಲಾ ರೀತಿಯ ಸೀಫುಡ್,ನಾಟಿ ಸ್ಟೈಲ್‍ನಲ್ಲಿ ಚಿಕ್ಕನ್ ಮತ್ತು ಮಟನ್ ಬಿರಿಯಾನಿ,ಚೈನಿಸ್, […]

ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಂಟ್ವಾಡಿ ಶಾಲೆ ಅಮೃತ ಮಹೋತ್ಸವ ಸಂಭ್ರಮ-2025

ಕುಂದಾಪುರ:ಬೈಂದೂರು ವಲಯದ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಬಂಟ್ವಾಡಿ ಶಾಲೆಯಲ್ಲಿ ಅಮೃತ ಮಹೋತ್ಸವ-2025 ಕಾರ್ಯಕ್ರಮ ಅದ್ಧೂರಿಯಾಗಿ ಶುಕ್ರವಾರ ನಡೆಯಿತು.ಗುಡ್ಡಮ್ಮಾಡಿ ದೇವಸ್ಥಾನದಿಂದ ಬಂಟ್ವಾಡಿ ಶಾಲೆ ವರೆಗೆ ಭವ್ಯ ಮೆರವಣಿಗೆ ನಡೆಯಿತು.ಚಂಡೆವಾದನ ವಾದ್ಯ ಘೋಷ ಮೆರವಣಿಗೆ ಸೊಬಗನ್ನು ಹೆಚ್ಚಿಸಿತು.ಅಮೃತ ಮಹೋತ್ಸವ ಸ್ವಾಗತ ಗೋಪುರದ ಉದ್ಘಾಟನೆ ಮತ್ತು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.ಬೆಳಗೆ ಅಮೃತ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮವನ್ನು ನಾರಾಯಣ ಶೆಟ್ಟಿ ನೆರವೇರಿಸಿದರು.ಶಾಲೆಯ ಸಂಚಾಲಕ ಬಿ.ಅರುಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳು ಭಾಗವಹಿಸಿದ್ದರು.ಅಂಗನವಾಡಿ ವಿದ್ಯಾರ್ಥಿಗಳಿಂದ ಮತ್ತು ಶಾಲಾ ಮಕ್ಕಳಿಂದ ನೃತ್ಯ ಸಿಂಚನ ಕಾರ್ಯಕ್ರಮ […]

ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಿಯ ಪುರಪ್ರವೇಶ ಮೆರವಣಿಗೆ

ಕುಂದಾಪುರ: ಟ್ಯಾಬ್ಲೋ ಕುಣಿತ ಭಜನೆ ಪೇಟ ಸಹಿತ ಬಣ್ಣದ ಕೋಡೆ ಡೊಳ್ಳು ಕುಣಿತ ಚಂಡೆವಾದನ ಪೂರ್ಣಕುಂಭ ಸ್ವಾಗತದೊಂದಿಗೆ ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಿಯ ಪುರಪ್ರವೇಶ ಮೆರವಣಿಗೆ ಅದ್ಧೂರಿಯಾಗಿ ಸೋಮವಾರ ನಡೆಯಿತು.ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಮ್ಮನವರು ಪುರಪ್ರವೇಶವನ್ನು ಮಾಡಿದರು.ಶ್ರೀ ಭದ್ರಮಹಾಕಾಳಿ ದೇವಿಯ ರಕ್ತ ಚಂದನ ನೂತನ ದಾರು ಬಿಂಬಿದ ಶೋಭಾಯಾತ್ರೆಯೂ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ಕುಂಭಾಶಿಯಿಂದ ಹೆಮ್ಮಾಡಿ ತನಕ ವಾಹನ ಜಾತಾದ ಮೂಲಕ,ಹೆಮ್ಮಾಡಿ ಯಿಂದ ಶ್ರೀ ದೇವಿಯ ಸನ್ನಿಧಾನದ ತನಕ ಕಾಲ್ನಡಿಗೆಯಲ್ಲಿ […]

You cannot copy content of this page