ಗಂಗೊಳ್ಳಿ:ವಿಕಾಸ್ ಖಾರ್ವಿಗೆ ಸನ್ಮಾನ

ಕುಂದಾಪುರ:ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಸರ್.ಎಂ ವಿಶ್ವೇಶ್ವರಯ್ಯನವರ ಜನ್ಮ ಜಯಂತಿಯನ್ನು ಆಚರಿಸಲಾಯಿತು.ಸಿವಿಲ್ ಇಂಜಿನಿಯರ್ ವಿಕಾಸ್ ಖಾರ್ವಿ ಅವರನ್ನು ಸನ್ಮಾನಿಸಲಾಯಿತು.ಕ್ಲಬ್ಬಿನ ಅಧ್ಯಕ್ಷ ನಾಗೇಂದ್ರ ಪೈ,ರಾಮನಾಥ್,ಕಾರ್ಯದರ್ಶಿ ಕೃಷ್ಣ ಪೂಜಾರಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಗಂಗೊಳ್ಳಿ:ಸಾಕ್ಷರತೆ ವಿಚಾರ ಸಂಕಿರಣ ಕಾರ್ಯಕ್ರಮ

ಕುಂದಾಪುರ:ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಾಕ್ಷರತೆ ಕುರಿತು ವಿಶೇಷ ವಿಚಾರ ಸಂಕಿರಣ ಕಾರ್ಯಕ್ರಮ ಗಂಗೊಳ್ಳಿ ಎಸ್.ವಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ನಾಗೇಂದ್ರ ಪೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಸಹಾಯಕ ರಾಜ್ಯಪಾಲ ಆರ್‍ಟಿಎನ್ ಪಿಎಚ್‍ಎಫ್ ಡಾ.ಸಂದೀಪ ಶೆಟ್ಟಿ ಉದ್ಘಾಟಿಸಿದರು.ಝೋನಲ್ ಲೆಫ್ಟಿನೆಂಟ್ ಆರ್‍ಟಿಎನ್ ಪ್ರದೀಪ್ ಯಡಿಯಾಲ್ ಶುಭಹಾರೈಸಿದರು.ವಲಯ ಸಂಯೋಜಕ ನಾರಾಯಣ್ ಇ ನಾಯ್ಕ್ ಸಾಕ್ಷರತೆಯ ಮಹತ್ವದ ಕುರಿತು ಮಾಹಿತಿಯನ್ನು ನೀಡಿದರು.ಶಿವಕುಮಾರ್ ಆಲಗೋಡು ಅವರು ಜೀವನದ ಮೌಲ್ಯಗಳು ಮತ್ತು ನೈತಿಕತೆ ಬಗ್ಗೆ ಮಾತನಾಡಿದರು.ಕ್ಲಬ್ಬಿನ ಅಧ್ಯಕ್ಷ […]

ತೊಂಬಟ್ಟು: ಶ್ವಾನ ಪ್ರೀತಿಗೆ ಜನರು ಪುಲ್ ಖುಷ್

ಕುಂದಾಪುರ:ಕಳೆದ ಎಂಟು ದಿನಗಳ ಹಿಂದೆ ನಾಪತ್ತೆಯಾಗಿ ಸುರಕ್ಷಿತವಾಗಿ ಮರಳಿ ಮನೆಗೆ ಬಂದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ವಿವೇಕಾನಂದ ಹಾಗೂ ಜೊತೆಗಿದ್ದ ಶ್ವಾನ ನನ್ನು ಊರವರು ಮೆರವಣಿಗೆ ಮೂಲಕ ಕರೆತಂದು ಖುಷಿ ಪಟ್ಟರು.ದಟ್ಟ ಕಾಡಿನಲ್ಲಿ ಕಣ್ಮರೆಯಾಗಿ ಎಂಟು ದಿನಗಳ ನಂತರ ಸುರಕ್ಷಿತವಾಗಿ ವಿವೇಕಾನಂದ ಮನೆಗೆ ಮರಳಿದ್ದರಿಂದಊರ ದೇವರಿಗೆ ಸೋಮವಾರ ಹರಿಕೆ ಸಲ್ಲಿಸಲಾಯಿತು ಈ ಸಂದರ್ಭ ಗ್ರಾಮಸ್ಥರು ಉಪಸ್ಥಿತರಿದ್ದರು.

You cannot copy content of this page