ಫೆ.20 ರಿಂದ ಶ್ರೀ ಬಗಳಾಂಬ ತಾಯಿ ದೇವಸ್ಥಾನ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ

ಕುಂದಾಪುರ:ಶ್ರೀ ಬಗಳಾಂಬ ತಾಯಿ ದೇವಸ್ಥಾನ ಚಿಕ್ಕನ್‍ಸಾಲ್ ರಸ್ತೆ ಕುಂದಾಪುರ ಇದರ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಗರ್ಭಗುಡಿಯ ದ್ವಾರಕ್ಕೆ ರಜತ ಕವಚ ಸಮರ್ಪಣೆ ಕಾರ್ಯಕ್ರಮ ಫೆ. 20 ರಿಂದ ಆರಂಭಗೊಂಡು ಫೆ.23 ರ ತನಕ ನಡೆಯಲಿದೆ.ಶ್ರೀ ಬಗಳಾಂಬ ತಾಯಿ ಪುನರ್ ಪ್ರತಿಷ್ಠೆ,ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಗರ್ಭಗುಡಿಯ ದ್ವಾರಕ್ಕೆ ರಜತ ಕವಚ ಸಮರ್ಪಣೆ ಕಾರ್ಯಕ್ರಮದ ಅಂಗವಾಗಿ ಫೆಬ್ರವರಿ 20 ರಂದು ಗುರುಸನ್ನಿಧಿಯಲ್ಲಿ ಕಲಾಭಿವೃದ್ಧಿ ಹೋಮ,ಕಲಶಾಭಿಷೇಕ ಸಂಜೆ 5.ಕ್ಕೆ ಶ್ರೀ ಬಗಳಾಂಬ ತಾಯಿಯ ಕಲಾಸಂಕೋಚ ನಡೆಯಲಿದೆ. ಫೆಬ್ರವರಿ 21 […]

ಗಂಗೊಳ್ಳಿ:ಬೈಂದೂರು ವೃತ್ತ ನಿರೀಕ್ಷಕರಿಗೆ ಮನವಿ

ಕುಂದಾಪುರ:ಗಂಗೊಳ್ಳಿ ಮ್ಯಾಂಗನೀಸ್ ರಸ್ತೆ ಅಂಗಡಿಯೊಂದರಿಂದ ಲಕ್ಷಾಂತರ.ರೂ ಮೌಲ್ಯದ ಸೀಸ ಕಳವುಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸುವಂತೆ ಗಂಗೊಳ್ಳಿ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಬೈಂದೂರು ವೃತ್ತ ನಿರೀಕ್ಷ ಸವಿತ್ರತೇಜ ಅವರನ್ನು ಶುಕ್ರವಾರ ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು.ಈ ಸಂದರ್ಭ ಗಂಗೊಳ್ಳಿ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಯಶವಂತ ಗಂಗೊಳ್ಳಿ,ಗೌರವಾಧ್ಯಕ್ಷ ಗಣಪತಿ ಖಾರ್ವಿ,ಮೀನುಗಾರ ಮುಖಂಡ ರಮೇಶ ಕುಂದರ್, ಪರ್ಸಿನ್ ಬೋಟ್ ಹಾಗೂ ವಿವಿಧ ಮೀನುಗಾರ ಸಂಘಟನೆಯ ಪ್ರಮುಖರು,ಮೀನುಗಾರರು ಉಪಸ್ಥಿತರಿದ್ದರು.

ಮರವಂತೆ:ವಾರ್ಷಿಕೋತ್ಸವ ಸಂಭ್ರಮಾಚರಣೆ,ಸನ್ಮಾನ ಕಾರ್ಯಕ್ರಮ

ಕುಂದಾಪುರ:ಯುವ ನವ ಗೆಳೆಯರ ಬಳಗ ನೀರೋಣಿ ಮರವಂತೆ ಅದರ ಮೂರನೇ ವರ್ಷದ ವಾರ್ಷಿಕೀತ್ಸವ ಸಂಭ್ರಮಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಮರವಂತೆಯಲ್ಲಿ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ರಂಗೋಲಿ ಕಲಾವಿದೆ ಸಂಶೋಧಕರಾದ ಭಾರತಿ ಮರವಂತೆ ಉದ್ಘಾಟಿಸಿದರು,ಮಾಜಿ ತಾ.ಪಂ ಸದಸ್ಯ ಹಕ್ಕಾಡಿ ಜಗದೀಶ್ ಪೂಜಾರಿ,ಶಿಕ್ಷಕಿ ಎನ್.ಸಿಂಗಾರಿ,ಮಹಿಳಾ ಮೀನುಗಾರರ ವಿವಿಧೋದ್ಧೇಶ ಸಹಕಾರ ಸಂಘ ಮರವಂತೆ ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿ ಶ್ರೀನಿವಾಸ ಅಡಿಗ ಕಬ್ಬೈಲು,ಮರವಂತೆ ಶ್ರೀರಾಮ ಮಂದಿರ ಮೀನುಗಾರರ ಸೇವಾ ಸಮಿತಿ ಅದ್ಯಕ್ಷ ವಾಸುದೇವ ಖಾರ್ವಿ,ರವಿ ದೇವಾಡಿಗ ಉಪ್ಪಿನಕುದ್ರು,ಜ್ಯೋತಿ […]

You cannot copy content of this page