ತ್ರಾಸಿ:ರಾಷ್ಟ್ರೀಯ ಹೆದ್ದಾರಿ ಬದಿ ಕೇಸರು ಮಯ

ಕುಂದಾಪುರ:ವಿಶ್ವ ಪ್ರಸಿದ್ಧ ತ್ರಾಸಿ-ಮರವಂತೆ ಬೀಚ್ ಬದಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-66 ರ ರಸ್ತೆ ಬದಿಯಲ್ಲಿ ಕೆಂಪು ಮಣ್ಣು ಹಾಕಿದ್ದರಿಂದ ಮಳೆಗೆ ಸುಮಾರು 3 ಕಿ.ಮೀ ವರೆಗೆ ರಾಡಿ ಎದ್ದಿದೆ.ಕೆಂಪು ಮಣ್ಣು ಮಿಶ್ರಿತ ಕೇಸರು ಮಣ್ಣು ವಾಹನಗಳ ಚಕ್ರದ ಮೂಲಕ ರಸ್ತೆ ಮೇಲೆ ಹರಡುತ್ತಿದೆ.ಕೇಸರು ಮಿಶ್ರಿತ ಕೆಂಪು ಮಣ್ಣು ಜಾರುತ್ತಿದ್ದು ಮಣ್ಣಿನ ಝರಿ ಕಣ್ಣಿಗೆ ರಾಚುತ್ತಿದೆ ದ್ವಿಚಕ್ರ ವಾಹನ ಸವಾರರಿಗೆ ಕಂಟಕವಾಗಿದೆ.ಮಳೆ ಮುಂದುವರೆದಂತೆ ಇನ್ನಷ್ಟು ಕೇಸರು ಮಿಶ್ರಿತ ಕೆಂಪು ಮಣ್ಣು ರಸ್ತೆ ಮೇಲೆ ಬರುವ ಸಂಭವವಿದೆ.ವಾಹನ ಸವಾರರ […]

ಸಮೃದ್ಧಿ ಸಂಜೀವಿನಿ ಒಕ್ಕೂಟ ಗುಜ್ಜಾಡಿ ವಾರ್ಷಿಕ ಮಹಾಸಭೆ

ಕುಂದಾಪುರ:ಸಮೃದ್ಧಿ ಸಂಜೀವಿನಿ ಒಕ್ಕೂಟ ಗುಜ್ಜಾಡಿ ಅದರ ವಾರ್ಷಿಕ ಮಹಾಸಭೆ ಗುಜ್ಜಾಡಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.ತಾಲೂಕು ಒಕ್ಕೂಟ ಅಧ್ಯಕ್ಷೆ ವಿಜಯ ಅಧ್ಯಕ್ಷತೆ ವಹಿಸಿದ್ದರು.ಗುಜ್ಜಾಡಿ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಉದ್ಘಾಟಿಸಿದರು.ಗುಜ್ಜಾಡಿ ಪಂಚಾಯಿತಿ ಉಪಾಧ್ಯಕ್ಷೆ ನಾಗರತ್ನ ಮತ್ತು ಸದಸ್ಯರಾದ ಹರೀಶ್ ಮೇಸ್ತ,ಲೋಲಕ್ಷಿ ಪಂಡಿತ್,ಜೆಸಿಂತ,ತುಂಗ ಹಾಗೂ ಪಿಡಿಒ ಶೋಭಾ,ಸಂಜೀವಿನಿ ಸಂಘದ ಸದಸ್ಯರು ಉಪಸ್ಥಿತರಿದ್ದರು.ಪ್ರಿಯಾಂಕಾ ವಂದಿಸಿದರು.ನಾನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಅತ್ಯುತ್ತಮ ಸ್ವಸಾಹಯ ಸಂಘಗಳನ್ನು ಗೌರವಿಸಲಾಯಿತು.ರೇಷ್ಮಾ ಸ್ವಾಗತಿಸಿದರು.ಪ್ರಮೀಳಾ ನಿರೂಪಿಸಿದರು.

ಸಂಗಮ ಸಂಜೀವಿನಿ ಒಕ್ಕೂಟ ಮಹಾಸಭೆ

ಕುಂದಾಪುರ:ಸಂಗಮ ಸಂಜೀವಿನಿ ಒಕ್ಕೂಟ ನಾವುಂದ ಅದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ನಾವುಂದ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆಯಿತು.ಒಕ್ಕೂಟ ಅಧ್ಯಕ್ಷತೆ ಪದ್ಮಾವತಿ ಅಧ್ಯಕ್ಷತೆ ವಹಿಸಿದ್ದರು.ನಾವುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹ ದೇವಾಡಿಗ.ವಲಯ ವ್ಯವಸ್ಥಾಪಕ ಮಹೇಂದ್ರ,ಜಲಜೀವನ ಮಿಷನ್ ವಿಶ್ವನಾಥ,ಆರೋಗ್ಯ ಇಲಾಖೆ ಸಿಬ್ಬಂದಿ ಮಿತ್ರ,ಪಂಚಾಯಿತಿ ಸದಸ್ಯರಾದ ರಾಮ ಖಾರ್ವಿ,ಶಾರದ,ಜಾನಕಿ,ಮುತ್ತು,ಎಂಬಿಕೆ,ಎಲ್‍ಸಿಆರ್‍ಪಿ,ಪಶುಸಖಿ,ಕೃಷಿ ಸಖಿ,ಎಸ್‍ಎಲ್‍ಆರ್‍ಎಂ ಮೇಲ್ವಿಚಾರಕಿ ಉಪಸ್ಥಿತರಿದ್ದರು.ಪ್ರೇಮಾ ಸ್ವಾಗತಿಸಿದರು.ಎಂಬಿಕೆ ಕಸ್ತೂರಿ ವರದಿ ವಾಚಿಸಿದರು.ಸುಮಂಗಲ ವಂದಿಸಿದರು.ವರದಿ-ಜಗದೀಶನಿಮ್ಮ ಸುದ್ದಿಗಳನ್ನು ನಮ್ಮ ಜಾಲತಾಣದಲ್ಲಿ ಪ್ರಕಟಿಸಲು ಸಂಪರ್ಕಿಸಿ-9916284048

You cannot copy content of this page