ಧರಣಿ ಸಂಜೀವಿನಿ ಒಕ್ಕೂಟ ವಾರ್ಷಿಕ ಮಹಾಸಭೆ

ಕುಂದಾಪುರ:ಜಿಲ್ಲಾ ಪಂಚಾಯಿತಿ ಉಡುಪಿ,ತಾಲೂಕು ಪಂಚಾಯಿತಿ ಬೈಂದೂರು,ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ ಸಹಕಾರದಲ್ಲಿ ಧರಣಿ ಸಂಜೀವಿನಿ ನಾಡ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ಆಶ್ರಯದಲ್ಲಿ ವಾರ್ಷಿಕ ಮಹಾಸಭೆ ನಾಡ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.ಒಕ್ಕೂಟದ ಅಧ್ಯಕ್ಷೆ ಜಯಂತಿ ಬಡಾಕೆರೆ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಸಂಪನ್ಮೂಲ ವ್ಯಕ್ತಿ ಸಾಂತ್ವನ ಕೇಂದ್ರದ ನಿರಂಜನಿ ಲಿಂಗತ್ವದ ಕುರಿತು ಮಾಹಿತಿ ನೀಡಿದರು.ರುಡ್ ಸೆಟ್ ಸಂಸ್ಥೆ ನಿರ್ದೇಶಕ ಬೊಮ್ಮಾಯಿ,ಕೆನರಾ ಆರ್ಥಿಕ ಸಾಕ್ಷರತಾ ಸಂಸ್ಥೆ ಆಶಾಲತ ಸ್ವ ಉದ್ಯೋಗ […]

ಓರಿಯೆಂಟೆಷನ್ ಕಾರ್ಯಕ್ರಮ ಉದ್ಘಾಟನೆ:ಓದಿನಲ್ಲಿ ನಿರಂತರತೆ ಕಾಪಾಡಿಕೊಳ್ಳುವುದು ಮುಖ್ಯ-ಸಂಸ್ಥಾಪಕ ಸುಬ್ರಹ್ಮಣ್ಯ

ಕುಂದಾಪುರ:ಬ್ರಹ್ಮವಾರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಓರಿಯೆಂಟೆಷನ್ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಯಿತು.ಸಂಸ್ಥೆಯ ಸಂಸ್ಥಾಪಕ ಸುಬ್ರಹ್ಮಣ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪೋಷಕರ ಜವಾಬ್ದಾರಿ ಹಾಗೂ ಕಾಲೇಜಿನಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಮಾತನಾಡಿ,ಶಿಸ್ತು ಸಂಯಮ ಆತ್ಮವಿಶ್ವಾಸವನ್ನು ಹೊಂದಿರುವುದರಿಂದ ಉತ್ತಮ ವಿದ್ಯಾರ್ಥಿ ಆಗುವುದರ ಜತೆಗೆ ಗುರಿಯನ್ನು ಕೂಡ ಸಾಧಿಸಲು ಸಾಧ್ಯವಿದೆ.ಓದಿನಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.ಕಾಲೇಜಿನ ಪ್ರಿನ್ಸಿಪಾಲ್ ಡಾ.ಸೀಮಾ ಜಿ ಭಟ್ ಮಾತನಾಡಿ.ಕಾಲೇಜಿನಲ್ಲಿರುವ ಲಭ್ಯವಿರುವ ಕೋರ್ಸ್‍ಗಳ ಕುರಿತು ಹಾಗೂ ಉಪನ್ಯಾಸಕರ ಪರಿಚಯ ವಿದ್ಯಾರ್ಥಿಗಳಿಗೆ ನೀಡಿದರು.ವಿಶ್ವವಿದ್ಯಾನಿಲಯದ […]

ಧರೆಗುರುಳಿದ ಮಹಾರಾಜ ಸ್ವಾಮಿ ದೇವಸ್ಥಾನದ ಪ್ರಾಂಗಾಣದ ಸೀಟ್ ಮಾಡು

ಕುಂದಾಪುರ:ಆರ್ಭಟಿಸಿದ ಗಾಳಿ ರಭಸಕ್ಕೆ ಬೈಂದೂರು ತಾಲೂಕಿನ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿನ ಪ್ರಾಂಗಾಣದ ಸೀಟ್ ಮಾಡು ತುಂಡು ತುಂಡಾಗಿ ಕೆಳಕ್ಕೆ ಬಿದ್ದಿದೆ.ಮಳೆ ನೀರು ದೇವಾಲಯದ ಒಳಗಡೆ ಸುರಿಯುತ್ತಿದೆ.ಕರ್ಕಾಟಕ ಅಮಾವಾಸ್ಯೆ ಜಾತ್ರೆಕ್ಕೆಂದು ಹೊರಗಡೆ ಹಾಕಿದ ಕಬ್ಬಿಣದ ಸೀಟ್ ಚಪ್ಪರ ಗಾಳಿ ಹೊಡೆತಕ್ಕೆ ತುಂಡರಸಿ ಕೆಳಗೆ ಬಿದ್ದಿದ್ದು.ಚಪ್ಪರಕ್ಕೆ ಹಾಕಿದ ಕಬ್ಬಿಣದ ಸೀಟ್ ಚೆಲ್ಲಾಪಿಲ್ಲಿಯಾಗಿವೆ.

You cannot copy content of this page