ರಜೆ ಘೋಷಣೆ ಸಂದರ್ಭ ಸಮನ್ವಯ ಅಗತ್ಯ:ಶಾಸಕ ಗುರುರಾಜ್ ಗಂಟಿಹೊಳೆ

ಬೈಂದೂರು:ಮಳೆ,ನೆರೆ ಬಂದ ಸಂದರ್ಭದಲ್ಲಿ ಅಧಿಕಾರಿಗಳು ಸಮನ್ವಯ ಸಾಧಿಸಿಕೊಂಡು ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಬೇಕಾಗುತ್ತದೆ. ಇಲ್ಲವಾದರೆ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ.ಬೈಂದೂರು ಮತ್ತು ಕುಂದಾಪುರ ಅವಳಿ ತಾಲೂಕುಗಳಿದ್ದಂತೆ ಇಡೀ ತಾಲೂಕಿಗೆ ರಜೆ ನೀಡುವ ಸಂದರ್ಭದಲ್ಲಿ ಎರಡು ಕಡೆ ಅನ್ವಯಿಸುವಂತೆ ಮಾಡಬೇಕು. ಬೈಂದೂರು ಭಾಗದ ಅನೇಕ ವಿದ್ಯಾರ್ಥಿಗಳು,ಶಿಕ್ಷಕರು ಕುಂದಾಪುರ ಭಾಗಕ್ಕೆ ಹೋಗುತ್ತಾರೆ, ಕುಂದಾಪುರದಿಂದ ಈ ಭಾಗಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆದರೆ ಶಿಕ್ಷಕರು, ಉಪನ್ಯಾಸಕರು ಹೆಚ್ಚಿದ್ದಾರೆ. ಹೀಗಾಗಿ ಬೈಂದೂರಿಗೆ ರಜೆ […]

ಗಂಗೊಳ್ಳಿ:ಮಳೆಗೆ ಮನೆ ಕುಸಿದು ಬಿದ್ದು ಹಾನಿ

ಕುಂದಾಪುರ:ಗುರುವಾರ ಬೀಸಿದ ಭಾರಿ ಗಾಳಿ ಮಳೆಗೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲರ್ ಬೆಟ್ಟು ನಿವಾಸಿ ರೇಖಾ ಖಾರ್ವಿ ಅವರ ಮನೆ ಕುಸಿದು ಬಿದ್ದು ಅಂದಾಜು 10 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದ ಘಟನೆ ನಡಿದಿದೆ.ಗಂಗೊಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುರುದ್ವೀಪ ಪ್ರದೇಶದಲ್ಲಿ ಮತ್ತೆ ನೆರೆ

ಕುಂದಾಪುರ:ಬುಧವಾರ ದಿಂದ ಸುರಿಯುತ್ತಿದ್ದ ಭಾರಿ ಮಳೆಗೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುದ್ವೀಪ ಪ್ರದೇಶದಲ್ಲಿ ಗುರುವಾರ ಮತ್ತೆ ನೆರೆ ನೀರು ಆವರಿಸಿದ್ದು.ಆಳೆತ್ತರದ ನೀರು ಮನೆಯನ್ನು ಆವರಿಸಿದೆ.ಹದಿನೈದು ದಿನಗಳಿಂದ ನಿರಂತರವಾಗಿ ನೆರೆ ಕಾಣಿಸಿಕೊಂಡಿದ್ದರಿಂದ ದ್ವೀಪ ವಾಸಿಗಳ ನಿದ್ದೆ ಹಾಳು ಗೇಡವಿದೆ.ಆತಂಕದಲ್ಲೆ ಜೀವನವನ್ನು ಸಾಗಿಸುವಂತೆ ಆಗಿದೆ.

You cannot copy content of this page