ಕುರುದ್ವೀಪ ಪ್ರದೇಶದಲ್ಲಿ ಮತ್ತೆ ನೆರೆ

ಕುಂದಾಪುರ:ಬುಧವಾರ ದಿಂದ ಸುರಿಯುತ್ತಿದ್ದ ಭಾರಿ ಮಳೆಗೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುದ್ವೀಪ ಪ್ರದೇಶದಲ್ಲಿ ಗುರುವಾರ ಮತ್ತೆ ನೆರೆ ನೀರು ಆವರಿಸಿದ್ದು.ಆಳೆತ್ತರದ ನೀರು ಮನೆಯನ್ನು ಆವರಿಸಿದೆ.ಹದಿನೈದು ದಿನಗಳಿಂದ ನಿರಂತರವಾಗಿ ನೆರೆ ಕಾಣಿಸಿಕೊಂಡಿದ್ದರಿಂದ ದ್ವೀಪ ವಾಸಿಗಳ ನಿದ್ದೆ ಹಾಳು ಗೇಡವಿದೆ.ಆತಂಕದಲ್ಲೆ ಜೀವನವನ್ನು ಸಾಗಿಸುವಂತೆ ಆಗಿದೆ.

ನಾಡ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿಕ್ಮರಿಗೆ ಸನ್ಮಾನ

ಕುಂದಾಪುರ:ಶ್ರೇಷ್ಠ ವೈದ್ಯ ಪ್ರಶಸ್ತಿ ಪಡೆದ ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿಕ್ಮರಿ ಅವರನ್ನು ಬಿಲ್ಲವ ಫ್ರೆಂಡ್ಸ್ ನಾಡ ವತಿಯಿಂದ ನಾಡ ಪಂಚಾಯಿತಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಸ್.ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ,ಮಾಜಿ ತಾ.ಪಂ ಸದಸ್ಯ ಜಗದೀಶ್ ಪೂಜಾರಿ,ಶೇಖರ್ ಮಾಸ್ಟರ್,ಬಿಲ್ಲವ ಸಂಘ ಬೈಂದೂರು ಅಧ್ಯಕ್ಷ ಗಣೇಶ್ ಪೂಜಾರಿ,ವಾಸು ಪೂಜಾರಿ,ಉದಯ ಪೂಜಾರಿ,ಕ್ರಷ್ಣ ಪೂಜಾರಿ,ಸಂದೀಪ್ ಪೂಜಾರಿ ಉಪಸ್ಥಿತರಿದ್ದರು.ಗಿರೀಶ್ ಬಿಲ್ಲವ ಸ್ವಾಗತಿಸಿದರು.ರವಿ ಪೂಜಾರಿ ಬಡಾಕೆರೆ […]

ವಿದ್ಯಾರ್ಥಿವೇತನಾ,ಪ್ರತಿಭಾ ಪುರಸ್ಕಾರ,ಪುಸ್ತಕ ವಿತರಣೆ

ಕುಂದಾಪುರ:ರಾಮಕ್ಷತ್ರಿಯ ಸಂಘ ಗಂಗೊಳ್ಳಿ ವತಿಯಿಂದ ವಿದ್ಯಾರ್ಥಿ ವೇತನಾ,ಪ್ರತಿಭಾ ಪುರಸ್ಕಾರ ಮತ್ತು ಕೊಡೆ,ಪುಸ್ತಕ ವಿತರಣೆ ಕಾರ್ಯಕ್ರಮ ಶ್ರೀ ಸೀತಾರಾಮಚಂದ್ರ ಸಭಾಭವನ ಗಂಗೊಳ್ಳಿಯಲ್ಲಿ ನಡೆಯಿತು.ರಾಮಕ್ಷತ್ರಿಯ ಸಂಘದ ಅಧ್ಯಕ್ಷ ರಾಜೇಶ್ ಎಮ್.ಜಿ ಅಧ್ಯಕ್ಷತೆ ವಹಿಸಿದ್ದರು.ಯುವಕ ಮಂಡಳ ಅಧ್ಯಕ್ಷ ರಾಜೇಂದ್ರ ಬಾಳಯ್ಯನ ಮನೆ,ಮಹಿಳಾ ಮಂಡಳಿ ಅಧ್ಯಕ್ಷೆ ಮೀನಾಕ್ಷಿ ರಾಮಚಂದ್ರ ಹಾಗೂ ರಾಮಕ್ಷತ್ರೀಯ ಸಂಘದ ಉಪಾಧ್ಯಕ್ಷ ಗಂಗಾಧರ ಉಗ್ರಾಣಿ ಮತ್ತು ವಾಸುದೇವ ನಡುಮನೆ,ಜೊತೆ ಕಾರ್ಯದರ್ಶಿ ಶ್ರೀನಿವಾಸ ಉಗ್ರಾಣಿ,ದಿನೇಶ ಉಗ್ರಾಣಿ,ಶ್ರೀಧರ ಹೊಸ್ಮನೆ,ನಾಗೇಶ್ ಅಪ್ಪಯ್ಯನ ಮನೆ,ರಾಧಾಕೃಷ್ಣ ಕೊಡಪಾಡಿ,ಕಾರ್ಯದರ್ಶಿ ಶ್ರೀಧರ ಎನ್ ಸಕ್ಲಾತಿ,ಸುರೇಶ ನಡುಮನೆ ಉಪಸ್ಥಿತರಿದ್ದರು.ಅಪ್ಪಯ್ಯನ ಮನೆ ಮಂಜುನಾಥ […]

You cannot copy content of this page