ಬೈಕ್ ಗೆ ಕಡವೆ ಡಿಕ್ಕಿ:ವ್ಯಕ್ತಿ ಗಂಭೀರ

ಕುಂದಾಪುರ:ಚಲಿಸುತ್ತಿದ್ದ ಬೈಕ್ ಗೆ ಕಡವೆ ಡಿಕ್ಕಿ ಹೊಡೆದ ಘಟನೆ ಕಮಲಶಿಲೆ ಎಂಬಲ್ಲಿ ಶನಿವಾರ ನಡೆದಿದೆ.ಅಪಘಾತದ ಹೊಡೆತಕ್ಕೆ ಕಡವೆ ಸ್ಥಳದಲ್ಲಿ ಮೃತಪಟ್ಟಿದೆ.ಬೈಕ್ ಸವಾರನಿಗೆ ಗಂಭೀರ ಸ್ವರೂಪದ ಗಾಯವಾಗಿದೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ಇಳರಾಜ ವಜ್ರ ಕಿರೀಟ ಸಮರ್ಪಣೆ

ಕುಂದಾಪುರ:ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಿ ಪರಮ ಭಕ್ತರಾದ ಸಂಗೀತ ನಿರ್ದೇಶಕ ಇಳಯ ರಾಜ ಅವರು ಶ್ರೀ ಮೂಕಾಂಬಿಕಾ ದೇವಿಗೆ ವಜ್ರ ಸಹಿತ ಆಭರಣಗಳು ಹಾಗೂ ವೀರಭದ್ರ ಸ್ವಾಮಿಗೆ ರಜತ ಕಿರೀಟ ಸಹಿತ ಖಡ್ಗವನ್ನು ಬುಧವಾರ ಸಮರ್ಪಿಸಿದ್ದಾರೆ.ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ದೇವಿಗೆ ವಜ್ರ ಕಿರೀಟವನ್ನು ಸಮರ್ಪಣೆ ಮಾಡಲಾಯಿತು.

ಗೋಪಾಡಿ ಚರ್ಕಿ ಸಮುದ್ರ ತೀರದಲ್ಲಿ ನೀರು ಪಾಲದ ಬೆಂಗಳೂರಿನ ಮೂವರು ಪ್ರವಾಸಿಗ ವಿದ್ಯಾರ್ಥಿಗಳು

ಕುಂದಾಪುರ:ಬೆಂಗಳೂರಿನಿಂದ ಪ್ರವಾಸಕ್ಕೆಂದು ಬಂದ ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಗೋಪಾಡಿ ಚರ್ಕಿ ಕಡಲ ತೀರದಲ್ಲಿ ಸಮುದ್ರಕ್ಕೆ ಇಳಿದು ನೀರುಪಾಲಾದ ಘಟನೆ ಭಾನುವಾರ ನಡೆದಿದೆ.ಕಡಲಿನಲ್ಲಿ ನಾಪತ್ತೆ ಆಗಿರುವ ವಿದ್ಯಾರ್ಥಿಗಳಿಗಾಗಿಈಶ್ವರ ಮಲ್ಪೆ,ಅಗ್ನಿಶಾಮಕ ದಳ ಕರಾವಳಿ ಕಾವಲು ಪೊಲೀಸ್ ಪಡೆಯಿಂದ ಶೋಧನಾ ಕಾರ್ಯ ಮಾಡಲಾಗಿದ್ದು.ಮೂವರು ವಿದ್ಯಾರ್ಥಿಗಳ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

You cannot copy content of this page