ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ:ವಿನಿಶ್ ಕುಮಾರ್ ಗೆದ್ವಿತೀಯ ಸ್ಥಾನ

ಕುಂದಾಪುರ:ಐಡಿಯಲ್ ಪ್ಲೇ ಅಬಾಕಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಚಿತ್ರದುರ್ಗದಲ್ಲಿ ನಡೆದ 19ನೇ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಗಂಗೊಳ್ಳಿ ಸೆಂಟರ್ ನ ವಿನಿಶ್ ಕುಮಾರ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಕಾವ್ರಾಡಿ ವಿಜಯಕುಮಾರ್ ಮತ್ತು ಅನುಷಾ ಸಿ ಬಂಗೇರಾ ದಂಪತಿಗಳ ಪುತ್ರ ಹಾಗೂ ಹಟ್ಟಿ ಅಂಗಡಿ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ. ಅಬಾಕಸ್ ಸಂಸ್ಥೆಯ ಶಿಕ್ಷಕರಾದ ಪ್ರಸನ್ನ ಕೆ ಬಿ ಮತ್ತು ಸುನಿತಾ ಅವರು ತರಬೇತಿ ನೀಡಿದ್ದರು.

ಸಾಮಾಜಿಕ ಕಳಕಳಿ ಮನೋಭಾವ ಹೊಂದಿರುವ ವ್ಯಕ್ತಿ ದಿ.ಎನ್.ಎ ಪೂಜಾರಿ ಅವರ ಕಾರ್ಯ ಸ್ಮರಣೀಯ

ಬೈಂದೂರು:ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರನ್ನು ಗಳಿಸಿರುವ ಹಿರಿಯರಾದ ದಿ.ನಾರಾಯಣ ಅನಂತ ಪೂಜಾರಿ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಕೆರ್ಗಾಲು ರಾಧಾಕೃಷ್ಣ ಸಭಾಭವನದಲ್ಲಿ ಭಾನುವಾರ ನಡೆಯಿತು.ದಿ.ನಾರಾಯಣ ಪೂಜಾರಿ ಅವರನ್ನು ಊರಿನ ಜನರು ಎನ್.ಎ ಪೂಜಾರಿ ಎಂದೆ ಕರೆಯುತ್ತಾರೆ.ಅತ್ಯಂತ ಕಡು ಬಡತನದಲ್ಲಿ ಹುಟ್ಟಿದ ಎನ್.ಎ ಪೂಜಾರಿ ಅವರು ಸ್ವಂತ ಪರಿಶ್ರಮದ ಮೂಲಕ ಮುಂಬೈನಲ್ಲಿ ರಾತ್ರಿ ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ಸ್ನೇಹಿತರ ಜತೆಗೆ ವಿದೇಶಕ್ಕೆ ತೆರಳಿದ ಅವರು ಪೆಟ್ರೋಲಿಯಂ ಘಟಕದಲ್ಲಿ ಇಂಜಿನಿಯರ್ ಆಗಿ ಕೆಲಸವನ್ನು ಪಡೆದು ಜೀವನವನ್ನು ಕಟ್ಟಿಕೊಳ್ಳುವುದರ ಮೂಲಕ […]

ಬಂಟರ ಯಾನೆ ನಾಡವರ ಸಂಘ ಬೈಂದೂರು 30 ಸಂಭ್ರಮ

ಬೈಂದೂರು:ಬಂಟರ ಯಾನೆ ನಾಡವರ ಸಂಘ ಬೈಂದೂರು ಅದರ 30 ರ ಸಂಭ್ರಮ ಕಾರ್ಯಕ್ರಮ ಹೆಮ್ಮಾಡಿ ಜಯಶ್ರೀ ಸಭಾಭವನದಲ್ಲಿ ಭಾನುವಾರ ನಡೆಯಿತು.ಕಾರ್ಯಕ್ರಮದ ಅಂಗವಾಗಿ ಗಣಹೋಮವನ್ನು ನೆರವೇರಿಸಲಾಯಿತು.ಭವ್ಯ ಮೆರವಣಿಗೆ ಮೂಲಕ ಅತಿಥಿಗಳನ್ನು ಚಂಡೆವಾದನ ದೊಂದಿಗೆ ಬರಮಾಡಿಕೊಳ್ಳಲಾಯಿತು.ವಿವಿಧ ತಂಡಗಳಿಂದ ಭಜನಾ ಸ್ಪರ್ಧೆ ಕಾರ್ಯಕ್ರಮ ಜರುಗಿತು.ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ,ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಿಸಲಾಯಿತು.ಭಜನ ಸ್ಪರ್ಧೆಯಲ್ಲಿ ಸ್ಪರ್ಧಿಸಿದ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.ಸಾಧಕರನ್ನು ಗೌರವಿಸಲಾಯಿತು.ಶ್ರೀ ಮಹಾಲಿಂಗೇಶ್ವರ ದೇಸ್ಥಾನ ಬಸ್ರೂರು ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಸಂಘಗಳನ್ನು ರಚಿಸಿಕೊಳ್ಳುವುದರ ಮುಖೇನ ಸಮುದಾಯದ […]

You cannot copy content of this page