ಶೈಕ್ಷಣಿಕ ನೆರವು,ಕಲಾ ಸಾಮಾಗ್ರಿಗಳು ವಿತರಣೆ

ಕುಂದಾಪುರ:ಶ್ರೀಇಂದುಧರ ದೇವಸ್ಥಾನ ಗಂಗೊಳ್ಳಿ ವತಿಯಿಂದ ಶೈಕ್ಷಣಿಕ ನೆರವು ಮತ್ತು ಕಲಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಶ್ರೀಇಂದುಧರ ಸಭಾಭವನದಲ್ಲಿ ಭಾನುವಾರ ನಡೆಯಿತು.ಎಚ್.ಗಣೇಶ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಕವಿತಾ ಕೃಷ್ಣಪ್ಪ ಶಿವಲಿಂಗಪ್ಪ ಅವರಿಗೆ ಶೈಕ್ಷಣಿಕ ನೆರವು ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಕಲಾ ಸಾಮಾಗ್ರಿಗಳನ್ನು ವಿತರಿಸಲಾಯಿತು.ಗೋಪಾಲ ಪೂಜಾರಿ,ದಿನೇಶ ಬಿಲ್ಲವ,ದೇವಸ್ಥಾನದ ಮೊಕ್ತೇಸರ ಸಂಜೀವ ಜಿ.ಟಿ,ನರಸಿಂಹ ಕೆ,ಸುಂದರ ಬಿ, ಜಿ.ಈಶ್ವರ,ಶಿವಾನಂದ ಜಿ.ಟಿ,ಕೃಷ್ಣಪ್ಪ ಶಿವಲಿಂಗಪ್ಪ ವೇಷಗಾರ್,ಸುಶೀಲಾ ಉಪಸ್ಥಿತರಿದ್ದರು.ಶ್ರೀಕಾಂತ ಸ್ವಾಗತಿಸಿದರು.ಸುರೇಶ ಜಿ ನಿರ್ವಹಿಸಿದರು.ಜಿ.ಈಶ್ವರ ವಂದಿಸಿದರು.

ಸ್ಪೋಕನ್ ಇಂಗ್ಲಿಷ್,ಕರಾಟೆ,ಯಕ್ಷಗಾನ ತರಗತಿ ಉದ್ಘಾಟನೆ

ಕುಂದಾಪುರ:ಸರಕಾರಿ ಹಿರಿಯ ಪ್ರಾಥಮಿಕ ಮೂಡ್ಲಕಟ್ಟೆ ಶಾಲೆಯಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿ,ಕರಾಟೆ ತರಗತಿ ಹಾಗೂ ಯಕ್ಷಗಾನ ತರಗತಿಗಳನ್ನು ಉದ್ಘಾಟನೆ ಮಾಡಲಾಯಿತು. ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವೈಸ್ ಪ್ರಿನ್ಸಿಪಾಲ್ ಮೇಲ್ವಿನ್ ಡಿಸೋಜಾ ಉದ್ಘಾಟಿಸಿದರು.ಎಸ್ ಡಿ ಎಂ ಸಿ ಅಧ್ಯಕ್ಷ ವಿಶ್ವನಾಥ್ ಶೇರೆಗಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ ಅಧ್ಯಕ್ಷ ಸಿದ್ದಾರ್ಥ್ ಶೆಟ್ಟಿ ಅವರು ಕೊಡುಗೆಯಾಗಿ ನೀಡಿದ ನೋಟ್ಸ್ ಪುಸ್ತಕಗಳನ್ನು ಪ್ರಿನ್ಸಿಪಾಲ್ ಮೇಲ್ವಿನ್ ಡಿಸೋಜಾ ವಿತರಿಸಿದರು. ಮೂಡ್ಲಕಟ್ಟೆ ಹಳೆ ವಿದ್ಯಾರ್ಥಿ ಶರತ್ ಆಚಾರ್ ಅವರು1 ನೇ ತರಗತಿಯ ವಿದ್ಯಾರ್ಥಿಗಳಿಗೆ […]

ವೈದ್ಯರ ದಿನಾಚರಣೆ, ಸನ್ಮಾನ ಕಾರ್ಯಕ್ರಮ

ಕುಂದಾಪುರ:ವಿಶ್ವ ವೈದ್ಯರ ದಿನಾಚರಣೆಯ ಅಂಗವಾಗಿ ಸಿದ್ಧಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿಯವರು,ಸಿದ್ಧಾಪುರದಲ್ಲಿ ಕಳೆದ ಎರಡುವರೆ ದಶಕಗಳಿಂದ ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಜಗದೀಶ್ ಶೆಟ್ಟಿ ಹಾಗೂ ಸಿದ್ಧಾಪುರ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ದೀಕ್ಷಾ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಿದರು.ವಿಶ್ರಾಂತ ಉಪನ್ಯಾಸಕರಾದ ಡಾ. ಶ್ರೀಕಾಂತ್ ರಾವ್ ಮಾತನಾಡಿ,ವೈದ್ಯೋ ನಾರಾಯಣ ಹರಿ ಎಂಬಂತೆ ದೇವರು ಕೊಡುವುದು ಜನ್ಮ,ವೈದ್ಯರು ನೀಡುವುದು ಮರುಜನ್ಮ.ರೋಗಿಗಳ ಕಣ್ಣಿಗೆ ವೈದ್ಯರು ದೇವರ ರೂಪದಲ್ಲಿ ಕಾಣುತ್ತಾರೆ ರೋಗಿಯ […]

You cannot copy content of this page