ಗ್ಯಾಸ್ ಟ್ಯಾಂಕರ್ ಗೆ ತೂಫಾನ್ ಕ್ರೂಸ್‌ರ್ ಡಿಕ್ಕಿ,10 ಮಂದಿಗೆ ಗಾಯ

ಬೈಂದೂರು:ರಾಷ್ಟ್ರೀಯ ಹೆದ್ದಾರಿ 66 ರ ವತ್ತಿನೆಣೆ ಬಳಿ ತೂಫಾನ್ ಕ್ರೂಸರ್ ಗಾಡಿ ಮತ್ತು ಗ್ಯಾಸ್ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದ ಘಟನೆ ಬುಧವಾರ ನಡೆದಿದೆ.ಅಪಘಾತದಲ್ಲಿ ತೂಫಾನ್ ಕ್ರೂಸರ್ ನಲ್ಲಿದ್ದ ಹತ್ತು ಮಂದಿಗೆ ಗಾಯಗಳಾಗಿದ್ದು ಬೈಂದೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಗ್ಯಾಸ್ ಟ್ಯಾಂಕರ್ ಕಾಸರಗೋಡು ಕಡೆಗೆ ಚಲಿಸುತ್ತಿದ್ದು ತೂಫಾನ್ ಕ್ರೂಸರ್ ಹುಬ್ಬಳ್ಳಿ ಮೂಲದವರು ಎನ್ನಲಾಗಿದೆ.ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡಾಕೆರೆ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಕಾರ್ತಿಕ ಮಾಸದ ದೀಪೋತ್ಸವ

ಬೈಂದುರು:ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಡಾಕೆರೆಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ಸಣ್ಣಕಳ್ಳಿ ಮನೆ ಕುಟುಂಬಸ್ಥರು ಹಾಗೂ ಊರಿನ ಗ್ರಾಮಸ್ಥರ ಸಯೋಗದೊಂದಿಗೆ ವೈಭವದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಬುಧವಾರ ಸಂಭ್ರಮದಿಂದ ನಡೆಯಿತು.ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದ ಸುತ್ತಲೂ ಹೂವಿನ ಅಲಂಕಾರ ಮಾಡಲಾಯಿತು ಹಾಗೂ ವಿದ್ಯುತ್ ದೀಪಾಗಳಿಂದ ಸಿಂಗಾರಿಸಲಾಯಿತು,ಹಣತೆ ದೀಪಗಳನ್ನು ಹಚ್ಚಲಾಗಿತ್ತು.ದೇವಸ್ಥಾನದ ಪ್ರಧಾನ ಅರ್ಚಕರಾದ ಮಹಾಬಲೇಶ್ವರ ಹೊಳ್ಳ ವಕ್ಕೇರಿ ಬಡಾಕೆರೆ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಸಾನಿಧ್ಯದಲ್ಲಿ ಸಂಪನ್ನಗೊಂಡಿತ್ತು.ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು […]

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಸುಣ್ಣಾರಿ:ಕ್ಲಾಟ್ ಪರೀಕ್ಷೆಯಲ್ಲಿ ಅನಘಾ ನಾಯಕ್ ಸಾಧನೆ

ಕುಂದಾಪುರ:ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅನಘಾ ನಾಯಕ್ ಅವರು ಕೇಂದ್ರೀಕೃತ ರಾಷ್ಟ್ರೀಯ ಮಟ್ಟದ ಸರ್ಕಾರಿ ಪ್ರವೇಶ ಪರೀಕ್ಷೆಯಾದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಅಐಂಖಿ-2023) ಯಲ್ಲಿ ಅತ್ಯುತ್ತಮ ಸಾಧನೆ ಮಾಡುವುದರೊಂದಿಗೆ ರಾಜ್ಯ ಮಟ್ಟದಲ್ಲಿ 964ನೇ ರ್ಯಾಂಕ್ ಗಳಿಸುವುದರ ಮೂಲಕ ವಿದ್ಯಾಸಂಸ್ಥೆಗೆ ಕೀರ್ತಿ ತಂದಿದ್ದಾರೆ.ಅನಘಾ ನಾಯಕ್ ಅವರು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದಾರೆ.ಈ ವಿದ್ಯಾ ಸಂಸ್ಥೆಯು,ವಿದ್ಯಾರ್ಥಿಗಳಿಗೆ ಅನೇಕ ಸ್ಪರ್ಧಾತಕ್ಮ ಪರೀಕ್ಷೆಗಳಿಗೆ […]

You cannot copy content of this page