ಮರವಂತೆ:ಡಿವೈಡರ್ ಏರಿದ ಬಸ್,ವಿದ್ಯುತ್ ಕಂಬಕ್ಕೆ ಡಿಕ್ಕಿ

ಕುಂದಾಪುರ:ಕೇರಳದಿಂದ ದಾಂಡೇಲಿ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಟೂರಿಸ್ಟ್ ಬಸ್ ಬೈಂದೂರು ತಾಲೂಕಿನ ಮರವಂತೆ ಕೇಶವ ಬೊಬ್ಬರ್ಯ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ಬೆಳಗಿನ ಜಾವಾ 5.30 ರ ಸುಮಾರಿಗೆ ನಿಯಂತ್ರಣ ಕಳೆದು ಕೊಂಡು ಡಿವೈಡರ್ ಮಧ್ಯ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.ಎರಡು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು,ಬಸ್ಸಿನ ಮುಂಭಾಗ ಜಖಂ ಗೊಂಡಿದೆ.ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.ಅಪಘಾತದ ರಭಸಕ್ಕೆ ಬುಡ ಸಮೇತ ಕಿತ್ತು ಬಂದಿದ್ದ ವಿದ್ಯುತ್ ಕಂಬ ಬಸ್ಸಿನ ಮುಂಭಾಗದಲ್ಲಿ ಸಿಲುಕಿ ಕೊಂಡಿತ್ತು.

ಶ್ರೀಪದ್ಮಾವತಿ ದೇವಿ ಕೃಪಾಪೋಷಿತ ಯಕ್ಷಗಾನ ಮಂಡಳಿ,ಶ್ರೀಕ್ಷೇತ್ರ ಬೋಳಂಬಳ್ಳಿ

ಕುಂದಾಪುರ:ಬೈಂದೂರು ತಾಲೂಕಿನ ಪ್ರಸಿದ್ದ ಕಾಲ್ತೋಡು ಬೋಳಂಬಳ್ಳಿ ಶ್ರೀಪದ್ಮಾವತಿ ದೇವಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀಧರ್ಮರಾಜ ಜೈನ್ ಬೋಳಂಬಳ್ಳಿ ಅವರ ನೇತೃತ್ವದಲ್ಲಿ ಶ್ರೀ ಪದ್ಮಾವತಿ ದೇವಿ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಬೋಳಂಬಳ್ಳಿ ವತಿಯಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.ಪ್ರದರ್ಶನಗೊಳ್ಳುವ ಪ್ರಸಂಗಗಳು-ಕಾವ್ಯ ತರಂಗಿಣಿ,ಕುಲದೈವ ಪಂಜುರ್ಲಿ,ಉಮಲೀಲೆ,ಭರಣಿ ನಕ್ಷತ್ರ,ಜೀವನ ಯಾತ್ರೆ ಸೇರಿದಂತೆ ಇನ್ನಿತರ ಜನಪ್ರಿಯ ಪ್ರಸಂಗಗಳು ಮೇಳದ ವತಿಯಿಂದ ಪ್ರದರ್ಶನಗೊಳ್ಳಲಿದೆ.ಕಲಾಭಿಮಾನಿಗಳು ಶ್ರೀಬೋಳಂಬಳ್ಳಿ ಮೇಳವನ್ನು ಪ್ರೋತ್ಸಾಹಿಸಬೇಕೆಂದು ಕ್ಷೇತ್ರದ ಧರ್ಮದರ್ಶಿಗಳಾದ ಧರ್ಮರಾಜ ಜೈನ್ ಕೇಳಿಕೊಂಡಿದ್ದಾರೆ

ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ, ಜನತಾ ಕಾಲೇಜಿನ ಪ್ರಜ್ವಲ್ ಪಿ.ಶೆಟ್ಟಿಗೆ ಬೆಳ್ಳಿ

ಕುಂದಾಪುರ:ವಿ.ಕೆ.ಬುಡಕಾನ್ ಸೆಲ್ಫ್ ಡಿಫೆನ್ಸ್ ಮತ್ತು ಕರಾಟೆ ಅಶೋಶಿಯನ್ ಒಪ್ ಇಂಡಿಯಾ ಅವರ ಆಯೋಜನೆಯ,ಮಂದಾರ್ತಿ ಟ್ರೋಫಿ-2023 ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ,ಕುಮಟೆ ವಿಭಾಗದಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಪ್ರಜ್ವಲ್ ಪಿ.ಶೆಟ್ಟಿ ಬೆಳ್ಳಿಯ ಪದಕವನ್ನು ಜಯಿಸಿದ್ದಾರೆ.ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರುಬೋಧಕ,ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

You cannot copy content of this page