ನಾವುಂದ:ಇಂಜಿನಿಯರ್ ವಿಜೇಂದ್ರ ಆಚಾರ್ಯಗೆ ಸನ್ಮಾನ

ಬೈಂದೂರು:ಸರ್.ಎಂ ವಿಶೇಶ್ವರಯ್ಯರವರ ಜನ್ಮ ಜಯಂತಿ ಪ್ರಯುಕ್ತ ನಾವುಂದ ಮೆಸ್ಕಾಂ ವಿಭಾಗದ ಜೂನಿಯರ್ ಇಂಜಿನಿಯರ್ (ಜೆ.ಇ) ವಿಜೇಂದ್ರ ಆಚಾರ್ಯ ಅವರನ್ನು ನಾವುಂದ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.ನಾವುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರದೀಪ ಶೆಟ್ಟಿ,ನಾವುಂದ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ,ಕ್ಲಬ್ಬಿನ ಕಾರ್ಯದರ್ಶಿ ಅಶೋಕ ವಿ ಆಚಾರ್ಯ,ಉಪಾಧ್ಯಕ್ಷ ಸಮರ ಶೆಟ್ಟಿ,ಮೆಸ್ಕಾಂ ಮೇಲ್ವಿಚಾರಕ ಅಧಿಕಾರಿ ಸುಧಾಕರ,ದಿನೇಶ್ ಆಚಾರ್ಯ,ವಿಜಯ ಶೆಟ್ಟಿ,ಪ್ರಮೋದ್ ಪೂಜಾರಿ ಉಪಸ್ಥಿತರಿದ್ದರು.

ಪಡುಕೋಣೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ

ಕುಂದಾಪುರ:ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ವಲಯದ ಆಶ್ರಯದಲ್ಲಿ ಪಡುಕೋಣೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಕಾರ್ಯಕ್ರಮ ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆ ಪಡುಕೋಣೆಯಲ್ಲಿ ನಡೆಯಿತು.ಶಾಲೆಯ ಸಂಚಾಲಕ ವಂದನೀಯ ಫ್ರಾನ್ಸಿಸ್ ಕರ್ನೇಲಿಯೊ ಅಧ್ಯಕ್ಷತೆಯನ್ನು ವಹಿಸಿದ್ದರು,ನಾಡಾ ಗ್ರಾ.ಪಂ ಅಧ್ಯಕ್ಷೆ ಪಾರ್ವತಿ ಉದ್ಘಾಟಿಸಿದರು.ಗ್ರಾ.ಪಂ ಸದಸ್ಯರಾದ ಸುಧಾಕರ ಶೆಟ್ಟಿ ಮತ್ತು ಜ್ಯೋತಿ,ಶಾಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ್ ಪೂಜಾರಿ,ಗಿರಿಜಾ,ಅಚ್ಯತ್ ಬಿಲ್ಲವ,ಪ್ರಭು ಕೆನಡಿ ಪರೇರಾ,ಅಲೆಕ್ಸ್ ಆಂಟನಿ ಡಿಸೋಜಾ,ವಿನ್ಸೆಂಟ್ ಡಿಸೋಜಾ,ಫಿಲಿಪ್ […]

ಸಾರ್ವಜನಿಕ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಸಭೆ

ಕುಂದಾಪುರ:ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳ ಸಭೆ ಕೊಂಕಣ ಖಾರ್ವಿ ಸಭಾಭವನದಲ್ಲಿ ಗುರುವಾರ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬೈಂದೂರು ವೃತ್ತ ನಿರೀಕ್ಷ ಸವಿತ್ರಾ ತೆಜ್ ಮಾತನಾಡಿ,ಸಾರ್ವಜನಿಕವಾಗಿ ಆಚರಣೆಗೊಳ್ಳುವ ಗಣೇಶೋತ್ಸವ ಕಾರ್ಯಕ್ರಮದ ಬಗ್ಗೆ ಸರಕಾರದ ಮಾರ್ಗಸೂಚಿ ಮತ್ತು ಧ್ವನಿ ವರ್ಧಕ ಬಳಕೆ ಕುರಿತು ಮಾಹಿತಿ ನೀಡಿದರು.ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚಿಸಿದರು.ಈ ಸಂದರ್ಭ ಗಂಗೊಳ್ಳಿ ಠಾಣೆ ಪಿಎಸ್‌ಐ ಹರೀಶ್ ಆರ್ ನಾಯ್ಕ್ ಮತ್ತು ತನಿಖೆ ಪಿಎಸ್‌ಐ ಬಸವರಾಜ್ ಉಪಸ್ಥಿತರಿದ್ದರು.ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು […]

You cannot copy content of this page