ಹೆಜ್ಜೇನು ಗೂಡಿಗೆ ಹಿಟ್ ಆದ ಚೆಂಡು,ಆಟಗಾರರು ಕಂಗಾಲು

ಮಂಗಳೂರು:ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದಾಗ ಬ್ಯಾಟ್ಸ್‌ಮನ್ ಹೊಡೆದ ಚೆಂಡು ತೆಂಗಿನ ಮರದಲ್ಲಿದ್ದ ಹೆಜ್ಜೇನು ಗೂಡಿಗೆ ಬಡಿದ ಪರಿಣಾಮ ಜೇನು ಹುಳಗಳು ಗುಂಪಾಗಿ ದಾಳಿಯಿಟ್ಟ ಘಟನೆ ಉಳ್ಳಾಲ ಒಂಭತ್ತುಕೆರೆಯಲ್ಲಿ ನಡೆದಿದೆ.ಹೆಜ್ಜೇನು ದಾಳಿಯಿಂದ ಕಂಗಾಲಾದ ಕ್ರಿಕೆಟ್ ಆಟಗಾರರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ.ಭಾನುವಾರ ಒಂಬತ್ತುಕೆರೆಯ అనిల ಕಂಪೌಂಡ್ ಮೈದಾನದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದ ಸಂದರ್ಭ ಆಟಗಾರರೊಬ್ಬರು ಹೊಡೆದ ಚೆಂಡು ನೇರವಾಗಿ ಹೆಜ್ಜೇನು ಗೂಡು ಕಟ್ಟಿದ್ದ ತೆಂಗಿನ ಮರಕ್ಕೆ ತಾಗಿದೆ.ಪರಿಣಾಮ ಕ್ರಿಕೆಟ್ ಮೈದಾನಕ್ಕೆ ದಾಳಿ ಇಟ್ಟ ಹೆಜ್ಜೇನು ನೊಣಗಳು ಆಟಗಾರರ ಮೇಲೆ ದಾಳಿ […]

ತ್ರಾಸಿ:ಅಪರಿಚಿತ ಗಂಡಸಿನ ಶವ ಪತ್ತೆ

ಕುಂದಾಪುರ:ತಾಲೂಕಿನ ತ್ರಾಸಿ ಗ್ರಾಮದ ಕಂಚುಗೋಡು ಸಮೀಪ ಕಡಲ ತೀರದ ಬಳಿ ಅಂದಾಜು 50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಭಾನುವಾರ ಪತ್ತೆಯಾಗಿದೆ.ಗಂಗೊಳ್ಳಿ ಠಾಣೆ ಪಿಎಸ್‍ಐ ಗುಪ್ತಚರ ವಿಭಾಗ ಬಸವ ಕನಟ್ಟಿ,ಕರಾವಳಿ ನಿಯಂತ್ರಣ ದಳ ಸಿಬ್ಬಂದಿ ನಿಶಾಂತ ಖಾರ್ವಿ,ಹೆಡ್ ಕಾನ್ಸ್ಟೇಬಲ್ ನಾಗರಾಜ ನಾಯಕವಾಡಿ,ಮಾಳಿಂಗರಾಯ ಸ್ಥಳದಲ್ಲಿ ಹಾಜರಿದ್ದರು.ಆಪತ್ಭಾಂದವ ಇಬ್ರಾಹಿಂ ಗಂಗೊಳ್ಳಿ,ಕೃಷ್ಣ,ಕಿಟ್ಟ,ಅಕ್ಷಯ್ ಖಾರ್ವಿ ಅವರು ಶವವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.

ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ ಮಂಗಳೂರು:ನೂತನ ಮನೆ ಕೀಲಿಕೈ ಹಸ್ತಾಂತರ

ಮಂಗಳೂರು:ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ (ರಿ) ಮಂಗಳೂರು ಪಟ್ಲ ಯಕ್ಷಾಶ್ರಯ ಯೋಜನೆಯಡಿಯಲ್ಲಿ ವಿಟ್ಲ ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರೀ ದೇವಸ್ಥಾನದ ಹತ್ತಿರದಲ್ಲಿ ನಿರ್ಮಾಣಗೊಂಡಿರುವ “ಶ್ರೀದೇವಿ ನಿಲಯ” ನೂತನ ಮನೆಯ ಕೀಲಿಕೈಯನ್ನು ಹನುಮ ಗಿರಿಮೇಳದ ಕಲಾವಿದ ಶ್ರೀ ರೂಪೇಶ್ ಆಚಾರ್ಯ ಅವರಿಗೆ ಭಾನುವಾರ ಹಸ್ತಾಂತರ ಮಾಡಲಾಯಿತು.ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಹಾಗೂ ನೂತನ ಮನೆಯ ನಿರ್ಮಾಣಕ್ಕೆ ಕಾರಣೀಕರ್ತರಾದ ದಾನಿಗಳಾದ ಅಶೋಕ್ ಶೆಟ್ಟಿ ಬೆಳ್ಳಾಡಿ ಅವರು ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಿ ಶುಭಹಾರೈಸಿದರು.ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ವಿಟ್ಲ ಘಟಕದ ಪ್ರಧಾನ […]

You cannot copy content of this page