ಹೆಜ್ಜೇನು ಗೂಡಿಗೆ ಹಿಟ್ ಆದ ಚೆಂಡು,ಆಟಗಾರರು ಕಂಗಾಲು
ಮಂಗಳೂರು:ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದಾಗ ಬ್ಯಾಟ್ಸ್ಮನ್ ಹೊಡೆದ ಚೆಂಡು ತೆಂಗಿನ ಮರದಲ್ಲಿದ್ದ ಹೆಜ್ಜೇನು ಗೂಡಿಗೆ ಬಡಿದ ಪರಿಣಾಮ ಜೇನು ಹುಳಗಳು ಗುಂಪಾಗಿ ದಾಳಿಯಿಟ್ಟ ಘಟನೆ ಉಳ್ಳಾಲ ಒಂಭತ್ತುಕೆರೆಯಲ್ಲಿ ನಡೆದಿದೆ.ಹೆಜ್ಜೇನು ದಾಳಿಯಿಂದ ಕಂಗಾಲಾದ ಕ್ರಿಕೆಟ್ ಆಟಗಾರರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ.ಭಾನುವಾರ ಒಂಬತ್ತುಕೆರೆಯ అనిల ಕಂಪೌಂಡ್ ಮೈದಾನದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದ ಸಂದರ್ಭ ಆಟಗಾರರೊಬ್ಬರು ಹೊಡೆದ ಚೆಂಡು ನೇರವಾಗಿ ಹೆಜ್ಜೇನು ಗೂಡು ಕಟ್ಟಿದ್ದ ತೆಂಗಿನ ಮರಕ್ಕೆ ತಾಗಿದೆ.ಪರಿಣಾಮ ಕ್ರಿಕೆಟ್ ಮೈದಾನಕ್ಕೆ ದಾಳಿ ಇಟ್ಟ ಹೆಜ್ಜೇನು ನೊಣಗಳು ಆಟಗಾರರ ಮೇಲೆ ದಾಳಿ […]



























































































































































































































































































































































































































































































































































































































































































































































































































































































































































































































































































































































































































































































































































































































































































