ಲಕ್ಸ್ ರಾಜೇಶ್‍ಗೆ ಚಾಂಪಿಯನ್ ಪ್ರಶಸ್ತಿ

ಕುಂದಾಪುರ:ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ತಮಿಳುನಾಡಿನ ಕೊಯಂಮುತ್ತೂರಿನಲ್ಲಿ ನಡೆದ 19ನೇ ರಾಷ್ಟ್ರೀಯ ಮಟ್ಟದ ಅಬಾಕಸ್ ಮೆಂಟಲ್ ಅಥ್ರ್ಮೆಮೆಟಿಕ್ ಮತ್ತು 15ನೇ ವೇದಿಕ್ ಮ್ಯಾಥ್ಸೆ ಸ್ಪರ್ಧೆಯಲ್ಲಿ ಭಾಗವಹಿಸಿದ ಲಕ್ಸ್ ರಾಜೇಶ್ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ ಜಯಿಸಿದ್ದಾರೆ.ತಮಿಳುನಾಡಿನ ಮಹಾಬಲಿಪುರಂನಲ್ಲಿ ಜರುಗಿದ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಗೋಲ್ಡ್ ಪ್ರೈಸ್ ವಿನ್ನರ್ ಇನ್ ವಲ್ರ್ಡ್ ಸಿಟಿ-2023 ಪ್ರಶಸ್ತಿಯನ್ನು ಜಯಿಸಿದ್ದರು.ಅರಾಟೆ ರೇಷ್ಮ ಮತ್ತು ರಾಜೇಶ್ ದಂಪತಿಗಳ ಪುತ್ರ.

ಗಂಗೊಳ್ಳಿ:ಶ್ರೀಮಹಾಂಕಾಳಿ ಅಮ್ಮನವರ ಜಾತ್ರಾ ಮಹೋತ್ಸವ

ಕುಂದಾಪುರ:ಕರ್ನಾಟಕ ಕರಾವಳಿ ಪ್ರಸಿದ್ಧ ಮಾರಿ ಜಾತ್ರೆ ಎಂದೆ ಹೆಸರುವಾಸಿಯಾದ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಗ್ರಾಮ ದೇವತೆಯಾದ ಶ್ರೀಮಹಾಂಕಾಳಿ ಅಮ್ಮನವರ ಎರಡನೇ ದಿನದ ಜಾತ್ರಾ ಮಹೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬುಧವಾರ ಸಂಪ್ರದಾಯ ಬದ್ಧವಾಗಿ ನಡೆಯಿತು.ಶ್ರೀಮಹಾಂಕಾಳಿ ಅಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀದೇವಿಗೆ ಅಲಂಕಾರ ಪೂಜೆ,ಮಂಗಳಾರತಿ ಸೇವೆ,ಶ್ರೀದೇವರ ಸಂದರ್ಶನ ಹಾಗೂ ಪ್ರಸಾದ ವಿತರಣೆ ಜರುಗಿತು.ಅಕ್ಕಿರೊಟ್ಟಿ ಪ್ರಸಾದ ವಿತರಣೆ:ಶ್ರೀದೇವಿಗೆ ಸಮರ್ಪಿಸಿದ ಅಕ್ಕಿಯಿಂದ ಮಾಡಿದ ರೊಟ್ಟಿ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ.ಅಮ್ಮನವರ ಪ್ರಸಾದವನ್ನು ಸ್ವೀಕರಿಸಲೆಂದೆ,ಕುಂದಾಪು,ಬೈಂದೂರು ಭಾಗದ ಭಕ್ತರು ಸೇರಿದಂತೆ,ಭಟ್ಕಳ,ಹೊನ್ನವಾರ,ಕಾರವಾರ,ಉಡುಪಿ,ಮಂಗಳೂರು ಭಾಗದಿಂದಲೂ […]

ನರಸಿಂಹ ದೇವಾಡಿಗ ಅರೆಹೊಳೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಆಯ್ಕೆ

ಕುಂದಾಪುರ:ಬೈಂದೂರು ತಾಲೂಕಿನ ಅರೆಹೊಳೆ ಹಾಲು ಉತ್ಪಾದಕರ ಸಂಘ ಅದರ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ನರಸಿಂಹ ದೇವಾಡಿಗ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ವಿವೇಕಾನಂದ ಆಚಾರ್ಯ,ನಿರ್ದೇಶಕರಾಗಿ ಎ.ರಮಾನಂದ ಮಧ್ಯಸ್ಥ,ಅಣ್ಣಪ್ಪ ಪೂಜಾರಿ,ರಾಜು ದೇವಾಡಿಗ,ಹರೀಶ ಆಚಾರ್ಯ,ರಾಮ,ಬೇಬಿ ಪೂಜಾರಿ,ಭಾರತಿ ಆಚಾರ್ಯ,ಕಮಲ ದೇವಾಡಿಗ,ದೇವಕಿ ಚೆಂದನ್ ಆಯ್ಕೆಯಾದರು.ಸುನೀಲ್ ಕುಮಾರ್ ಚುನಾವಣಾ ವೀಕ್ಷಕರಾಗಿ ಕರ್ತವ್ಯವನ್ನು ನಿರ್ವಹಿಸಿದ್ದರು.ಸಂಘದ ಕಾರ್ಯದರ್ಶಿ ಉಮೇಶ ಮದ್ಯಸ್ಥ,ಸಹಾಯಕಿ ಜ್ಯೋತಿ ಉಪಸ್ಥಿತರಿದ್ದರು.

You cannot copy content of this page