ಶ್ರೀ ಯಕ್ಷೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಬೆಳ್ಳಾಡಿ ಎರಡನೇ ವರ್ಷದ ವರ್ಧಂತ್ಯೋತ್ಸವ, ನೂತನ ಮುಖಮಂಟಪ ಲೋಕಾರ್ಪಣೆ
ಕುಂದಾಪುರ:ತಾಲೂಕಿನ ಸೇನಾಪುರ ಗ್ರಾಮದ ಬೆಳ್ಳಾಡಿ ಶ್ರೀ ಯಕ್ಷೇಶ್ವರಿ ದೇವಸ್ಥಾನದ ಎರಡನೇ ವರ್ಷದ ವರ್ಧಂತ್ಯೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಮಂಗಳವಾರ ನಡೆಯಿತು. ಶ್ರೀಯಕ್ಷೇಶ್ವರಿ ಮತ್ತು ಸಹ ಪರಿವಾರ ದೇವರ ವರ್ಧಂತ್ಯೋತ್ಸವ ಅಂಗವಾಗಿ ಶ್ರೀದೇವಿಗೆ ಹೂವಿನ ಅಲಂಕಾರ ಪೂಜೆ,ಮಂಗಳಾರತಿ ಸೇವೆ, ಅನ್ನದಾನ,ಜೋಡು ಮೇಳದ ಯಕ್ಷಗಾನ ಬಯಲಾಟ ಹಾಗೂ ಚಂಡಿಕಾ ಹೋಮ ಜರುಗಿತು. ಶ್ಯಾಮಲಾ ಅಶೋಕ್ ಶೆಟ್ಟಿ ಬೆಳ್ಳಾಡಿ ಶ್ರೀಯಕ್ಷೇಶ್ವರಿ ಅಮ್ಮನವರಿಗೆ ನೂತನ ಮುಖಮಂಟಪವನ್ನು ಸಮರ್ಪಿಸಿ ಮಾತನಾಡಿ,ಅಮ್ಮನವರ ಎರಡನೇ ವರ್ಷದ ವರ್ಧಂತ್ಯೋತ್ಸವ ಕಾರ್ಯಕ್ರಮ ಹಾಗೂ ಜೋಡು ಮೇಳದ ಯಕ್ಷಗಾನ […]





























































































































































































































































































































































































































































































































































































































































































































































































































































































































































































































































































































































































































































































































































































































































































