ನಿವೃತ್ತ ಮುಖ್ಯೋಪಾಧ್ಯಾಯ ಸದಾಶಿವ ಶೆಟ್ಟಿಗೆ ಸನ್ಮಾನ

ಕುಂದಾಪುರ:ನಿವೃತ್ತ ನೌಕರರ ಸಂಘ ಹೊಸಾಡು ಮುಳ್ಳಿಕಟ್ಟೆ ವತಿಯಿಂದ ನಿವೃತ್ತ ಮುಖ್ಯೋಪಾಧ್ಯಾಯರಾದ ಸಂಘದ ಅಧ್ಯಕ್ಷ ಸದಾಶಿವ ಶೆಟ್ಟಿ ಅವರನ್ನು ದಿ.ಜಿ.ಎಸ್ ಆಚಾರ್ಯ ಸ್ಮಾರಕ ಸಭಾಭವನ ಮುಳ್ಳಿಕಟ್ಟೆಯಲ್ಲಿ ಶನಿವಾರ ನಡೆದ ಸಂಘದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ರಾಜೀವ ಶೆಟ್ಟಿ,ವಿಶ್ವಂಭರ ಐತಾಳ್,ಕೆ.ಲಿಂಗಪ್ಪ ಗೌಡ,ತೇಜಪ್ಪ ಶೆಟ್ಟಿ,ಗಣಪ್ಪಯ್ಯ ಆಚಾರ್ಯ ಬಿ,ಭಾಸ್ಕರ ಶೆಟ್ಟಿ,ಸಂಪತ್ ಕುಮಾರ್ ಉಪಸ್ಥಿತರಿದ್ದರು.

ಮುಳ್ಳಿಕಟ್ಟೆ ಸೊಸೈಟಿಯಲ್ಲಿ ಕಳ್ಳತನಕ್ಕೆ ಯತ್ನ,ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ ಪೊಲೀಸರು

ಕುಂದಾಪುರ:ಸಿಸಿ ಟಿವಿ ಮಾನಿಟರಿಂಗ್ ತಂಡದ ಸೂಚನೆ ಮೇರೆಗೆ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ ಹೆಮ್ಮಾಡಿ ಅದರ ಹೊಸಾಡು-ಮುಳ್ಳಿಕಟ್ಟೆ ಶಾಖೆ ಕಟ್ಟಡದ ಕಿಟಕಿ ಬಾಗಿಲಿನ ಸರಳನ್ನು ಮುರಿದು ಒಳನುಗ್ಗಿ ಕಳ್ಳತನವನ್ನು ಮಾಡಲು ಯತ್ನಿಸುತ್ತಿದ್ದ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಪ್ರಕಾಶ್ ಬಾಬು (44) ಎಂಬಾತನನ್ನು ಗಂಗೊಳ್ಳಿ ಪೊಲೀಸ್ ಠಾಣೆ ಗುಪ್ತಚರ ಪಿಎಸ್‍ಐ ಬಸವರಾಜ್ ಕಣಶೆಟ್ಟಿ ಮತ್ತು ಸಿಬ್ಬಂದಿಗಳು ಮಿಂಚಿನ ಕಾರ್ಯಚರಣೆ ಮೂಲಕ ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದಾರೆ.ಶುಕ್ರವಾರ ತಡ ರಾತ್ರಿ 1.44 ರ ಸುಮಾರಿಗೆ ಪಂಚಗಂಗಾ ರೈತರ ಸೇವಾ […]

ಕ್ಯೂಟ್ ಕಿಡ್ಸ್ ಆಂಗ್ಲ ಮಾಧ್ಯಮ ನರ್ಸರಿ ಶಾಲೆ ಪ್ರಾರಂಭೋತ್ಸವ

ಕುಂದಾಪುರ:ಕ್ಯೂಟ್ ಕಿಡ್ಸ್ ಆಂಗ್ಲ ಮಾಧ್ಯಮ ನರ್ಸರಿ ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮ ಹೆಮ್ಮಾಡಿ ಬ್ರಹ್ಮಲಿಂಗೇಶ್ವರ ರೆಸಿಡೆನ್ಸಿಯಲ್ಲಿ ಇತ್ತೀಚಿಗೆ ವಿಜೃಂಭಣೆಯಿಂದ ನಡೆಯಿತು.ಆರತಿ,ಬೆಳಗಿ ತಿಲಕವಿಟ್ಟು ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.ಶಾಲೆಯ ಸಂಚಾಲಕಿ ಶುಭ ಶೇಟ್ ಸ್ವಾಗತಿಸಿದರು.ಶಿಕ್ಷಕಿ ಗಾಯತ್ರಿ ನಿರ್ವಹಿಸಿದರು.ಅನುಷಾ ವಂದಿಸಿದರು.

You cannot copy content of this page