ವಿದ್ಯುತ್ ತಂತಿ ಮೇಲೆ ಉರುಳಿದ ಮರದ ಗೆಲ್ಲು

ಕುಂದಾಪುರ:ಕಳೆದ ಐದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಬಾರಿ ಗಾಳಿ ಮಳೆಗೆ ಬೈಂದೂರು ತಾಲೂಕಿನ ಬಡಾಕೆರೆ ಮುಖ್ಯ ರಸ್ತೆ ಬಳಿಯಲ್ಲಿರುವ ಬೃಹತ್ ಗಾತ್ರದ ಅರಳಿ ಮರದ ಗೆಲ್ಲು ವಿದ್ಯುತ್ ಲೈನ್ ಮೇಲೆ ಬಿದ್ದು ವಿದ್ಯುತ್ ಲೈನ್ ತುಂಡಾಗಿದೆ.ಮೈನ್ ಲೈನ್ ಮೇಲೆ ಮರದ ಗೆಲ್ಲು ಬಿದ್ದ ಪರಿಣಾಮ ಗ್ರಾಮ ಜನರಿಗೆ ವಿದ್ಯುತ್ ಕೈ ಕೊಟ್ಟಿದೆ.ಮೆಸ್ಕಾಂ ಸಿಬ್ಬಂದಿಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಚರಣೆ ಮೂಲಕ ಮರದ ಗೆಲ್ಲುಗಳನ್ನು ಸ್ಥಳಾಂತರಿಸಿ,ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿದರು

ಶೆಡ್ ಮೇಲೆ ಮರ ಬಿದ್ದು ಹಾನಿ

ಕುಂದಾಪುರ:ಬುಧವಾರ ಸುರಿದ ಭಾರಿ ಗಾಳಿ ಮಳೆಗೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕೊಪ್ಪರಿಗೆ ಬೆಟ್ಟು ನಿವಾಸಿ ಮಂಜು ಪೂಜಾರ್ತಿ ಅವರ ಅಡುಗೆ ಮನೆ ಮೇಲೆ ಮರ ಬಿದ್ದು ಸಂಪೂರ್ಣವಾಗಿ ಹಾನಿ ಆಗಿದೆ.ಮನೆಗೆ ಸಂಪರ್ಕಿಸುವ ವಿದ್ಯುತ್ ಲೈನ್ ತುಂಡಾಗಿದೆ.ಘಟನೆಯಲ್ಲಿ ಅಂದಾಜು 25,000.ರೂ ನಷ್ಟ ಸಂಭವಿಸಿದೆ.

ಶ್ರೀ ಭದ್ರಮಹಾಕಾಳಿ ಅಮ್ಮನವರ ನೂತನ ವಿಗ್ರಹಕ್ಕೆ,ರಕ್ತ ಚಂದನ ಮರ ಹಸ್ತಾಂತರ,ಭವ್ಯ ಮೆರವಣಿಗೆ

ಕುಂದಾಪುರ:ತಾಲೂಕಿನ ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ಅಮ್ಮನವರ ನೂತನ ವಿಗ್ರಹ ರಚನೆಗೆ ಬಳಕೆ ಮಾಡಲಿರುವ ರಕ್ತ ಚಂದನ ಮರವನ್ನು ಕೊಲ್ಲೂರಿನಿಂದ ಕಟ್ ಬೇಲ್ತೂರು ಅಮ್ಮನವರ ಸನ್ನಿಧಾನದ ವರೆಗೆ ಭವ್ಯ ಮೆರವಣಿಗೆ ಮೂಲಕ ಬುಧವಾರ ಬರಮಾಡಿಕೊಳ್ಳಲಾಯಿತು.ಇತಿಹಾಸ ಪ್ರಸಿದ್ಧ ಶ್ರೀ ಭದ್ರಮಹಾಕಾಳಿ ಅಮ್ಮನವರ ನೂತನ ವಿಗ್ರಹಕ್ಕೆ ರಕ್ತ ಚಂದನ ಮರವನ್ನು ಶಿವಮೊಗ್ಗ ದಿಂದ ಕೊಲ್ಲೂರು ಮಾರ್ಗವಾಗಿ ಪುರ ಮೆರವಣಿಗೆ ಮೂಲಕ ಅಮ್ಮನವರ ಸನ್ನಿಧಾನವನ್ನು ಪ್ರವೇಶ ಮಾಡಿದೆ.ಈ ಸಂದರ್ಭದಲ್ಲಿ ಶ್ರೀ ಭದ್ರಮಹಾಕಾಳಿ ದೈವಸ್ಥಾನ ಕಟ್‍ಬೇಲ್ತೂರು ಮೊಕ್ತೇಸರರು,ಮೂರು ಮನೆಯವರು ಹಾಗೂ ಮೂರು ಗ್ರಾಮಸ್ಥರು,ಆಡಳಿತ ಸಮಿತಿ […]

You cannot copy content of this page