ಕೊಲ್ಲೂರು:ಮನೆ ಮೇಲೆ ಮಣ್ಣು ಕುಸಿದು ಬಿದ್ದು ಮಹಿಳೆ ಸಾವು

ಕುಂದಾಪುರ:ಭಾರಿ ಮಳೆಯಿಂದಾಗಿ ಮನೆ ಮೇಲೆ ಮಣ್ಣು ರಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕುಂದಾಪುರ ತಾಲೂಕಿನ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.ನಿರಂತರವಾಗಿ ಸುರಿಯುತ್ತಿರುವ ಮಳೆ ಯಿಂದಾಗಿ ಗುಡ್ಡ ಪ್ರದೇಶದಲ್ಲಿನ ಮಣ್ಣು ಮನೆ ಮೇಲೆ ಕುಸಿದು ಬಿದ್ದಿದೆ ಈ ಸಂದರ್ಭದಲ್ಲಿ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಅಂಬಾ (55) ಎನ್ನುವ ಮಹಿಳೆ ಮಣ್ಣಿನ ರಾಶಿಯಡಿ ಸಿಲುಕಿ ಸಾವನ್ನಪ್ಪಿದ್ದಾರೆ.

ಶಂಕರನಾರಾಯಣ:ಸುಂಟರಗಾಳಿ ಅಬ್ಬರ ಧರೆಗೆ ಉರುಳಿದ ಅಡಿಕೆ ಮರ,ಲಕ್ಷಾಂತರ.ರೂ ನಷ್ಟ

ಕುಂದಾಪುರ:ತಾಲೂಕಿನ ಅಮಾಸೆಬೈಲ್ ಶಂಕರನಾರಾಯಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಳ್ಳಂಜೆ ಹೆಗೊಡ್ಡು ರಟ್ಟಾಡಿ ನಡಂಬೂರು ಜನತಾ ಕಾಲೋನಿ ಮುಂತಾದ ಭಾಗದಲ್ಲಿ ಬುಧುವಾರ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಬೀಸಿದ ಸುಂಟರಗಾಳಿ ಅಬ್ಬರಕ್ಕೆ ಊರಿಗೆ ಊರೇ ಬೆಚ್ಚಿ ಬಿದ್ದಿದ್ದು ಹಲವಾರು ಮನೆಗಳಿಗೆ ಹಾನಿ ಉಂಟಾಗಿದೆ,ಸಾವಿರಾರು ಅಡಿಕೆ ಹಾಗೂ ಇನ್ನಿತ್ಯಾದಿ ಬೃಹತಾಕಾರದ ಮರಗಳು ಧರೆಗುರುಳಿದ್ದು ಲಕ್ಷಾಂತರ.ರೂ ನಷ್ಟವಾಗಿದೆ.ಕುಳ್ಳಂಜೆ ಹೆಗೊಡ್ಡು ಸುಬ್ಬ ನಾಯ್ಕ ಹಾಗೂ ಧರ್ಮರಾಜ ನಾಯ್ಕ ಎಂಬವರ ಮನೆಯ ಸಾವಿರಕ್ಕೂ ಮಿಕ್ಕಿ ಅಡಕೆ ಮರಗಳು ಸಂಪೂರ್ಣವಾಗಿ ಗಾಳಿಯ ಅಬ್ಬರಕ್ಕೆ ತುಂಡಾಗಿ ನೆಲಕ್ಕುರುಳಿವೆ […]

ಮಾಜಿ ಮುಖ್ಯಮಂತ್ರಿ ವಿರಪ್ಪ ಮೊಯ್ಲಿ ಪುತ್ರಿ ನಿಧನ

ಬೆಂಗಳೂರು:ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ ಅವರು ಅನಾರೋಗ್ಯದ ಕಾರಣದಿಂದ ಭಾನುವಾರ ನಿಧನರಾಗಿದ್ದಾರೆ.ವೀರಪ್ಪಮೊಯ್ಲಿ ಅವರ ಮೂರನೇ ಪುತ್ರಿಯಾಗಿದ್ದ ಹಂಸ ಮೊಯ್ಲಿ ಅವರು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು.ತಮದೇ ಆದ ಚೌಕಟ್ಟಿನಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

You cannot copy content of this page