ಬೈಂದೂರು:ಸೀಮೆಂಟ್ ತುಂಬಿದ ಲಾರಿ ಪಲ್ಟಿ

ಕುಂದಾಪುರ:ಬಾಗಲಕೋಟೆ ಯಿಂದ ಸೀಮೆಂಟ್ ಚೀಲ ತುಂಬಿಸಿ ಕೊಂಡು ಬೈಂದೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಕೇರಳ ರಾಜ್ಯಕ್ಕೆ ತೆರಳುತ್ತಿದ್ದ ಲಾರಿ ಕಂಬದಕೋಣೆಯಲ್ಲಿ ಪಲ್ಟಿ ಹೊಡೆದು ರಸ್ತೆ ಯಿಂದ ಕೆಳಗೆ ಉರುಳಿ ಬಿದಿದ್ದ ಘಟನೆ ಶನಿವಾರ ನಡೆದಿದೆ.ಕಂಬದಕೋಣೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಮಯದಲ್ಲಿ ದನ ಅಡ್ಡಲಾಗಿ ಬಂದ ಕಾರಣ ನಿಯಂತ್ರಣ ಕಳೆದು ಕೊಂಡಿದ್ದ ಲಾರಿ ರಸ್ತೆ ಪಕ್ಕಕ್ಕೆ ಸರಿದಿದ್ದು ಮಣ್ಣು ಕುಸಿತಗೊಂಡು ಹೊಂಡಕ್ಕೆ ಉರುಳಿ ಬಿದಿದ್ದೆ.ಘಟನೆಯಲ್ಲಿ ಲಾರಿ ಚಾಲಕ ಕ್ಲಿನರ್ ಪಾರಾಗಿದ್ದಾರೆ.

ಕೇರಳ ರಾಜ್ಯಪಾಲ ಆರೀಫ್ ಮಹಮ್ಮದ್ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ

ಕುಂದಾಪುರ:ಕೇರಳ ರಾಜ್ಯಪಾಲ ಆರೀಫ್ ಮಹಮ್ಮದ್ ಖಾನ್ ಶನಿವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಳದ ಆಡಳಿತಾಧಿಕಾರಿ, ಸಹಾಯಕ ಕಮಿಷನರ್ ಕೆ.ಮಹೇಶ್ಚಂದ್ರ ಬರಮಾಡಿಕೊಂಡರು. ದೇವಳದ ಸಿಇಓ ಪ್ರಶಾಂತ್ ಶೆಟ್ಟಿ ಇದ್ದರು.ದೇವಳದ ವತಿಯಿಂದ ಅವರನ್ನು ಗೌರವಿಸಲಾಯಿತು.

ಶಿಕ್ಷಕ ಸುರೇಂದ್ರ ನಾಡ ಗುಡ್ಡೆಹೋಟೆಲ್‍ಗೆ ಇನ್ನೋವೇಟಿವ್ ಟೀಚರ್ ಅವಾರ್ಡ್

ಕುಂದಾಪುರ:ಉತ್ತಮ ತಲೆಮಾರುಗಳ ನಿರ್ಮಾಣ ಅಭಿಯಾನ ಕಾರ್ಯಕ್ರಮ ಹಾಗೂ ಭವಿಷ್ಯದಲ್ಲಿ ಸಂಪೂರ್ಣ ಸಾಕ್ಷರ ಕರ್ನಾಟಕ ರಾಜ್ಯವನ್ನು ಮಾಡುವ ನಿಟ್ಟಿನಲ್ಲಿ ಬೇರೆ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಬೆಂಗಳೂರಿಗೆ ವಲಸೆ ಬಂದ ಕೂಲಿ ಕಾರ್ಮಿಕ ಕುಟುಂಬ ಮತ್ತು ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನು ಸಮೀಕ್ಷೆ ನಡೆಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ದಾಖಲು ಮಾಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದ ನಿವಾಸಿ ಸುರೇಂದ್ರ ನಾಡ ಗುಡ್ಡೆಹೋಟೆಲ್ ಅವರು ರಾಷ್ಟ್ರಮಟ್ಟದ ಇನ್ನೋವೇಟಿವ್ ಟೀಚರ್ […]

You cannot copy content of this page