ಗಂಗೊಳ್ಳಿ:ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ
ಕುಂದಾಪುರ:ಕೊಸೆಸಾಂವ್ ಅಮ್ಮನವರ ದೇವಾಲಯ ಗಂಗೊಳ್ಳಿ ಮತ್ತು ಸ್ತ್ರೀ ಆಯೋಗ ನೇತೃತ್ವದಲ್ಲಿ ದಂತ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಂತ ಜೋಸೆಫ್ ವಾಜಾರ ಸಂಭಾಗಣ ಗಂಗೊಳ್ಳಿಯಲ್ಲಿ ಮಂಗಳವಾರ ನಡೆಯಿತು.
ಕೊಸೆಸಾಂವ್ ಅಮ್ಮನವರ ಚರ್ಚಿನ ಧರ್ಮಗುರು ವಂದನಿಯ ಫಾದರ್ ಧಾಮಸ್ ರೋಶನ್ ಡಿಸೋಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.ಸಂಘಟನೆಯ ಸಚೇತಕಿ ಸಿಸ್ಟರ್ ಕೊರೋನ,ಕುಂದಾಪುರ ವಲಯ ಭಾವನಾ ಮಹಿಳಾ ಒಕ್ಕೂಟ ಅಧ್ಯಕ್ಷೆ ಪ್ರೀತಿ ಫೆರ್ನಾಂಡಿಸ್,ವಲಯ ಪ್ರೇರಕಿ ಸಿಂತಿಯಾ ರೊಡಿಗ್ರಸ್,ಸಂಯೋಜಕಿ ರೆನಿಟಾ ಬಾರ್ನೆಸ್,ಆಶಾ ಫೆಸಿಲಿ,ಶಿಕ್ಷಕಿ ಕಲ್ಪನಾ,ಆಶಾ ಕಾರ್ಯಕರ್ತೆ ರೇಣುಕಾ ಉಪಸ್ಥಿತರಿದ್ದರು.ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ನಿವೇದಿತ ಮತ್ತು ವತ್ಸಲ ಅವರು ಆರೋಗ್ಯ ತಪಾಸಣೆಯನ್ನು ಮಾಡಿದರು.ಅಮೃತ ಮಹಾ ಸಂಘದ ಅಧ್ಯಕ್ಷೆ ಜಸಿಂತ ಸ್ವಾಗತಿಸಿದರು.ವಿವನ್ ರೆಬೇರೊ ನಿರೂಪಿಸಿದರು.ಸಂಚಾಲಕಿ ಗ್ಲೋರಿಯಾ ವಂದಿಸಿದರು.