ಸಂಜೀವಿನಿ ಒಕ್ಕೂಟದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಆಯೋಜನೆ

Share

ಕುಂದಾಪುರ:ಸೌಪರ್ಣಿಕಾ ಸಂಜೀವಿನಿ ಒಕ್ಕೂಟ ಹೊಸಾಡು ಮತ್ತು ಎಸ್‍ಎಲ್‍ಆರ್‍ಎಂ ಘಟಕ ಹೊಸಾಡು ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಬುಧವಾರ ನಡೆಯಿತು.ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಮೊವಾಡಿ ಸಂಪರ್ಕ ರಸ್ತೆಯ ಅಕ್ಕಪಕ್ಕದಲ್ಲಿ ಬಿದ್ದ ಕಸವನ್ನು ಸಂಗ್ರಹಿಸಿ ಎಸ್‍ಎಲ್‍ಆರ್‍ಎಂ ಘಟಕಕ್ಕೆ ರವಾನಿಸಲಾಯಿತು.ಈ ಸಂದರ್ಭ ಸಂಜೀವಿನಿ ಒಕ್ಕೂಟದ ಎಂಬಿಕೆ,ಎಲ್‍ಸಿಆರ್‍ಪಿ,ಕೃಷಿ ಉದ್ಯೋಗ ಸಖಿ ಮತ್ತು ಸದಸ್ಯರು,ಎಸ್‍ಎಲ್‍ಆರ್‍ಎಂ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮೊವಾಡಿ ಸಂಪರ್ಕ ರಸ್ತೆ ಬದಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಸವನ್ನು ಎಸೆದು ಹೋಗುವ ಪ್ರವೃತ್ತಿ ಆಧಿಕವಾಗುತ್ತಿದ್ದು ಈ ಬಗ್ಗೆ ಕ್ರಮ ಸೂಕ್ತ ಕೈಗೊಳ್ಳಬೇಕೆಂದು ಸಂಜೀವಿನಿ ಒಕ್ಕೂಟದ ಸದಸ್ಯರು ಆಗ್ರಹಿಸಿದ್ದಾರೆ.

Advertisement

Share

Leave a comment

Your email address will not be published. Required fields are marked *

You cannot copy content of this page