ಕರಾವಳಿ ಭಾಗದಲ್ಲಿ ಕೈ ಕೊಟ್ಟ ಮಳೆ
ಕುಂದಾಪುರ:ಅಬ್ಬರಿಸಿ ಸುರಿದ ಮಳೆ ಕಳೆದ ಒಂದು ವಾರದಿಂದ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಭಾಗಗಳಲ್ಲಿ ಕೈ ಕೊಟ್ಟಿದೆ.ಮಳೆ ಕುಂಠಿತವಾಗಿದ್ದರಿಂದ ನೀರಿನ ಹರಿವು ಇಲ್ಲದೆ ಮಕ್ಕಿ ಗದ್ದೆಗಳು (ಒಣಭೂಮಿ) ನೀರಿಲ್ಲದೆ ಒಣಗಿ ಹೋಗಿದ್ದು ಆರಂಭಿಕ ಹಂತದಲ್ಲಿಯೆ ಭತ್ತದ ಬೆಳೆ ಸೊರಗಿದೆ.ಆಗಷ್ಟ್ ತಿಂಗಳಿನಲ್ಲಿ ಧಾರಾಕಾರವಾಗಿ ಸುರಿಯ ಬೇಕಿದ್ದ ಮಳೆ,ವಾಡಿಕೆ ಗಿಂತಲೂ ಕಡಿಮೆ ಪ್ರಮಾಣದಲ್ಲಿ ಸುರಿದಿದ್ದು ದಿನವಿಡಿ ಬಿಸಿಲಿನ ವಾತಾವರಣ ಕಂಡು ಬರುತ್ತಿದೆ.ಮಳೆ ಚೆನ್ನಾಗಿ ಸುರಿದರೆ ಮಾತ್ರ ಬೇಸಾಯ ಕೈಹಿಡಿಯಲ್ಲಿದೆ ಎಂದು ರೈತರು ಹೇಳುತ್ತಾರೆ.































































































































































































































































































































































































































































































































































































































































































































































































































































































































































































































































































































































































































































































































































































































































































