ಶ್ರೀಕ್ಷೇತ್ರ ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ಬ್ರಹ್ಮರಥೋತ್ಸವ ಸಂಪನ್ನ
ಕುಂದಾಪುರ:ತಾಲೂಕಿನ ಶ್ರೀಕ್ಷೇತ್ರ ಬಗ್ವಾಡಿ ಶ್ರೀಮಹಿಷಾಸುರ ಮರ್ದಿನಿ ದೇವಿ ಬ್ರಹ್ಮರಥೋತ್ಸವ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಶ್ರೀಮಹಿಷಾಸುರ ಮರ್ದಿನಿ ದೇವಿ ವಾರ್ಷಿಕ ಬ್ರಹ್ಮರಥೋತ್ಸವ ಅಂಗವಾಗಿ ಮಹಿಳೆರಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ ಜರುಗಿತು.ಶ್ರೀದೇವಿಗೆ ಅಲಂಕಾರ ಪೂಜೆ,ಮಹಾ ಮಂಗಳಾರತಿ ಸೇವೆ,ಮಹಾ ಅನ್ನಸಂತರ್ಪಣೆ ನಡೆಯಿತು.ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ಶ್ರೀದೇವಿ ಅನ್ನಪ್ರಸಾದ ಸ್ವೀಕರಿಸಿದರು.15 ನೇ ವರ್ಷದ ಶ್ರೀದೇವಿ ಪುರ ಮೆರವಣಿಗೆ ಗಣಪತಿ ಕಟ್ಟೆಯಿಂದ ಬಗ್ವಾಡಿ ನಡು ಹಿತ್ಲುವಿನಲ್ಲಿರುವ ಗ್ರಾಮದ ಕಟ್ಟೆಯವರೆಗೆ ನೆರವೇರಿತು.ಭಕ್ತರು ಭಕ್ತಿ ಭಾವದಿಂದ ಬ್ರಹ್ಮ ರಥವನ್ನು ಎಳೆದರು.ಚಂಡೆ ವಾದನ,ವಾದ್ಯ ಘೋಷ ಮೆರವಣಿಗೆ ಸೊಬಗನ್ನು ಹೆಚ್ಚಿಸಿತು.
ಏಪ್ರಿಲ್ 25 ರಂದು ಶ್ರೀದೇವಿ ತೆಪ್ಪೆÇೀತ್ಸವ ಸೇವೆ:ಶ್ರೀ ಮಹಿಷಾಸುರ ಮರ್ದಿನಿ ದೇವಿ ವಾರ್ಷಿಕ ಬ್ರಹ್ಮರಥೋತ್ಸವ ಅಂಗವಾಗಿ ಕುಣಿತ ಭಜನೆ,ನೃತ್ಯ ವೈಭವ,ನಗೆ ನಾಟಕ,ಶ್ರೀರಾಮ ದರ್ಶನಂ ಯಕ್ಷಗಾನ,ಕಲರವ-2024,ಸಂಗೀತ ರಸ ಸಂಜೆ ಕಾರ್ಯಕ್ರಮ ಜರುಗಿತು.ಏಪ್ರಿಲ್ 25 ರಂದು ಶ್ರೀದೇವಿ ತೆಪ್ಪೆÇೀತ್ಸವ ಸೇವೆ ನಾನಾ ಧಾಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.