ಗುಜ್ಜಾಡಿ:ರುಂಡ ಇಲ್ಲದ ಸ್ಥಿತಿಯಲ್ಲಿ ಮೃತದೇಹ ಪತ್ತೆ
ಗಂಗೊಳ್ಳಿ:ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕಳಿ ಎಂಬಲ್ಲಿ.ನದಿಯಲ್ಲಿ ರುಂಡ ಇಲ್ಲದ ಸ್ಥಿತಿಯಲ್ಲಿ ಮೃತದೇಹ ಪತ್ತೆ ಆದ ಘಟನೆ ಶನಿವಾರ ಬೆಳಗೆ ನಡೆದಿದೆ.
ಗಂಗೊಳ್ಳಿ ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿಗಳು ಘಟನೆ ಸ್ಥಳಕ್ಕೆ ಆಗಮಿಸಿದ್ದು, ಮೃತದೇಹದ ಗುರುತು ಪತ್ತೆ ಹಚ್ಚುವಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಶುಕ್ರವಾರ ಬಂಟ್ವಾಡಿ ಸೇತುವೆಗೆ ಹಗ್ಗ ಹಾಕಿ ಕೊಂಡು ಹೊಳೆಗೆ ವ್ಯಕ್ತಿಯೊಬ್ಬರು ಜಿಗಿದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಚುರುಕಿನಿಂದ ತನಿಖೆ ನಡೆಸಿತ್ತು.ಗುಜ್ಜಾಡಿಯಲ್ಲಿ ಪತ್ತೆ ಆಗಿರುವ ಮೃತ ದೇಹ,ಬಂಟ್ವಾಡಿ ಸೇತುವೆ ಕೇಳಗೆ ಹಾರಿರುವ ವ್ಯಕ್ತಿಯದ್ದೆ ಇರಬಹುದು ಎಂದು ಶಂಕಿಸಲಾಗಿದೆ.ಇನ್ನಷ್ಟೆ ಸ್ಪಷ್ಟವಾದ ಮಾಹಿತಿ ಸಿಗಬೇಕಿದೆ.