ನಾಡ ಪಂಚಾಯತ್ ಅಧ್ಯಕ್ಷರಾಗಿ ಪಾರ್ವತಿ ಮೊಗವೀರ ಆಯ್ಕೆ

Share

ಬೈಂದೂರು:ನಾಡ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಪಾರ್ವತಿ ಮೊಗವೀರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರಥ್ವಿಶ್ ಶೆಟ್ಟಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜಿಪಿ ಪಕ್ಷದ ಅಧಿಕೃತ ಅಭ್ಯರ್ಥಿ ಪ್ರಥಿಶ್ ಶೆಟ್ಟಿ ಹಾಗೂ ಬಂಡಾಯ ಅಭ್ಯರ್ಥಿ ಶ್ರೀಧರ ದೇವಾಡಿಗ ಸ್ಪರ್ಧೆ ಮಾಡಿದ್ದರು.19 ಸದಸ್ಯರೊಳಗೊಂಡ ನಾಡ ಪಂಚಾಯತಿಯಲ್ಲಿ 14 ಜನ ಬಿಜೆಪಿ ಸದಸ್ಯರು,03 ಜನ ಕಾಂಗ್ರೆಸ್ ಸದಸ್ಯರು ಹಾಗೂ 02 ಜನ ಕಮ್ಯುನಿಸ್ಟ್ ಪಕ್ಷದ ಸದಸ್ಯರಿದ್ದಾರೆ.ಒಬ್ಬ ಪಂಚಾಯತ್ ಸದಸ್ಯೆ ಗೈರಾಗಿದ್ದರಿಂದ ಪ್ರಥ್ವಿಶ್ ಶೆಟ್ಟಿ ಮತ್ತು ಶ್ರೀಧರ ದೇವಾಡಿಗ 09 ಸಮಬಲದ ಮತಗಳನ್ನು ಪಡೆದಿದ್ದಾರೆ.ಅದೃಷ್ಟ ಚೀಟಿಯಲ್ಲಿ ಪ್ರಥ್ವಿಶ್ ಶೆಟ್ಟಿಗೆ ವಿಜಯಲಕ್ಷ್ಮೀ ವಲಿದಿದ್ದಾಳೆ.

Advertisement

Share

Leave a comment

Your email address will not be published. Required fields are marked *

You cannot copy content of this page