ತೋಡಿಗೆ ಟ್ಯ್ರಾಕ್ಟರ್ ಉರುಳಿ ಬಿದ್ದು ಹಾನಿ

ಬೈಂದೂರು:ತಾಲೂಕಿನ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಳ್ಳಿ ಎಂಬಲ್ಲಿ ಗದ್ದೆ ಉಳುಮೆ ಮಾಡಿ ವಾಪಾಸು ಮನೆಗೆ ಬರುತ್ತಿದ್ದ ಸಮಯದಲ್ಲಿ ರಾಮಚಂದ್ರ ಹೆಬ್ಬಾರ್ ಎನ್ನುವವರ ಟ್ಯ್ರಾಕ್ಟರ್ ರಸ್ತೆ ಕುಸಿದ ಪರಿಣಾಮ ತೋಡಿಗೆ ಉರುಳಿ ಬಿದಿದ್ದ ಘಟನೆ ಬುಧವಾರ ನಡೆದಿದೆ.ಟ್ರ್ಯಾಕ್ಟರ್ ಇಂಜಿನ್ ಒಳಗೆ ನೀರು ಹೋಗಿದ್ದ ಕಾರಣದಿಂದ ಇಂಜಿನ್ ಸೀಸ್ ಆಗಿದು ಒಂದು ಲಕ್ಷ.ಕ್ಕೂ ಅಧಿಕ ನಷ್ಟ ಉಂಟಾಗಿದೆ.ಜೆಸಿಬಿ ಯಂತ್ರದ ಸಹಾಯದಿಂದ ಟ್ರ್ಯಾಕ್ಟರ್‍ನ್ನು ಮೇಲಕ್ಕೆ ಎತ್ತಲಾಯಿತು.

ಹೊಸಾಡು:ಕಂಟ ಕಡಿದು ಹೋಗಿ ಕೃಷಿ ಭೂಮಿಗೆ ಹಾನಿ

ಕುಂದಾಪುರ:ಎಡಬಿಡದೆ ಸುರಿದ ಭಾರಿ ಮಳೆಗೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಾಡು ಬೈಲಿನಲ್ಲಿ ತೋಡಿನ ಕಂಟ ಕಡಿದು ಹೋಗಿ ವ್ಯಾಪಕ ನಷ್ಟ ಉಂಟಾಗಿದೆ.ಮಳೆ ನಡುವೆ ಕೃಷಿಕರು ಕಂಟವನ್ನು ಕಟ್ಟುವುದರಲ್ಲೆ ಹೈರಾಣಾಹಿ ಹೋಗಿದ್ದಾರೆ.ಘಟನಾ ಸ್ಥಳಕ್ಕೆ ಹೊಸಾಡು ಪಂಚಾಯಿತಿ ಸಿಬ್ಬಂದಿ ಮತ್ತು ಗ್ರಾಮ ಕರಣಿಕರ ಕಛೇರಿ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಅಬ್ಬರಿಸಿದ ಪುಷ್ಯ ಮಳೆ,ಸೌಪರ್ಣಿಕಾ ನದಿ ತೀರ ಪ್ರದೇಶ ಜಲಾವೃತ್ತ

ಬೈಂದೂರು:ಧಾರಾಕಾರವಾಗಿ ಸುರಿದ ಭಾರಿ ಮಳೆಗೆ ಸೌಪರ್ಣಿಕಾ ನದಿ ಬೋರರ್ಗೆರೆದು ತುಂಬಿ ಹರಿದ ಪರಿಣಾಮ ಬೈಂದೂರು ತಾಲೂಕಿನ ನಾವುಂದ ಸಾಲ್ಬುಡ ಮತ್ತು ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಳ್ಳಿಯಲ್ಲಿ ನೆರೆ ನೀರು ಆವರಿಸಿದೆ.ಕೃಷಿ ಭೂಮಿಗಳು ನೀರಿನಲ್ಲಿ ಮೂಳುಗಿದ್ದು ಅಪಾರ ಹಾನಿ ಗುರುವಾರ ಸಂಭವಿಸಿದೆ.ಜೀವನ ಅಸ್ತವ್ಯಸ್ಥವಾಗಿದೆ.ಮನೆ ಒಳಗೆ ನೀರು ನುಗ್ಗಿದ್ದ ಪರಿಣಾಮ ಜನರಿಗೆ ಬಹಳಷ್ಟು ತೊಂದರೆ ಉಂಟಾಗಿದೆ.ಪ್ರತಿ ಮಳೆಗಾಲದಲ್ಲಿಯೂ ಸೌಪರ್ಣಿಕಾ ನದಿ ತೀರ ಪ್ರದೇಶವಾದ ಸಾಲ್ಬುಡ,ಚಿಕ್ಕಳ್ಳಿ,ಹೊಸಾಡು,ತ್ರಾಸಿ,ಕಡಿಕೆ,ಬಡಾಕೆರೆ ಭಾಗದಲ್ಲಿ ನೆರೆ ಕಾಣಿಸಿಕೊಳ್ಳುತ್ತದೆ.ನೆರೆ ನೀರಿನಿಂದ ಜನವಸತಿ ಪ್ರದೇಶ ಮತ್ತು ಕೃಷಿ ಭೂಮಿಗಳು ಮುಳುಗಡೆ […]

You cannot copy content of this page