ಹೊಸಾಡು:ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಸಾವು

ಕುಂದಾಪುರ:ಹೊಸಾಡು ಗ್ರಾಮದ ಕಮ್ಮಾರಕೊಡ್ಲು ಕಾವೇರಿ ನಿಲಯದ ನಿವಾಸಿ ಪ್ರಕಾಶ್ ಶೆಟ್ಟಿಗಾರ್ (48) ಎನ್ನುವವರು ತೋಟದ ಬಾವಿಯ ಕಸ ತೆಗೆಯುವ ಸಂದರ್ಭ ಆಕಸ್ಮಿಕವಾಗಿ ಆಯ ತಪ್ಪಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.ಗಂಗೊಳ್ಳಿ ಠಾಣೆಯ ಪಿಎಸ್‌ಐ ಹರೀಶ್ ಆರ್ ನಾಯ್ಕ್ ಮತ್ತು ಸಿಬ್ಬಂದಿಗಳು ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಮೃತರ ಸಹೋದರ ರಾಜೇಶ ಶೆಟ್ಟಿಗಾರ್ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕಟರಣ ದಾಖಲಾಗಿದೆ.ಮುಳುಗು ತಜ್ಞ ದಿನೇಶ್ ಖಾರ್ವಿ ಮತ್ತು ಅವರ ತಂಡದ […]

ಶಂಕರನಾಗ್ ರಿಕ್ಷಾ ನಿಲ್ದಾಣ ಉದ್ಘಾಟನೆ

ಕುಂದಾಪುರ:ಗರ್ಭೀಣಿ ಸ್ತ್ರೀಯರನ್ನು,ಅನಾರೋಗ್ಯ ಪೀಡಿತರನ್ನು ಕ್ಲಪ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲು ಮಾಡಿ ತುರ್ತು ಚಿಕಿತ್ಸೆ ಕೊಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವ ಆಟೋ ಚಾಲಕರು ಆಪ್ತರಕ್ಷಕರಿದ್ದಂತೆ.ಸೌಲಭ್ಯಗಳು ಎಷ್ಟೆ ಮುಂದುವರೆದಿದ್ದರೂ ಜನರಿಗೆ ನೇರವಾಗಿ,ತ್ವರಿತವಾಗಿ ಮತ್ತು ರೀಯಾತಿ ದರದಲ್ಲಿ ಸಿಗುವುದು ಆಟೋ ರಿಕ್ಷಾ ಸೇವೆ ಆಗಿದೆ.ಹಗಲು ರಾತ್ರಿ ಎನ್ನದೆ ಜನರ ಕಷ್ಟ ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುವ ರಿಕ್ಷಾ ಚಾಲಕ ಮತ್ತು ಮಾಲೀಕರ ಸೇವೆ ಶ್ಲಾಘನೀಯವಾದದು ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿದ […]

ಉಸಿರಾಟದ ತೊಂದರೆಯಿಂದ ಯುವತಿ ಸಾವು

ಬೆಳ್ತಂಗಡಿ:ಜ್ವರದಿಂದ ಬಳಲಿ ಚಿಕಿತ್ಸೆ ಪಡೆದು,ಮನೆಯಲ್ಲಿದ್ದ ಯುವತಿ ಉಸಿರಾಟದ ತೊಂದರೆಯಿಂದ ಮೃತಪಟ್ಟ ಘಟನೆ ನಡೆದಿದೆ.ನೆರಿಯಗ್ರಾಮದ ಗಂಡಿಬಾಗಿಲು ಜಾತಿಮಾರು ನಿವಾಸಿ ರಾಜು ದೇವಾಡಿಗ ಪುತ್ರಿ ಸುಮಾ(19) ಎಂಬವರು ಮೃತಪಟ್ಟ ಯುವತಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದಅವರಿಗೆ ತಂದೆ,ತಾಯಿ ಹಾಗೂ ಸಹೋದರ ಇದ್ದಾರೆ.

You cannot copy content of this page