ಆಂಬ್ಯುಲೆನ್ಸ್ ಪಲ್ಟಿ ಚಾಲಕ ಸಾವು

ಮಂಗಳೂರು:ಕಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದರೋಗಿಯೋರ್ವನ್ನು ತುರ್ತಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭ ಆಂಬ್ಯುಲೆನ್ಸ್ ವಾಹನವೊಂದು‌ ಪಲ್ಟಿಯಾಗಿ ಉರುಳಿ ಬಿದ್ದ ಘಟನೆ ಅಂಚಿಕಟ್ಟೆ ಎಂಬಲ್ಲಿ ನಡೆದಿದೆ.ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಂಬ್ಯುಲೆನ್ಸ್ ವಾಹನ ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ,ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಗುರುವಾಯನಕೆರೆ ನಿವಾಸಿ ಶಬೀರ್ ಮೃತಪಟ್ಟ ದುರ್ದೈವಿ. ಅತಿ ವೇಗವಾಗಿ ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಆಂಬ್ಯುಲೆನ್ಸ್ ವಾಹನ ವಗ್ಗ ಸಮೀಪದ ಕೊಪ್ಪಳ ಅಂಚಿಕಟ್ಟೆ ಎಂಬಲ್ಲಿ ನಿಯಂತ್ರಣ ತಪ್ಪಿ ರಸ್ತೆ ಮಧ್ಯ ಪಲ್ಟಿಯಾಗಿದೆ, ಆಂಬ್ಯುಲೆನ್ಸ್ ನಲ್ಲಿದ್ದ ರೋಗಿಯನ್ನು ಬದಲಿ ವಾಹನದಲ್ಲಿ […]

ಗುಜ್ಜಾಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ತಮ್ಮಯ್ಯ ದೇವಾಡಿಗ ಆಯ್ಕೆ

ಕುಂದಾಪುರ:ಗುಜ್ಜಾಡಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ತಮ್ಮಯ್ಯ ದೇವಾಡಿಗ ಅವರು ಆಯ್ಕೆಯಾಗಿದ್ದಾರೆ.ಬಿಜೆಪಿ ಪಕ್ಷದ ಬೆಂಲಿತ ಅಭ್ಯರ್ಥಿ ನಾಗರತ್ನ ಖಾರ್ವಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.16 ಸದಸ್ಯರೊಳಗೊಂಡ ಗುಜ್ಜಾಡಿ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಪಕ್ಷದ 11 ಸದಸ್ಯರು,ಬಿಜೆಪಿ ಪಕ್ಷದ 04 ಸದಸ್ಯರು ಹಾಗೂ 01 ಪಕ್ಷೇತರ ಅಭ್ಯರ್ಥಿ ಇದ್ದಾರೆ.ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ನಾಗರತ್ನ ಖಾರ್ವಿ ಅವರಿಗೆ ಬಿಜೆಪಿ ಬೆಂಬಲ ನೀಡಿದ್ದರಿಂದ ಪ್ರತಿಸ್ಪರ್ಥಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಂತಿ ವಿರುದ್ಧ 08 ಸಮಬಲದ […]

ಗೋ ಶಾಲೆ ನಿರ್ಮಾಣಕ್ಕೆ ಗೋ ಪ್ರೇಮಿಗಳ ಆಗ್ರಹ

ಕುಂದಾಪುರ:ಬೈಂದೂರು ವಿಧಾನಸಭೆ ಕ್ಷೇತ್ರದ ವ್ಯಾಪ್ತಿ ಪ್ರದೇಶವಾದ ಹೊಸಾಡು,ನಾವುಂದ,ಮರವಂತೆ,ಬಾರಂದಾಡಿ,ಗಂಗೊಳ್ಳಿ ಸೇರಿದಂತೆ ನಾನಾ ಕಡೆಗಳಲ್ಲಿ ಬೀಡಾಡಿ ಗೋವುಗಳ ಸಂಖ್ಯೆ ಅಧಿಕವಾಗಿದೆ.ರಾತ್ರಿ ಸಮಯದಲ್ಲಿ ಗದ್ದೆಗಳಿಗೆ ದಾಳಿ ಮಾಡುವ ಬೀಡಾಡಿ ಗೋಗಳು ರೈತರಿಗೆ ಉಪದ್ರಕಾರಿಯಾಗಿ ಪರಿಣಮಿಸಿವೆ.ಬೀಡಾಡಿ ಗೋವುಗಳಿಂದ ಆಗುತ್ತಿರುವ ತೊಂದರೆಯನ್ನು ನಿಯಂತ್ರಣಕ್ಕೆ ತರಲು ಗೋ ಶಾಲೆ ನಿರ್ಮಾಣ ಮಾಡಬೇಕ್ಕೆನ್ನುವುದು ಸ್ಥಳೀಯರ ಬೇಡಿಕೆ ಆಗಿದೆ. (ರಾತ್ರಿ ಹಗಲೆನ್ನದೆ ಭತ್ತದ ಗದ್ದೆಗಳಿಗೆ ದಾಳಿ ಮಾಡುವ ಬೀಡಾಡಿ ಗೋಗಳಿಂದ ತೊಂದರೆ ಆಗುತ್ತಿದೆ ಎಂಬುದು ರೈತರ ಅಳಲು) ಜಾನುವಾರು ಸಾಗಾಣಿಕೆಯಲ್ಲಿ ರೈತರು ನಿರುತ್ಸಾಹ ತೋರ್ಪಡಿಸುತ್ತಿದ್ದರಿಂದ ಗೋವುಗಳು ಬೀದಿ ಪಾಲಾಗಿದ್ದು,ಇತ್ತೀಚಿನ […]

You cannot copy content of this page