ಬಿಸಿಲಿನ ತಾಪಕ್ಕೆಬಿಹಾರದಲ್ಲಿ 27 ಮಂದಿ ಸಾವು

ಕುಂದಾಪುರ:ಬಿಹಾರದಲ್ಲಿ ಬಿಸಿಲಿನ ತೀವ್ರತೆಯಿಂದ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ. ಭೋಜ್‌ಪುರ ಜಿಲ್ಲೆಯಲ್ಲಿ ಆರು ಮಂದಿ, ರೋಹ್ತಾಸ್,ಬಂಕಾ ಮತ್ತು ಅರ್ವಾಲ್‌ನಲ್ಲಿ ತಲಾ ನಾಲ್ವರು,ಔರಂಗಾಬಾದ್‌ನಲ್ಲಿ ಮೂವರು ಮತ್ತು ನಲಂದಾ, ಜಮುಯಿ, ಜಹಾನಾಬಾದ್, ಭಾಗಲ್ಪುರ, ಗಯಾ ಮತ್ತು ಪಾಟ್ನಾದಲ್ಲಿ ತಲಾ ಒಬ್ಬರು ಬಿಸಿಗಾಳಿಗೆ ಸಾವನ್ನಪ್ಪಿದ್ದಾರೆ. ಶನಿವಾರ ಪಾಟ್ನಾದಲ್ಲಿ ಗರಿಷ್ಠ ತಾಪಮಾನ 44.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶೇಖ್‌ಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ 45.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.ಮುಂದಿನ 24 ಗಂಟೆಗಳ ಕಾಲ ಬಿಸಿಗಾಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ […]

ಬಾವಿಗೆ ಬಿದ್ದು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಬೆಕ್ಕಿನ ಮರಿಯೊಂದಕ್ಕೆ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು ಆಪದ್ಬಾಂಧವರಾಗಿದ್ದಾರೆ.

ಸುಮಾರು 40 ಅಡಿ ಆಳದ ಬಾವಿಗೆ ಬಿದ್ದು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಬೆಕ್ಕಿನ ಮರಿಯೊಂದಕ್ಕೆ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು ಆಪದ್ಬಾಂಧವರಾಗಿದ್ದಾರೆ. ಭಾನುವಾರದಂದು ಉಡುಪಿಯ ಮುಚ್ಚಲಕೋಡು ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಚೆನ್ನೈ ಮೊಕ್ಕಾಂನಲ್ಲಿದ್ದ ಶ್ರೀಗಳು ದೇವಸ್ಥಾನಕ್ಕೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಅವರಿಗೆ ಬೆಕ್ಕಿನ ಮರಿ ಬಾವಿಗೆ ಬಿದ್ದ ವಿಷಯ ತಿಳಿದು ಬಂದಿದೆ. ಕೂಡಲೇ ಹಗ್ಗಕ್ಕೆ ಬಕೆಟ್ ಕಟ್ಟಿ ಬೆಕ್ಕಿನ ಮರಿಯನ್ನು ರಕ್ಷಿಸಲು ಪ್ರಯತ್ನಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಆಗ ಸ್ವತಃ ಪೇಜಾವರ ಶ್ರೀ ಗಳೇ ಹಗ್ಗದ ಸಹಾಯದಿಂದ […]

ಬಸ್‌ನಲ್ಲಿ ಸೀಟ್‌ ಇಲ್ಲ ಎಂದು ಡ್ರೈವರ್‌ ಸೀಟ್‌ ಹತ್ತಿದ ಮಹಿಳೆ

ಚಿಕ್ಕಮಗಳೂರು: ಬಸ್‌ ನಲ್ಲಿ ಸೀಟ್‌ ಇಲ್ಲದ ಕಾರಣ ಮಹಿಳೆಯೊಬ್ಬರು ಡ್ರೈವರ್ ಸೀಟಲ್ಲಿ ಬಸ್ ಹತ್ತಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ. ರಾಜ್ಯದಲ್ಲಿ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣದ ಹಿನ್ನೆಲೆಯಲ್ಲಿ ಶೃಂಗೇರಿಗೆ ಜನ ಸಾಗರ ಹರಿದು ಬತ್ತಿತ್ತು. ಬಸ್ ಬಂದ ಕೂಡಲೇ ಬಸ್ಸಿಗೆ ಮಹಿಳೆಯರು ಮುತ್ತಿಕೊಳ್ಳುತ್ತಿದ್ದಾರೆ. ಬಸ್ಸಿಗೆ ಹತ್ತಲು ಕಷ್ಟವಾದ ಕಾರಣ ಮಹಿಳೆ ಮಕ್ಕಳನ್ನು ಡ್ರೈವರ್ ಸೀಟಲ್ಲಿ ಹತ್ತಿಸಿ, ತಾನೂ ಅಲ್ಲೇ ಬಸ್ ಏರಿದ್ದಾರೆ. ರಾಜ್ಯ ಸರ್ಕಾರದ ಉಚಿತ ಪ್ರಯಾಣದ ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರ […]

You cannot copy content of this page