ತ್ರಾಸಿ ಇಗರ್ಜಿಯಲ್ಲಿ ವನಮಹೋತ್ಸವ ಕಾರ್ಯಕ್ರಮ ಆಚರಣೆ

ಕುಂದಾಪುರ:ತ್ರಾಸಿ ಚರ್ಚ್ ಕಥೊಲಿಕ್ ಸಭಾ,ಸ್ಪೂರ್ತಿ ಸ್ತ್ರೀ ಸಂಘಟನೆ,ವೈ.ಸಿ.ಎಸ್ ಹಾಗೂ ಪರಿಸರ ಆಯೋಗದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ತ್ರಾಸಿ ಇಗರ್ಜಿಯಲ್ಲಿ ಆಚರಿಸಲಾಯಿತು.ತ್ರಾಸಿ ಚರ್ಚಿನ ಧರ್ಮಗುರು ವಂದನೀಯ ಫಾದರ್ ರೊಸಾರಿಯೊ ಫೆರ್ನಾಂಡಿಸ್ ಅವರು ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷ ಮಾರ್ಕ್‍ಡಿ ಅಲ್ಮೇಡಾ,20 ಆಯೋಗಗಳ ಸಂಯೋಜಕಿ ಮೋಲಿ ಡಿಸೋಜಾ,ಕಥೊಲಿಕ್ ಸಭಾದ ಅಧ್ಯಕ್ಷ ಜಾನ್ ರೊನಾಲ್ಡ್ ಅಲ್ಮೇಡಾ,ಸ್ತ್ರೀ ಸಂಘಟನೆ ಅಧ್ಯಕ್ಷೆ ವೀಣಾ ಮೊಂತೇರೊ,ಪರಿಸರ ಆಯೋಗದ ಸಂಚಾಲಕಿ ಡೊರತಿ ಲುವಿಸ್,ವೈ.ಸಿ.ಎಸ್ ಸಂಚಾಲಕಿ ವಿನೀತ […]

ತಿಮಿಂಗಿಲದ ಅಂಬರ್ ಗ್ರಿಸ್ ಎಂದು ಹೇಳಿ ವಂಚನೆಗೆ ಯತ್ನ:10 ಲಕ್ಷ.ರೂ ಬೇಡಿಕೆ

ಕುಂದಾಪುರ:ಹಳದಿ ಬಣ್ಣದ ಮೇಣದಂತಹ ವಸ್ತುವನ್ನು ತಿಮಿಂಗಿಲದ ಅಂಬರ್ ಗ್ರಿಸ್ (ತಿಮಿಂಗಿಲದ ವಾಂತಿ) ಎಂದು ಹೇಳಿ 10.ಲಕ್ಷ.ರೂಗೆ ಸಾರ್ವಜನಿಕರಿಗೆ ಮಾರಲು ಯತ್ನಿಸಿದ ಘಟನೆ ಬೈಂದೂರು ತಾಲೂಕಿನ ಯಡ್ತರೆ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.ಶಿವಮೊಗ್ಗ ಜಿಲ್ಲೆಯ ನಿವಾಸಿಗಳಾದ ನಿರಂಜನ್ ಎಸ್ (26),ಮಿಲನ್ ಮೊನಿಶ್ ಶೆಟ್ಟಿ (27) ಎನ್ನುವ ಯುವಕರಿಬ್ಬರು ಯಡ್ತರೆ ಹೊಸ ಬಸ್ ನಿಲ್ದಾಣದ ಬಳಿ ಸುಮಾರು 3 ಕೆ.ಜಿ 910.ಗ್ರಾಂ ತೂಕವನ್ನು ಹೊಂದಿರುವ ಹಳದಿ ಬಣ್ಣವನ್ನು ಹೊಲುವ ಮೇಣದಂತಹ ವಸ್ತುವನ್ನು ತಿಮಿಂಗಿಲದ ಅಂಬರ್ ಗ್ರಿಸ್ಎಂದು ಸುಳ್ಳು ಹೇಳಿ […]

ಲಕ್ಷ್ಮೀನಾರಾಯಣ ದೇವಸ್ಥಾನ ಹೆಮ್ಮಾಡಿ,ಜೀರ್ಣೋದ್ಧಾರ ನಿಧಿ ಕುಂಭ ಸ್ಥಾಪನೆ

ಕುಂದಾಪುರ:ಹೆಮ್ಮಾಡಿ ಗ್ರಾಮದ ಗ್ರಾಮದೇವರಾದ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದ ಪ್ರಯುಕ್ತ ನಿಧಿ ಕುಂಭ ಸ್ಥಾಪನೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿ ವಿಧಾನದೊಂದಿಗೆ ಶನಿವಾರ ನಡೆಯಿತು.ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದ ನಿಮಿತ್ತ ಗ್ರಾಮಸ್ಥರು ನಿಧಿ ಸಮರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ತಂತ್ರಿಗಳಾದ ವಿಶೇಶ್ವರ ಸೋಮಯಾಜಿ,ಪ್ರದಾನ ಅರ್ಚಕರಾದ ನರಸಿಂಹ ಮೂರ್ತಿ ಹೊಳ್ಳ,ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಅಶೋಕ್ ಕುಮಾರ್ ಭಟ್,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತ್ಯನಾರಾಯಣ ರಾವ್,ಕಾರ್ಯದರ್ಶಿ ಹರೀಶ್ ಭಂಡಾರಿ,ಸಮಿತಿ ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.

You cannot copy content of this page