ಹಡಿಲು ಭೂಮಿಗೆ ಮರುಜೀವ,ಗದ್ದೆ ಉಳುಮೆ ಮಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಕುಂದಾಪುರ:ಚಿಕ್ಕ ಹಿಡುವಳಿ,ಕೂಲಿಕಾರರ ಸಮಸ್ಯೆ ಹಾಗೂ ಲಾಭದಾಯಕವಲ್ಲದ ಕಾರಣದಿಂದಾಗಿ ಜನರು ಕೃಷಿಯಿಂದ ವಿಮುಖರಾದ ಕಾರಣ ಸಾವಿರಾರು ಎಕರೆ ಭತ್ತದ ಗದ್ದೆಗಳು ಹಡಿಲು ಬಿದ್ದಿವೆ,ಹಡಿಲು ಭೂಮಿಗೆ ಮರುಜೀವ ನೀಡುವ ಉದ್ದೇಶದಿಂದ ಉಡುಪಿ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಅವರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ ಹಾಗೂ ಕೃಷಿ ಇಲಾಖೆಗಳ ಮೂಲಕ ಹಡಿಲು ಭೂಮಿಯನ್ನು ಕೃಷಿ ಮಾಡುವ ಮಹತ್ವಾಕಾಂಕ್ಷಿ ಕಾರ್ಯಕ್ಕೆ ಒತ್ತು ನೀಡಿ,ಗ್ರಾಮ ಪಂಚಾಯತ್ ವಾರು ಗುರಿಯನ್ನು ನಿಗದಿಗೊಳಿಸಿ,ಅಧೀನ ಸಿಬ್ಬಂದಿಗಳಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ಕಳೆದ ಎರಡು ತಿಂಗಳುಗಳಿಂದ […]

ಬಿರುಸುಗೊಂಡ ಮಳೆ,ನಾವುಂದ ಸಾಲ್ಬುಡದಲ್ಲಿ ಕೃಷಿ ಭೂಮಿಗಳು ಜಲಾವೃತ

ಕುಂದಾಪುರ:ಬೈಂದೂರು ತಾಲೂಕಿನ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಅಬ್ಬರಿಸುತ್ತಿರುವ ಮಳೆಯಿಂದ ಸೌಪರ್ಣಿಕಾ ನದಿಯಲ್ಲಿ ನೀರಿ ಮಟ್ಟ ಏರಿಕೆ ಆಗಿದ್ದರ ಪರಿಣಾಮ ನಾವುಂದ ಸಾಲ್ಬುಡದಲ್ಲಿ ಕೃಷಿ ಭೂಮಿಗಳು ಜಲಾವೃತಗೊಂಡಿದ್ದು,ಸಂಪರ್ಕ ರಸ್ತೆ ಮುಳುಗಡೆ ಆಗಿದೆ.ಸೌಪರ್ಣಿಕಾ ನದಿ ತೀರ ಪ್ರದೇಶಗಳಾದ ಸಾಲ್ಬುಡ,ಪಡುಕೋಣೆ,ಮರವಂತೆ,ಕಡಿಕೆ,ಹಡವು,ತೆಂಗಿನಗುಂಡಿ,ಸೇನಾಪುರ,ದೇವಳಿ,ಆನಗೋಡು,ಬಂಟ್ವಾಡಿ ಹಾಗೂ ಚಕ್ರ ನದಿ ತೀರ ಪ್ರದೇಶಗಳಾದ ಹಕ್ಲಾಡಿ ಗ್ರಾಮದ ಯಳೂರು,ತೊಪ್ಲು ಭಾಗದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ. (ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಬೈಂದೂರು ಅಗ್ನಿ ಶಾಮಕದಳದ ಸಿಬ್ಬಂದಿಗಳು […]

ತ್ರಾಸಿ ಬೀಚ್‍ನಲ್ಲಿ ಕಡಲಾಮೆ ರಕ್ಷಣೆ,ಅಧಿಕಾರಿಗಳಿಗೆ ಹಸ್ತಾಂತರ

ಕುಂದಾಪುರ:ಕೈಕಾಲು ತುಂಡಾಗಿ ಸಮುದ್ರದ ಅಲೆಯ ಹೊಡೆತಕ್ಕೆ ಸಿಲುಕಿ ತ್ರಾಸಿ ಬೀಚ್‍ನಲ್ಲಿ ಬಿದ್ದು ಹೊರಳಾಡುತ್ತಿದ್ದ ಅಪಾಯಕ್ಕೆ ಸಿಲುಕಿದ ಕಡಾಲಾಮೆಯನ್ನು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಭಾನುವಾರ ಹಸ್ತಾಂತರ ಮಾಡಲಾಯಿತು.ಈ ಸಂದರ್ಭದಲ್ಲಿ ಅರಣ್ಯಾಧಿಕಾರಿ ದಿಲೀಪ್,ಸ್ಥಳೀಯ ಮೀನುಗಾರರಾದ ದಿವಾಕರ ಖಾರ್ವಿ,ರೋಶನ್ ಡಿ ಸೋಜ ತ್ರಾಸಿ ಬೀಚ್,ಅಕ್ಷಯ್ ದೇವಾಡಿಗ ತ್ರಾಸಿ ಬೀಚ್ ಮತ್ತು ಸ್ವಯಂ ಸೇವಾ ಸಂಸ್ಥೆ ಸದಸ್ಯರು ಉಪಸ್ಥಿತರಿದ್ದರು.

You cannot copy content of this page