ಸಚಿವ ಮಂಕಾಳ ವೈದ್ಯ ಉಪ್ಪುಂದಕ್ಕೆ ಭೇಟಿ, ಪರಿಹಾರದ ಚೆಕ್ ವಿತರಣೆ

ಕುಂದಾಪುರ:ದೋಣಿ ದುರಂತ ಸಂಭವಿಸಿ ಓರ್ವ ಮೀನುಗಾರ ಮೃತರಾಗಿದ್ದು,ಇನ್ನೋರ್ವ ಮೀನುಗಾರ ಸಮುದ್ರದಲ್ಲಿ ನಾಪತ್ತೆ ಆಗಿದ್ದ ಬೈಂದೂರು ತಾಲೂಕಿನ ಉಪ್ಪುಂದ ಕರ್ಕಿಕಳಿಗೆ ಬಂದರು ಮತ್ತು ಮೀನುಗಾರಿಕಾ ಸಚಿವರಾದ ಮಂಕಾಳ ವೈದ್ಯ ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ,ಮೀನುಗಾರರ ಮನೆಗೆ ತೆರಳಿದ ಅವರು ಸಾಂತ್ವನದ ಮಾತುಗಳನ್ನು ಹೇಳಿದರು,ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬದ ಸದಸ್ಯರಿಗೆ ಪರಿಹಾರದ ಚೆಕ್ ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ,ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ರಾಜು ಪೂಜಾರಿ,ಪ್ರಕಾಶ್‍ಚಂದ್ರ ಶೆಟ್ಟಿ,ಮದನ್ ಕುಮಾರ್,ಮೀನುಗಾರ ಮುಖಂಡರುಗಳು […]

ಉಪ್ಪುಂದ ದೋಣಿ ದುರಂತ:ಶಾಸಕ ಗಂಟಿಹೊಳೆ ಭೇಟಿ

ಬೈಂದೂರು:ಉಪ್ಪುಂದ ಕರ್ಕಿಕಳಿ ಎಂಬಲ್ಲಿ ಸೋಮವಾರ ಸಂಭವಿಸಿದ ದೋಣಿ ದುರಂತ ಘಟನಾ ಸ್ಥಳಕ್ಕೆ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಮಂಗಳವಾರ ಭೇಟಿ ನೀಡಿ,ಮೀನುಗಾರರ ಜತೆ ಮಾತುಕತೆ ನಡೆಸಿದರು.ಉಪ್ಪುಂದದಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಉಪ್ಪುಂದ ಕರ್ಕಿಕಳಿ ದೊಡ್ಡಕೊಂಬಿನ ಮನೆ ನಾಗೇಶ್ (29) ಮೃತ ಪಟ್ಟಿದ್ದಾರೆ,ಕರ್ಕಿಕಳಿ ಗಂಜೇರನ ಮನೆ ಸತೀಶ (30) ಎನ್ನುವ ಮೀನುಗಾರ ಯುವಕ ಸಮುದ್ರದಲ್ಲಿ ನಾಪತ್ತೆ ಆಗಿದ್ದಾರೆ.ನಾಪತ್ತೆಯಾಗಿದ್ದ ಮೀನುಗಾರನಿಗಾಗಿ ಹುಡುಕಾಟ ಮುಂದುವರೆದಿದೆ.ಸಚಿನ್ ಎನ್ನುವವರ ಮಾಲೀಕತ್ವದ ಮರ್ಲುಚಿಕ್ಕು ಎನ್ನುವ ಹೆಸರಿನ ದೋಣಿ ಮುಳುಗಿದ್ದು ಸಂಪೂರ್ಣ ಹಾನಿ ಆಗಿದೆ.ಉಪ್ಪುಂದ,ಅಳ್ವೆಕೋಡಿ,ಕೋಡೇರಿ […]

ನಿವೃತ್ತ ಮುಖ್ಯೋಪಾಧ್ಯಾಯಿನಿ ಜ್ಯೋತಿ.ವಿ ಐತಾಳ್‍ಗೆ ಸನ್ಮಾನ

ಕುಂದಾಪುರ:ಶಿಕ್ಷಕಿಯಾಗಿ 36 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ,ಸರಕಾರಿ ಹಿರಿಯ ಪ್ರಾಥಮಿಕ ಮೊವಾಡಿ ಶಾಲೆಯ ಮುಖ್ಯೋಪಾಧ್ಯಾಯರಾದ ಜ್ಯೋತಿ ವಿ ಐತಾಳ್ ಅವರನ್ನು ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಶಿಕ್ಷಕವೃಂದವರು ಉಪಸ್ಥಿತರಿದ್ದರು.

You cannot copy content of this page