ಮತ್ಸ್ಯ ಸಂಪತ್ತು ಸಂವೃದ್ಧಿಗಾಗಿ ಸಮುದ್ರ ಪೂಜೆ

ಕುಂದಾಪುರ:ಪರ್ಸಿನ್ ಬೋಟ್,ತ್ರಿಸೆವೆಂಟಿ ಬೋಟ್ ಹಾಗೂ ಟ್ರಾಲರ್ ಬೋಟ್‍ಗಳ ಸಂಘದ ವತಿಯಿಂದ ಸಮುದ್ರಪೂಜೆ ಬುಧವಾರ ಗಂಗೊಳ್ಳಿಯಲ್ಲಿ ನಡೆಯಿತು.ಮತ್ಸ್ಯ ಸಂಪತ್ತು ವೃದ್ಧಿಗಾಗಿ ಹಾಗೂ ಮೀನುಗಾರಿಕೆಗೆ ಯಾವುದೆ ರೀತಿ ಅಡ್ಡಿ ಆತಂಕಗಳು ಎದುರಾಗದಿರಲಿ ಎಂದು ಸಮುದ್ರರಾಜನಿಗೆ ಹಾಲು,ಸೀಯಾಳ,ಫಲಪುಷ್ಪವನ್ನು ಅರ್ಪಿಸಿ ಮೀನುಗಾರರು ಪ್ರಾರ್ಥನೆಯನ್ನು ಸಲ್ಲಿಸಿದರು.ಪರ್ಸಿನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಪ್ರಭಾಕರ ಕುಂದರ್, ತ್ರಿಸೆವೆಂಟಿ ಬೋಟ್ ಸಂಘದ ಅಧ್ಯಕ್ಷ ಸೌಪರ್ಣಿಕಾ ಬಸವ ಖಾರ್ವಿ,ಟ್ರಾಲ್‍ಬೋಟ್ ಸಂಘದ ಅಧ್ಯಕ್ಷ ಗಣೇಶ್ ಖಾರ್ವಿ,ಮೀನುಗಾರರ ಮುಖಂಡರು,ಮೀನುಗಾರರು ಉಪಸ್ಥಿತರಿದ್ದರು.ಅರ್ಚಕ ವೇದ ಮೂರ್ತಿ ವಿಟ್ಠಲ್‍ದಾಸ್ ಭಟ್ ಹಾಗೂ ಅಜಿತ್ ಭಟ್ ಧಾರ್ಮಿಕ […]

ಕಾರವಾರ:ಮುರಿದು ಬಿದ್ದ ಕಾಳಿ ಸೇತುವೆ,ಮುಂದುವರೆದ ಸೇತುವೆ ದುರ್ಘಟನೆ

ಕಾರವಾರ:ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಾರವಾರ ಮತ್ತು ಗೋವಾಕ್ಕೆ ಸಂಪರ್ಕಿಸುವ ಸುಮಾರು 40 ವರ್ಷಕ್ಕೂ ಹಳೆಯದಾದ ಕಾಳಿ ಸೇತುವೆ ಮಂಗಳವಾರ ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಏಕಾಏಕಿ ಕುಸಿದು ಬಿದ್ದಿದೆ.ದೇಶಾದ್ಯಂತ ಸೇತುವೆ ಮುರಿದು ಬೀಳುವ ದುರ್ಘಟನೆ ಮುಂದುವರೆದಿದ್ದು ಜನರು ಆತಂಕಿತರಾಗಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕೋಡಿಭಾಗ್ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೃಹತ್ ಸೇತುವೆ ಯಾವುದೆ ರೀತಿಯ ಮುನ್ಸೂಚನೆ ಸಿಗದೆ ಇರುವ ರೀತಿಯಲ್ಲಿ ನದಿಗೆ ರಾತ್ರೋರಾತ್ರಿ ಉರುಳಿ ಬಿದ್ದಿದೆ.ಈ ವೇಳೆ ಸೇತುವೆ ಮೇಲೆ ಸಾಗುತ್ತಿದ್ದ […]

ಮಂಗಳೂರು:ಕುಕ್ಕಿಲದಲ್ಲಿ ಗುಡ್ಡೆ ಕುಸಿತ ಎರಡು ಮನೆಗಳಿಗೆ ಹಾನಿ

ಮಂಗಳೂರು:ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ಎಂಬಲ್ಲಿ ಗುಡ್ಡ ಕುಸಿದು ಎರಡು ಮನೆಗಳಿಗೆ ಭಾಗಶಃ: ಹಾನಿಯಾಗಿದೆ. ಮನೆಯವರೆಲ್ಲ ಅದೃಷ್ಟವಶಾತ್ ಪಾರಾಗಿದ್ದಾರೆ.‌ಕುಕ್ಕಿಲ ನಿವಾಸಿ ಕಟ್ಟಪುಣಿ ಅಬ್ದುಲ್ಲ ಹಾಜಿಯವರ ಮನೆ ಬಳಿಯ ಗುಡ್ಡ ಕುಸಿದು ಬಿದ್ದಿದೆ. ಅದೇ ರೀತಿ ಅಬ್ದುಲ್ ರಹಿಮಾನ್ ಎಂಬವರ ಮನೆ ಹಿಂಬದಿಯ ಎತ್ತರದ ಗುಡ್ಡ ಕುಸಿದು ಭಾರಿ ಪ್ರಮಾಣದಲ್ಲಿ ಮಣ್ಣು ಬಿದ್ದಿದೆ.ದುರಂತದ ಸಂದರ್ಭದಲ್ಲಿ ಶಬ್ದ ಕೇಳಿಸಿಕೊಂಡ ಮನೆಯವರೆಲ್ಲ ಹೊರಗಡೆ ಓಡಿದ್ದರಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

You cannot copy content of this page