ಮತ್ಸ್ಯ ಸಂಪತ್ತು ಸಂವೃದ್ಧಿಗಾಗಿ ಸಮುದ್ರ ಪೂಜೆ
ಕುಂದಾಪುರ:ಪರ್ಸಿನ್ ಬೋಟ್,ತ್ರಿಸೆವೆಂಟಿ ಬೋಟ್ ಹಾಗೂ ಟ್ರಾಲರ್ ಬೋಟ್ಗಳ ಸಂಘದ ವತಿಯಿಂದ ಸಮುದ್ರಪೂಜೆ ಬುಧವಾರ ಗಂಗೊಳ್ಳಿಯಲ್ಲಿ ನಡೆಯಿತು.ಮತ್ಸ್ಯ ಸಂಪತ್ತು ವೃದ್ಧಿಗಾಗಿ ಹಾಗೂ ಮೀನುಗಾರಿಕೆಗೆ ಯಾವುದೆ ರೀತಿ ಅಡ್ಡಿ ಆತಂಕಗಳು ಎದುರಾಗದಿರಲಿ ಎಂದು ಸಮುದ್ರರಾಜನಿಗೆ ಹಾಲು,ಸೀಯಾಳ,ಫಲಪುಷ್ಪವನ್ನು ಅರ್ಪಿಸಿ ಮೀನುಗಾರರು ಪ್ರಾರ್ಥನೆಯನ್ನು ಸಲ್ಲಿಸಿದರು.ಪರ್ಸಿನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಪ್ರಭಾಕರ ಕುಂದರ್, ತ್ರಿಸೆವೆಂಟಿ ಬೋಟ್ ಸಂಘದ ಅಧ್ಯಕ್ಷ ಸೌಪರ್ಣಿಕಾ ಬಸವ ಖಾರ್ವಿ,ಟ್ರಾಲ್ಬೋಟ್ ಸಂಘದ ಅಧ್ಯಕ್ಷ ಗಣೇಶ್ ಖಾರ್ವಿ,ಮೀನುಗಾರರ ಮುಖಂಡರು,ಮೀನುಗಾರರು ಉಪಸ್ಥಿತರಿದ್ದರು.ಅರ್ಚಕ ವೇದ ಮೂರ್ತಿ ವಿಟ್ಠಲ್ದಾಸ್ ಭಟ್ ಹಾಗೂ ಅಜಿತ್ ಭಟ್ ಧಾರ್ಮಿಕ […]