ರಾಜಗೋಪುರ ಪುನರ್ ನವೀಕರಣ,ಕಲಶ ಪ್ರತಿಷ್ಠೆ
ಕುಂದಾಪುರ:ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ರಾಜಗೋಪುರ ಪುನರ್ ನವೀಕರಣ ಮತ್ತು ಕಲಶ ಪ್ರತಿಷ್ಠೆ ಕಾರ್ಯಕ್ರಮ ಕೆಪಿ ಕುಮಾರ ಗುರು ತಂತ್ರಿಗಳು ಮತ್ತು ದೇವಳದ ಅರ್ಚಕರ ನೇತೃತ್ವದಲ್ಲಿ ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ಶುಕ್ರವಾರ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ,ಜೀರ್ಣೋದ್ಧಾರ ಸಮಿತಿ,ಮಹಿಳಾ ಮಂಡಳಿ ಸದಸ್ಯರು,ದೇವಸ್ಥಾನದ ದೈವ ಪಾತ್ರಿಗಳು ಉಪಸ್ಥಿತರಿದ್ದರು.