ರಷ್ಯಾದಲ್ಲಿ ಆಂತರಿಕ ಬಿಕ್ಕಟ್ಟು,ವ್ಯಾಗ್ನರ್ ವಿರುದ್ಧ ಪುಟಿನ್ ಆಕ್ರೋಶ

ಬೆಂಗಳೂರು:ರಷ್ಯಾದಲ್ಲಿ ಬಂಡಾಯವೆದ್ದಿರುವ ಖಾಸಗಿ ಸೇನಾ ಗುಂಪಿನಿಂದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಕ್ರೇನ್ ಮೇಲಿನ ದಾಳಿ ಆರಂಭವಾದ ನಂತರ ರಷ್ಯಾದಲ್ಲಿ ಅತ್ಯಂತ ದೊಡ್ಡ ಆಂತರಿಕ ಬಿಕ್ಕಟ್ಟು ಉಂಟಾಗಿದೆ. ಖಾಸಗಿ ಸೇನಾ ಗುಂಪು (ಮರ್ಸಿನರಿ) ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಅವರು ತಮ್ಮ ಪಡೆಯು 25,000 ಸೈನಿಕರೊಂದಿಗೆ ರಷ್ಯಾದೊಳಗೆ ನುಗ್ಗಿದೆ ಎಂದು ಹೇಳಿಕೊಂಡಿದ್ದಾರೆ.ರಷ್ಯಾ ಸೇನಾ ನಾಯಕತ್ವವನ್ನು ಉರುಳಿಸುವ ಪ್ರಯತ್ನವಾಗಿ ತನ್ನ ಸಶಸ್ತ್ರ ಪಡೆಗಳನ್ನು ಮಾಸ್ಕೋದ ಕಡೆ 1200 ಕಿಮೀ ದೂರದಿಂದ ಕಳುಹಿಸಲಾಗಿದೆ ಎಂದು ಪ್ರಿಗೊಝಿನ್ ಹೇಳಿದ್ದಾರೆ. […]

ಹೆಚ್ಚುವರಿ ಆಧಾರದ ಮೇಲೆ ಹೊಸಾಡು ಶಾಲೆ ದೈಹಿಕ ಶಿಕ್ಷಕರ ವರ್ಗಾವಣೆ:ಶಿಕ್ಷಕರ ನೇಮಕಕ್ಕೆ ಪೋಷಕರ ಆಗ್ರಹ

ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಹೊಸಾಡು ಶಾಲೆಯ ದೈಹಿಕ ಶಿಕ್ಷಣ ಶಿಕ್ಷರನ್ನು ಹೆಚ್ಚುವರಿ ಆಧಾರದ ಮೇಲೆ ಬೇರೆ ಶಾಲೆಗೆಮಾಡಿರುವುದನ್ನು ಖಂಡಿಸಿ,ಶಿಕ್ಷಕರನ್ನು ಮರು ನೇಮಕ ಮಾಡುವಂತೆ ಆಗ್ರಹಿಸಿ ಹೊಸಾಡು ಶಾಲೆಯ ಎಸ್‍ಡಿಎಂಸಿ ಮತ್ತು ಗ್ರಾಮಸ್ಥರ ವತಿಯಿಂದ ಶಿವಮೊಗ್ಗ ಕ್ಷೇತ್ರ ಸಂಸದ ಬಿ.ವೈ.ರಾಘವೇಂದ್ರ ಮತ್ತು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಶುಕ್ರವಾರ ಹೆಮ್ಮಾಡಿಯಲ್ಲಿ ಮನವಿಯನ್ನು ಸಲ್ಲಿಸಲಾಯಿತು.ಸರಕಾರಿ ಹಿರಿಯ ಪ್ರಾಥಮಿಕ ಹೊಸಾಡು ಶಾಲೆಯಲ್ಲಿ 1 ರಿಂದ 8ನೇ ತರಗತಿ ವರೆಗೆ ವಿದ್ಯಾಭ್ಯಾಸವನ್ನು ನೀಡಲಾಗುತ್ತಿದೆ ಪ್ರಸ್ತುತ ಶಾಲೆಯಲ್ಲಿ 55 […]

ಸಂಘದ ಸದಸ್ಯರಿಗೆ ಸಾಮಥ್ರ್ಯ ಅಭಿವೃದ್ಧಿ ತರಬೇತಿ

ಕುಂದಾಪುರ:ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ,ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕುಂದಾಪುರ,ಭದ್ರಮಹಾಕಾಳಿ ಸಂಜೀವಿನಿ ಒಕ್ಕೂಟ ಕಟ್‍ಬೇಲ್ತೂರು ಸಂಘದ ವತಿಯಿಂದ ಗ್ರಾಮ ಮಟ್ಟದ ಒಕ್ಕೂಟ ಕಾರ್ಯಕಾರಿ ಸಮಿತಿ,ವಾರ್ಡ್ ಮಟ್ಟದ ಒಕ್ಕೂಟ ಸಭೆ ಹಾಗೂ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಸಾಮಥ್ರ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಕಟ್‍ಬೇಲ್ತೂರು ಗ್ರಾ.ಪಂ ಸಭಾಂಗಣದಲ್ಲಿ ಬುಧವಾರ ನಡೆಯಿತು.ಒಕ್ಕೂಟದ ಅಧ್ಯಕ್ಷೆ ಶ್ಯಾಮಲ,ತಾಲೂಕು ಒಕ್ಕೂಟದ ಅಧ್ಯಕ್ಷೆ ವಿಜಯ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಎಮ್ ಮತ್ತು ಸದಸ್ಯ ರಾಮ ಶೆಟ್ಟಿ,ಕಾರ್ಯದರ್ಶಿ ಸರೋಜ,ಸಂಪನ್ಮೂಲ ವ್ಯಕ್ತಿ […]

You cannot copy content of this page