ಚಿನ್ನವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಗಂಗೊಳ್ಳಿ ಠಾಣೆ ಸಿಬ್ಬಂದಿ

ಕುಂದಾಪುರ:ಎಸ್‍ಬಿಐ ಬ್ಯಾಂಕ್ ಬಳಿ ಗಂಗೊಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಗಂಗಾಧರ ಪೂಜಾರಿ ಅವರಿಗೆ ಸಿಕ್ಕಿರುವ ಸುಮಾರು 13 ಗ್ರಾಂ ತೂಕವನ್ನು ಹೊಂದಿದ ಅಂದಾಜು ಒಂದೂವರೆ ಲಕ್ಷ ರೂ. ಮೌಲ್ಯದ ಚಿನ್ನವನ್ನು ವಾರೀಸುದಾರರಾದ ಕುಂದಾಪುರ ಚಿಕ್ಕನ್ ಸಾಲ್ ರೋಡ್ ನಿವಾಸಿ ರಾಕೇಶ್ ಬೆರಟ್ಟೊ ಅವರಿಗೆ ಮರಳಿಸುವುದರ ಮುಖೇನ ಪ್ರಾಮಾಣಿಕತೆ ಮೆರೆದಿದ್ದಾರೆ.ಗಂಗೊಳ್ಳಿ ಠಾಣೆ ಪಿಎಸ್‍ಐ ಪವನ್ ನಾಯ್ಕ್ ಹಸ್ತಾಂತರ ಮಾಡಿದರು.

ಬೈಕ್ ಗೆ ಕಡವೆ ಡಿಕ್ಕಿ:ವ್ಯಕ್ತಿ ಗಂಭೀರ

ಕುಂದಾಪುರ:ಚಲಿಸುತ್ತಿದ್ದ ಬೈಕ್ ಗೆ ಕಡವೆ ಡಿಕ್ಕಿ ಹೊಡೆದ ಘಟನೆ ಕಮಲಶಿಲೆ ಎಂಬಲ್ಲಿ ಶನಿವಾರ ನಡೆದಿದೆ.ಅಪಘಾತದ ಹೊಡೆತಕ್ಕೆ ಕಡವೆ ಸ್ಥಳದಲ್ಲಿ ಮೃತಪಟ್ಟಿದೆ.ಬೈಕ್ ಸವಾರನಿಗೆ ಗಂಭೀರ ಸ್ವರೂಪದ ಗಾಯವಾಗಿದೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ಇಳರಾಜ ವಜ್ರ ಕಿರೀಟ ಸಮರ್ಪಣೆ

ಕುಂದಾಪುರ:ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಿ ಪರಮ ಭಕ್ತರಾದ ಸಂಗೀತ ನಿರ್ದೇಶಕ ಇಳಯ ರಾಜ ಅವರು ಶ್ರೀ ಮೂಕಾಂಬಿಕಾ ದೇವಿಗೆ ವಜ್ರ ಸಹಿತ ಆಭರಣಗಳು ಹಾಗೂ ವೀರಭದ್ರ ಸ್ವಾಮಿಗೆ ರಜತ ಕಿರೀಟ ಸಹಿತ ಖಡ್ಗವನ್ನು ಬುಧವಾರ ಸಮರ್ಪಿಸಿದ್ದಾರೆ.ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ದೇವಿಗೆ ವಜ್ರ ಕಿರೀಟವನ್ನು ಸಮರ್ಪಣೆ ಮಾಡಲಾಯಿತು.

You cannot copy content of this page